ETV Bharat / state

ವರ್ಷ ಕಳೆದ್ರೂ ಆರಂಭವಾಗದ ಕೆಳ ಸೇತುವೆ ನಿರ್ಮಾಣ: ದಿನವೂ ಹರಸಾಹಸ ಪಟ್ಟು ರೈಲೈ ಹಳಿ ದಾಟುವ ಜನ

author img

By

Published : Mar 23, 2021, 2:22 PM IST

ಕೊಪ್ಪಳ ನಗರದ ಅನೇಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಹಳಿ ಬಳಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ವರ್ಷ ಕಳೆದರೂ ಆರಂಭವಾಗದೇ ನನೆಗುದಿಗೆ ಬಿದ್ದಿದೆ. ಹೀಗಾಗಿ ಜನರು ಪ್ರತಿದಿನ ರೈಲ್ವೆ ಹಳಿ ದಾಟಿಕೊಂಡೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

railway bridge Construction not yet started from one year
ನೆನೆಗುದಿಗೆ ಬಿದ್ದ ರೈಲ್ವೆ ಕಾಮಗಾರಿ

ಕೊಪ್ಪಳ:ನಗರದ ಕ್ಲಬ್ ರಸ್ತೆ ಮೂಲಕ ಗಣೇಶ ನಗರ ಸೇರಿದಂತೆ ಅನೇಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಹಳಿ ಗೇಟ್​ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ವರ್ಷ ಕಳೆದರೂ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಆ ಭಾಗದ ಜನರು ಪ್ರಯಾಸಪಟ್ಟು ಹಳಿ ದಾಟಬೇಕಾದ ಅನಿವಾರ್ಯತೆ ಮುಂದುವರೆದಿದೆ.

ನನೆಗುದಿಗೆ ಬಿದ್ದ ರೈಲ್ವೆ ಕಾಮಗಾರಿ
ನಗರದ ಸ್ವಾಮಿ ವಿವೇಕಾನಂದ ಶಾಲೆಯ ರಸ್ತೆಯನ್ನು ಓಜಿನಹಳ್ಳಿಗೆ ಸಂಪರ್ಕ ಕಲ್ಪಿಸುವ ಹಳೆಯ ಪ್ರಮುಖ ರಸ್ತೆಯಾಗಿತ್ತು. ಈ ರಸ್ತೆಯ ಮಧ್ಯದಲ್ಲಿ ರೈಲು ಹಳಿ ಇದೆ. ಹಳಿ ದಾಟಿದರೆ ಗಣೇಶನಗರ, ಹುಡ್ಕೋ ಕಾಲೋನಿ, ಕೀರ್ತಿ ಕಾಲೋನಿ ಸೇರಿದಂತೆ ಅನೇಕ ಪ್ರದೇಶಗಳು. ಈ ಎಲ್ಲ ಪ್ರದೇಶದ ಬಹುಪಾಲು ಜನರು ಇದೇ ರಸ್ತೆಯ ಮೂಲಕ ಕೊಪ್ಪಳಕ್ಕೆ ಬರುತ್ತಾರೆ.‌ ಹೀಗಾಗಿ ರೇಲ್ವೆ ಗೇಟ್ ನಂಬರ್ 63 ರಲ್ಲಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಈ ಪ್ರದೇಶದ ಸಾರ್ವಜನಿಕರು ಹೋರಾಟ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದರು.

ಸಾರ್ವಜನಿಕರ ಹೋರಾಟದ ಫಲವಾಗಿ ರೇಲ್ವೆ ಗೇಟ್ ನಂಬರ್ 63 ರಲ್ಲಿ ಸುಮಾರು 4.1 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಕೆಳ ಸೇತುವೆ ನಿರ್ಮಾಣಕ್ಕೆ ಟೆಂಡರ್ ಸಹ ಕರೆದು ಕಳೆದ ವರ್ಷ ಭೂಮಿ ಪೂಜೆ ಸಹ ನೆರವೇರಿಸಲಾಗಿದೆ. ಕೆಳ ಸೇತುವೆಗೆ ಬೇಕಾದ ಪೂರಕ ವಸ್ತುಗಳನ್ನು ತಂದು ಅಲ್ಲಿ ಇರಿಸಲಾಗಿದೆ. ಆದರೆ, ಸೇತುವೆ ಕಾಮಗಾರಿ ಇನ್ನೂ ಸಹ ಪ್ರಾರಂಭವಾಗಿಲ್ಲ.‌

ಕೊರೊನಾ ನೆಪವೊಡ್ಡಿ ಕಾಮಗಾರಿ ನಡೆಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗ ಎಲ್ಲ ಚಟುವಟಿಕೆಗಳು ಶುರುವಾಗಿವೆ. ಆದರೂ ರೈಲ್ವೆ ಗೇಟ್ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಶುರುವಾಗದೇ ಇರುವುದು ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ. ಈ ಭಾಗದಿಂದ ಕೊಪ್ಪಳಕ್ಕೆ ರೈಲ್ವೆ ಹಳಿ ದಾಟಿಕೊಂಡು ಹೋಗಬೇಕು.

