ಮಂಡ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಮಂಡ್ಯದ ಕೆರಗೋಡು ಪೊಲೀಸ್ ಠಾಣೆಯ ಎಎಸ್ಐ ನಟರಾಜು ಮೃತಪಟ್ಟಿದ್ದಾರೆ.
![ASI Nataraju died, ASI Nataraju died in Mandya hospital, ASI Nataraju died news, Mandya news, Mandya crime news, ಎಎಸ್ಐ ನಟರಾಜು ಸಾವು, ಮಂಡ್ಯ ಆಸ್ಪತ್ರೆಯಲ್ಲಿ ಎಎಸ್ಐ ನಟರಾಜು ಸಾವು, ಎಎಸ್ಐ ನಟರಾಜು ಸಾವು ಸುದ್ದಿ, ಮಂಡ್ಯ ಸುದ್ದಿ, ಮಂಡ್ಯ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-mnd-01-04-police-death-photo-ka10026_01022021132803_0102f_1612166283_244.jpg)
ಇತ್ತೀಚೆಗೆ ಕರ್ತವ್ಯದಲ್ಲಿ ಇದ್ದ ವೇಳೆ ಬೈಕ್ನಿಂದ ಬಿದ್ದು ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಧಿಕಾರಿ ಸಾವನ್ನಪ್ಪಿದ್ದಾರೆ.
ಮೃತ ಅಧಿಕಾರಿ ಸಾವಿಗೆ ಸಹದ್ಯೋಗಿಗಳು ಕಂಬನಿ ಮಿಡಿದಿದ್ದು, ಪೊಲೀಸ್ ಇಲಾಖೆ ಮೃತ ಅಧಿಕಾರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಿತು.