ಗಂಗಾವತಿ: ಕೊರೊನಾ ಹಿನ್ನೆಲೆ ಈಗಾಗಲೇ ಮಾರುಕಟ್ಟೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿದ್ದು, ಬಾಳೆಯ ಗಿಡದಿಂದ ಗೊನೆಗಳನ್ನು ಬೇರ್ಪಡಿಸುವ ಕಾರ್ಯವನ್ನು ರೈತರು ಮಾಡುತ್ತಿರುವ ದೃಶ್ಯ ಕಂಡು ಬಂತು.
![Gangavathi](https://etvbharatimages.akamaized.net/etvbharat/prod-images/kn-gvt-04-26-whaler-in-rever-belt-bannacrop-down-to-earth-vis-kac10005_26052020123112_2605f_1590476472_604.jpg)
ತುಂಗಭದ್ರಾ ನದಿ ಪಾತ್ರದಲ್ಲಿ ಬರುವ ಹಲವು ಗ್ರಾಮಗಳಾದ ಆನೆಗೊಂದಿ, ಚಿಕ್ಕಜಂತಕ್ಕಲ್, ಬಸವನದುರ್ಗ, ಕಡೆಬಾಗಿಲು, ಹನುಮನಹಳ್ಳಿ, ರಾಂಪುರ, ಚಿಕ್ಕರಾಂಪುರ, ಮಲ್ಲಾಪುರ ಮೊದಲಾದ ಗ್ರಾಮಗಳಲ್ಲಿ ರೈತರು ಬಾಳೆ ಬೆಳೆಯುತ್ತಾರೆ. ಸುಗಂಧಿ ಬಾಳೆಗೆ ಆನೆಗೊಂದಿ ಪ್ರಸಿದ್ಧಿ ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಾಳೆಗೆ ಹೆಚ್ಚಿನ ಬೇಡಿಕೆ ಕಾಣದ ಹಿನ್ನೆಲೆ ಬಹುತೇಕ ರೈತರು ಏಲಕ್ಕಿ ಬಾಳೆಯ ಮೊರೆ ಹೋಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿದ್ದನ್ನು ಕಂಡು ರೈತರು ಕಂಗಾಲಾಗಿದ್ದಾರೆ.