ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮಿನಿ ವಿಧಾನಸೌಧದ ಹಿಂದೆ ಆಧಾರ್ ಕಾರ್ಡ್ಸ್ ಹಾಗೂ ಭಾವಚಿತ್ರಗಳನ್ನು ಬಿಸಾಡಿರುವುದರಿಂದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಸಾರ್ವಜನಿಕರ ದಾಖಲೆಗಳನ್ನು ಸ್ವೀಕರಿಸಿ ನಂತರ ಬಿಸಾಡಿದ್ದು, ಈ ದಾಖಲೆಗಳು ರಸ್ತೆಯಲ್ಲಿರುವುದನ್ನು ನೋಡಿ ಜನರು ಆತಂಕಗೊಂಡಿದ್ದಾರೆ. ಅನಾಥವಾಗಿ ಬಿದ್ದಿರುವ ಸಾರ್ವಜನಿಕರ ದಾಖಲೆಗಳನ್ನು ಸಂಗ್ರಹಿಸಿದ್ದು ಯಾರು..? ಇವನ್ನು ಬಿಸಾಡಿರುವುದಕ್ಕೆ ಕಾರಣ ಏನು..? ಎಂಬುದು ತಿಳಿದು ಬಂದಿಲ್ಲ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಸಾರ್ವಜನಿಕರು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.
ಆಧಾರ್ ಕಾರ್ಡ್ಗಳನ್ನು ಹೊಸದಾಗಿ ಮಾಡಿಸಲು ಅಥವಾ ಅಪ್ಡೇಟ್ ಮಾಡಿಸಲು ಆಧಾರ್ ಕೇಂದ್ರಗಳತ್ತ ಎರಡು ದಿನ ಅಲೆಯಬೇಕು. ಅಲ್ಲದೇ ಮತ್ತೆ ಆಧಾರ್ಕಾರ್ಡ್ ಪಡೆಯಲು ಒಂದು ವಾರ ಕಾಲ ಕಾಯಬೇಕು. ವ್ಯವಸ್ಥೆ ಹೀಗಿರುವಾಗ ರಾಶಿ ರಾಶಿ ಆಧಾರ್ ಕಾರ್ಡ್ಸ್ಅನ್ನು ಹೀಗೆ ಬಿಸಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.