ETV Bharat / state

ಅಕ್ರಮ ತಡೆದ ತಹಶೀಲ್ದಾರ್​ ಎತ್ತಂಗಡಿ.. ಇರಗೊಡಲಿಲ್ಲ ಮರಳು ದಂಧೆಕೋರರು

author img

By

Published : Sep 27, 2020, 7:58 PM IST

ಅಕ್ರಮ ಮರಳಿನ ವಾಹನಗಳ ಮೇಲೆ ಅಥವಾ ಅನಧಿಕೃತ ಚಟುವಟಿಕೆಗಳ ಮೇಲೆ ದಾಳಿ ಮಾಡಿದ ಕೂಡಲೇ ತಹಶೀಲ್ದಾರ್​ಗೆ ಕೆಲ ರಾಜಕೀಯ ಮುಖಂಡರು ಕರೆ ಮಾಡಿ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದರು..

Gangavathi Karatagi Tahsildar Transfer
ಕವಿತಾ ಆರ್

ಗಂಗಾವತಿ : ಕಾರಟಗಿ ತಹಶೀಲ್ದಾರ್ ಆಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ತಮ್ಮ ಕರ್ತವ್ಯದ ಮೂಲಕ ಜನರ ಗೌರವ ಪಡೆದಿದ್ದ ಕವಿತಾ ಆರ್ ಅವರ ದಿಢೀರ್ ವರ್ಗಾವಣೆ ಆಶ್ಚರ್ಯಕ್ಕೆ ಕಾರಣವಾಗಿದೆ.

Gangavathi Karatagi Tahsildar Transfer
ತಹಶೀಲ್ದಾರ್ ವರ್ಗಾವಣೆ

ತಮ್ಮ ಆಡಳಿತ ಅವಧಿಯಲ್ಲಿ ಕವಿತಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರು. ಇದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ಕಾರಟಗಿ ತಾಲೂಕಿನ ನಂದಿಹಳ್ಳಿ, ಕಕ್ಕರಗೋಳ, ನವಲಿ ಭಾಗದಲ್ಲಿ ರಾಜಕಾರಣಿಗಳ ಬೆಂಬಲಿಗರಿಂದ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಯತ್ನಕ್ಕೆ ಕೈಹಾಕಿದ್ದೆ ತಹಶೀಲ್ದಾರ್ ವರ್ಗಾವಣೆಗೆ ಕಾರಣ ಎಂದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಕ್ರಮ ಮರಳಿನ ವಾಹನಗಳ ಮೇಲೆ ಅಥವಾ ಅನಧಿಕೃತ ಚಟುವಟಿಕೆಗಳ ಮೇಲೆ ದಾಳಿ ಮಾಡಿದ ಕೂಡಲೇ ತಹಶೀಲ್ದಾರ್​ಗೆ ಕೆಲ ರಾಜಕೀಯ ಮುಖಂಡರು ಕರೆ ಮಾಡಿ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದರು. ಆದರೆ, ಇದಕ್ಕೆ ಕಿವಿಗೊಡದ ಹಿನ್ನೆಲೆ ವರ್ಗಾವಣೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

ಗಂಗಾವತಿ : ಕಾರಟಗಿ ತಹಶೀಲ್ದಾರ್ ಆಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ತಮ್ಮ ಕರ್ತವ್ಯದ ಮೂಲಕ ಜನರ ಗೌರವ ಪಡೆದಿದ್ದ ಕವಿತಾ ಆರ್ ಅವರ ದಿಢೀರ್ ವರ್ಗಾವಣೆ ಆಶ್ಚರ್ಯಕ್ಕೆ ಕಾರಣವಾಗಿದೆ.

Gangavathi Karatagi Tahsildar Transfer
ತಹಶೀಲ್ದಾರ್ ವರ್ಗಾವಣೆ

ತಮ್ಮ ಆಡಳಿತ ಅವಧಿಯಲ್ಲಿ ಕವಿತಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರು. ಇದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ಕಾರಟಗಿ ತಾಲೂಕಿನ ನಂದಿಹಳ್ಳಿ, ಕಕ್ಕರಗೋಳ, ನವಲಿ ಭಾಗದಲ್ಲಿ ರಾಜಕಾರಣಿಗಳ ಬೆಂಬಲಿಗರಿಂದ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಯತ್ನಕ್ಕೆ ಕೈಹಾಕಿದ್ದೆ ತಹಶೀಲ್ದಾರ್ ವರ್ಗಾವಣೆಗೆ ಕಾರಣ ಎಂದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಕ್ರಮ ಮರಳಿನ ವಾಹನಗಳ ಮೇಲೆ ಅಥವಾ ಅನಧಿಕೃತ ಚಟುವಟಿಕೆಗಳ ಮೇಲೆ ದಾಳಿ ಮಾಡಿದ ಕೂಡಲೇ ತಹಶೀಲ್ದಾರ್​ಗೆ ಕೆಲ ರಾಜಕೀಯ ಮುಖಂಡರು ಕರೆ ಮಾಡಿ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದರು. ಆದರೆ, ಇದಕ್ಕೆ ಕಿವಿಗೊಡದ ಹಿನ್ನೆಲೆ ವರ್ಗಾವಣೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.