ETV Bharat / state

ಆರ್ಥಿಕ ಪುನಶ್ಚೇತನಕ್ಕೆ 'ಆತ್ಮನಿರ್ಭರ್ ಭಾರತ​​' ಯೋಜನೆ ಸಂಜೀವಿನಿ

author img

By

Published : Jul 13, 2020, 3:48 PM IST

ಸಹಕಾರಿ ಬ್ಯಾಂಕುಗಳು ಪುನಶ್ಚೇತನ ಮಾಡಲು 30 ಸಾವಿರ ಕೋಟಿಯನ್ನು ಕೇಂದ್ರ ನೀಡಿದೆ. ಇದರಿಂದ ಸಣ್ಣ ಸಹಕಾರಿ ಬ್ಯಾಂಕ್‌ಗಳಿಗೆ ಉತ್ತೇಜನ ಸಿಕ್ಕಿದೆ. ಈಶಾನ್ಯ‌ ರಾಜ್ಯಗಳ ವಿದ್ಯುತೀಕರಣ ಕೇಂದ್ರದ ಕೊಡುಗೆ ದೊಡ್ಡದು. ‌ 2023 ರೊಳಗೆ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ..

vijay-kumar
ಆರ್ಥಿಕ ಪುನಶ್ಚೇತನಕ್ಕೆ 'ಆತ್ಮನಿರ್ಭರ್​​' ಯೋಜನೆ

ಮಂಡ್ಯ : ದೇಶದ ಆರ್ಥಿಕ ಪುನಶ್ಚೇತನಕ್ಕೆ ಆತ್ಮನಿರ್ಭರ್​ ಭಾರತ್​ ಅಭಿಯಾನ ಸಂಜೀವಿನಿ ಇದ್ದಂತೆ ಇದನ್ನು ಯಶಸ್ವಿಗೊಳಿಸಲು ಜಿಲ್ಲಾ ಬಿಜೆಪಿ ಮುಖಂಡರು ಕಾರ್ಯಕರ್ತರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.

ಕಾರ್ಮಿಕರ ಹಿತ ರಕ್ಷಣೆಗಾಗಿ ಕೇಂದ್ರ ಈ ಯೋಜನೆ ಜಾರಿಗೊಳಿಸಿದೆ. ಎಲ್ಲರಿಗೂ ವಸತಿ ಹಾಗೂ ಆಹಾರ ಪೂರೈಕೆಗೆ ಅವಕಾಶ ನೀಡಲಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೇ ಮಧ್ಯಮ ಹಾಗೂ ಸಣ್ಣ ಉದ್ಯಮಗಳಿಗೆ ಒಂದು ಕೋಟಿ ಸಾಲ ನೀಡಲಾಗುತ್ತಿದೆ. 23 ಸಾವಿರ ಮಂದಿಗೆ ಯೋಜನೆಯ‌ ಉಪಯೋಗ ಸಿಕ್ಕಿದೆ ಎಂದರು.

ಸಹಕಾರಿ ಬ್ಯಾಂಕುಗಳು ಪುನಶ್ಚೇತನ ಮಾಡಲು 30 ಸಾವಿರ ಕೋಟಿಯನ್ನು ಕೇಂದ್ರ ನೀಡಿದೆ. ಇದರಿಂದ ಸಣ್ಣ ಸಹಕಾರಿ ಬ್ಯಾಂಕ್‌ಗಳಿಗೆ ಉತ್ತೇಜನ ಸಿಕ್ಕಿದೆ. ಈಶಾನ್ಯ‌ ರಾಜ್ಯಗಳ ವಿದ್ಯುತೀಕರಣ ಕೇಂದ್ರದ ಕೊಡುಗೆ ದೊಡ್ಡದು. ‌ 2023 ರೊಳಗೆ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದರು.

ರಾಜ್ಯಕ್ಕೆ 6,100 ಕೋಟಿ ನೀಡಲಾಗಿದೆ. ಈ ಹಣದಲ್ಲಿ ದೊಡ್ಡ ಕೋವಿಡ್-19 ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಉಸ್ತುವಾರಿಗಾಗಿ ಸಚಿವರನ್ನು ನೇಮಕ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣ ಜೊತೆಗೆ ಆರ್ಥಿಕ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳು ಎಂದರು.

ಪಿಎಂ ಕೇರ್ಸ್​ಗೆ ದೇಣಿಗೆ ಸಂಗ್ರಹ : ಜಿಲ್ಲೆಯಿಂದ ಪಿಎಂ ಕೇರ್ಸ್​ಗೆ ಸುಮಾರು‌ 6.50 ಕೋಟಿ ರೂಪಾಯಿ ಸಂಗ್ರಹ ಮಾಡಿ ನೀಡಲಾಗಿದೆ. ಜೊತೆಗೆ ಬಡವರಿಗೂ ಆಹಾರ ಪದಾರ್ಥಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಮಂಡ್ಯ : ದೇಶದ ಆರ್ಥಿಕ ಪುನಶ್ಚೇತನಕ್ಕೆ ಆತ್ಮನಿರ್ಭರ್​ ಭಾರತ್​ ಅಭಿಯಾನ ಸಂಜೀವಿನಿ ಇದ್ದಂತೆ ಇದನ್ನು ಯಶಸ್ವಿಗೊಳಿಸಲು ಜಿಲ್ಲಾ ಬಿಜೆಪಿ ಮುಖಂಡರು ಕಾರ್ಯಕರ್ತರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು.

ಕಾರ್ಮಿಕರ ಹಿತ ರಕ್ಷಣೆಗಾಗಿ ಕೇಂದ್ರ ಈ ಯೋಜನೆ ಜಾರಿಗೊಳಿಸಿದೆ. ಎಲ್ಲರಿಗೂ ವಸತಿ ಹಾಗೂ ಆಹಾರ ಪೂರೈಕೆಗೆ ಅವಕಾಶ ನೀಡಲಾಗಿದೆ. ಯಾವುದೇ ಗ್ಯಾರಂಟಿ ಇಲ್ಲದೇ ಮಧ್ಯಮ ಹಾಗೂ ಸಣ್ಣ ಉದ್ಯಮಗಳಿಗೆ ಒಂದು ಕೋಟಿ ಸಾಲ ನೀಡಲಾಗುತ್ತಿದೆ. 23 ಸಾವಿರ ಮಂದಿಗೆ ಯೋಜನೆಯ‌ ಉಪಯೋಗ ಸಿಕ್ಕಿದೆ ಎಂದರು.

ಸಹಕಾರಿ ಬ್ಯಾಂಕುಗಳು ಪುನಶ್ಚೇತನ ಮಾಡಲು 30 ಸಾವಿರ ಕೋಟಿಯನ್ನು ಕೇಂದ್ರ ನೀಡಿದೆ. ಇದರಿಂದ ಸಣ್ಣ ಸಹಕಾರಿ ಬ್ಯಾಂಕ್‌ಗಳಿಗೆ ಉತ್ತೇಜನ ಸಿಕ್ಕಿದೆ. ಈಶಾನ್ಯ‌ ರಾಜ್ಯಗಳ ವಿದ್ಯುತೀಕರಣ ಕೇಂದ್ರದ ಕೊಡುಗೆ ದೊಡ್ಡದು. ‌ 2023 ರೊಳಗೆ ದೇಶ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದರು.

ರಾಜ್ಯಕ್ಕೆ 6,100 ಕೋಟಿ ನೀಡಲಾಗಿದೆ. ಈ ಹಣದಲ್ಲಿ ದೊಡ್ಡ ಕೋವಿಡ್-19 ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚುತ್ತಿದೆ. ಉಸ್ತುವಾರಿಗಾಗಿ ಸಚಿವರನ್ನು ನೇಮಕ ಮಾಡಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣ ಜೊತೆಗೆ ಆರ್ಥಿಕ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳು ಎಂದರು.

ಪಿಎಂ ಕೇರ್ಸ್​ಗೆ ದೇಣಿಗೆ ಸಂಗ್ರಹ : ಜಿಲ್ಲೆಯಿಂದ ಪಿಎಂ ಕೇರ್ಸ್​ಗೆ ಸುಮಾರು‌ 6.50 ಕೋಟಿ ರೂಪಾಯಿ ಸಂಗ್ರಹ ಮಾಡಿ ನೀಡಲಾಗಿದೆ. ಜೊತೆಗೆ ಬಡವರಿಗೂ ಆಹಾರ ಪದಾರ್ಥಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.