ವಿದ್ಯಾರ್ಥಿಗಳು, ವಯಸ್ಸಾದವರು ಪ್ರಯಾಸಪಟ್ಟು ಓಡಾಡಬೇಕಿದೆ.‌ ನಮ್ಮ ಸಮಸ್ಯೆ ಯಾವಾಗ ಬಗೆಹರಿಯುತ್ತದೆಯೋ ಏನೋ ಎನ್ನುತ್ತಾರೆ ಸ್ಥಳೀಯರು. ಭೂಮಿಪೂಜೆ ಮಾಡಿ ವರ್ಷವಾದರೂ ಸಹ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೊಪ್ಪಳ:ನಗರದ ಕ್ಲಬ್ ರಸ್ತೆ ಮೂಲಕ ಗಣೇಶ ನಗರ ಸೇರಿದಂತೆ ಅನೇಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಹಳಿ ಗೇಟ್​ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ವರ್ಷ ಕಳೆದರೂ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಆ ಭಾಗದ ಜನರು ಪ್ರಯಾಸಪಟ್ಟು ಹಳಿ ದಾಟಬೇಕಾದ ಅನಿವಾರ್ಯತೆ ಮುಂದುವರೆದಿದೆ.

ನನೆಗುದಿಗೆ ಬಿದ್ದ ರೈಲ್ವೆ ಕಾಮಗಾರಿ
ನಗರದ ಸ್ವಾಮಿ ವಿವೇಕಾನಂದ ಶಾಲೆಯ ರಸ್ತೆಯನ್ನು ಓಜಿನಹಳ್ಳಿಗೆ ಸಂಪರ್ಕ ಕಲ್ಪಿಸುವ ಹಳೆಯ ಪ್ರಮುಖ ರಸ್ತೆಯಾಗಿತ್ತು. ಈ ರಸ್ತೆಯ ಮಧ್ಯದಲ್ಲಿ ರೈಲು ಹಳಿ ಇದೆ. ಹಳಿ ದಾಟಿದರೆ ಗಣೇಶನಗರ, ಹುಡ್ಕೋ ಕಾಲೋನಿ, ಕೀರ್ತಿ ಕಾಲೋನಿ ಸೇರಿದಂತೆ ಅನೇಕ ಪ್ರದೇಶಗಳು. ಈ ಎಲ್ಲ ಪ್ರದೇಶದ ಬಹುಪಾಲು ಜನರು ಇದೇ ರಸ್ತೆಯ ಮೂಲಕ ಕೊಪ್ಪಳಕ್ಕೆ ಬರುತ್ತಾರೆ.‌ ಹೀಗಾಗಿ ರೇಲ್ವೆ ಗೇಟ್ ನಂಬರ್ 63 ರಲ್ಲಿ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಈ ಪ್ರದೇಶದ ಸಾರ್ವಜನಿಕರು ಹೋರಾಟ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದರು.

ಸಾರ್ವಜನಿಕರ ಹೋರಾಟದ ಫಲವಾಗಿ ರೇಲ್ವೆ ಗೇಟ್ ನಂಬರ್ 63 ರಲ್ಲಿ ಸುಮಾರು 4.1 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಕೆಳ ಸೇತುವೆ ನಿರ್ಮಾಣಕ್ಕೆ ಟೆಂಡರ್ ಸಹ ಕರೆದು ಕಳೆದ ವರ್ಷ ಭೂಮಿ ಪೂಜೆ ಸಹ ನೆರವೇರಿಸಲಾಗಿದೆ. ಕೆಳ ಸೇತುವೆಗೆ ಬೇಕಾದ ಪೂರಕ ವಸ್ತುಗಳನ್ನು ತಂದು ಅಲ್ಲಿ ಇರಿಸಲಾಗಿದೆ. ಆದರೆ, ಸೇತುವೆ ಕಾಮಗಾರಿ ಇನ್ನೂ ಸಹ ಪ್ರಾರಂಭವಾಗಿಲ್ಲ.‌

ಕೊರೊನಾ ನೆಪವೊಡ್ಡಿ ಕಾಮಗಾರಿ ನಡೆಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗ ಎಲ್ಲ ಚಟುವಟಿಕೆಗಳು ಶುರುವಾಗಿವೆ. ಆದರೂ ರೈಲ್ವೆ ಗೇಟ್ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಶುರುವಾಗದೇ ಇರುವುದು ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ. ಈ ಭಾಗದಿಂದ ಕೊಪ್ಪಳಕ್ಕೆ ರೈಲ್ವೆ ಹಳಿ ದಾಟಿಕೊಂಡು ಹೋಗಬೇಕು.

ವಿದ್ಯಾರ್ಥಿಗಳು, ವಯಸ್ಸಾದವರು ಪ್ರಯಾಸಪಟ್ಟು ಓಡಾಡಬೇಕಿದೆ.‌ ನಮ್ಮ ಸಮಸ್ಯೆ ಯಾವಾಗ ಬಗೆಹರಿಯುತ್ತದೆಯೋ ಏನೋ ಎನ್ನುತ್ತಾರೆ ಸ್ಥಳೀಯರು. ಭೂಮಿಪೂಜೆ ಮಾಡಿ ವರ್ಷವಾದರೂ ಸಹ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.