ಮಂಡ್ಯ: ದಾನಗಳಲ್ಲೇ ಶ್ರೇಷ್ಠ ದಾನ ನೇತ್ರದಾನ. ವೃದ್ಧೆಯೊಬ್ಬರು ಸಾವಿಗೀಡಾದ ನಂತರ ಕುಟುಂಬದ ಸದಸ್ಯರು ಆಕೆಯ ಕಣ್ಣನ್ನು ದಾನ ಮಾಡೋ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
![eyes](https://etvbharatimages.akamaized.net/etvbharat/prod-images/kn-mnd-02-10-eeydonet-7202530_10062019164622_1006f_1560165382_829.jpg)
ನಗರದ ಸ್ವರ್ಣಸಂದ್ರದ ಲಲಿತಮ್ಮ(88) ಸಾವಿಗೀಡಾದ ನಂತರ ಆಕೆಯ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಈ ಮೂಲಕ ಲಲಿತಮ್ಮ ಪುತ್ರ ಕುಮಾರ್ ನಾರಾಯಣ್ ಹಾಗೂ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗುವ ನಿರ್ಧಾರ ಕೈಗೊಂಡಿದ್ದಾರೆ.
![eyes](https://etvbharatimages.akamaized.net/etvbharat/prod-images/kn-mnd-02-10-eeydonet-7202530_10062019164622_1006f_1560165382_327.jpg)
ಮೊದ ಮೊದಲು ಕುಟುಂಬದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ಎಲ್ಲರನ್ನೂ ಒಪ್ಪಿಸಿ ಕಣ್ಣುಗಳನ್ನು ದಾನ ಮಾಡಿದ್ದಾರೆ. ಎರಡೂ ಕಣ್ಣುಗಳನ್ನು ವೈದ್ಯರು ಸರಿಯಾದ ಸಮಯಕ್ಕೆ ವಶಕ್ಕೆ ಪಡೆದಿದ್ದಾರೆ. ಕುಟುಂಬದ ಈ ಸಾಮಾಜಿಕ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.