ETV Bharat / state

ಬಸ್​ಗೆ ಕಲ್ಲು ತೂರಿದ ಆರೋಪ: ಕಲಬುರಗಿಯಲ್ಲಿ ಮೂವರು ಪ್ರತಿಭಟನಾನಿರತ ಚಾಲಕರು ಅರೆಸ್ಟ್​

author img

By

Published : Apr 13, 2021, 2:14 PM IST

ಸೇಡಂ ಡಿಪೋ ಬಸ್ ಚಾಲಕ ವಿಶ್ವನಾಥ್ ಚೌಹಾಣ್​​, ಚಿತ್ತಾಪುರ ಡಿಪೋ ಬಸ್ ಚಾಲಕರಾದ ಬಸವರಾಜ್ ಜಾಧವ್ ಹಾಗೂ ಅಶೋಕ್ ಮೇಲಿನಕೇರಿ ಎಂಬುವರು ಬಸ್ ಮೇಲೆ ಕಲ್ಲು ತೂರಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

Three of the protesters are Arrested in kalaburagi
ಮೂವರು ಪ್ರತಿಭಟನಾನಿರತ ಚಾಲಕರು ಅರೆಸ್ಟ್​

ಕಲಬುರಗಿ: ಸಾರಿಗೆ ನೌಕರರ ಮುಷ್ಕರ ನಡುವೆ ರಸ್ತೆಗಿಳಿದಿದ್ದ ಬಸ್‌ಗಳ ಮೇಲೆ ಮೂವರು ಪ್ರತಿಭಟನಾನಿರತ ಚಾಲಕರು ಕಲ್ಲು ತೂರಿ ಬಸ್ ಜಖಂಗೊಳಿಸಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಹೊರವಲಯದ ಬಲರಾಮ ಚೌಕ್ ಬಳಿ ನಡೆದಿದೆ.

ಬಸ್​ಗೆ ಕಲ್ಲು ತೂರಿದ ಆರೋಪ

ಕಲಬುರಗಿ ಡಿಪೋಗೆ ಸೇರಿದ ಬಸ್ ಕಲಬುರಗಿಯಿಂದ - ವಾಡಿ ಮಾರ್ಗವಾಗಿ ಯಾದಗಿರಕ್ಕೆ ಹೊರಟಿದ್ದ ವೇಳೆ ಕಲ್ಲು ತೂರಾಟ ನಡೆಸಿದ್ದರು. ಸೇಡಂ ಡಿಪೋ ಬಸ್ ಚಾಲಕ ವಿಶ್ವನಾಥ್ ಚೌಹಾಣ್​, ಚಿತ್ತಾಪುರ ಡಿಪೋ ಬಸ್ ಚಾಲಕರಾದ ಬಸವರಾಜ್ ಜಾಧವ್ ಹಾಗೂ ಅಶೋಕ್ ಮೇಲಿನಕೇರಿ ಎಂಬುವರು ಬಸ್ ಮೇಲೆ ಕಲ್ಲು ತೂರಿದ ಆರೋಪಿಗಳು. ಅವರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕರುವಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ದುರಂತ: ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯ!

ಕಲ್ಲು ತೂರಿದ ಪರಿಣಾಮ ಬಸ್ ಮುಂಭಾಗದ ಗ್ಲಾಸ್ ಪುಡಿಯಾಗಿ ಚಾಲಕನ ಕೈಗೆ ತಗುಲಿತ್ತು. ಇದರಿಂದ ಈ ಬಸ್​ನ ಡ್ರೈವರ್​ ಸಹ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಸಾರಿಗೆ ನೌಕರರ ಮುಷ್ಕರ ನಡುವೆ ರಸ್ತೆಗಿಳಿದಿದ್ದ ಬಸ್‌ಗಳ ಮೇಲೆ ಮೂವರು ಪ್ರತಿಭಟನಾನಿರತ ಚಾಲಕರು ಕಲ್ಲು ತೂರಿ ಬಸ್ ಜಖಂಗೊಳಿಸಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಹೊರವಲಯದ ಬಲರಾಮ ಚೌಕ್ ಬಳಿ ನಡೆದಿದೆ.

ಬಸ್​ಗೆ ಕಲ್ಲು ತೂರಿದ ಆರೋಪ

ಕಲಬುರಗಿ ಡಿಪೋಗೆ ಸೇರಿದ ಬಸ್ ಕಲಬುರಗಿಯಿಂದ - ವಾಡಿ ಮಾರ್ಗವಾಗಿ ಯಾದಗಿರಕ್ಕೆ ಹೊರಟಿದ್ದ ವೇಳೆ ಕಲ್ಲು ತೂರಾಟ ನಡೆಸಿದ್ದರು. ಸೇಡಂ ಡಿಪೋ ಬಸ್ ಚಾಲಕ ವಿಶ್ವನಾಥ್ ಚೌಹಾಣ್​, ಚಿತ್ತಾಪುರ ಡಿಪೋ ಬಸ್ ಚಾಲಕರಾದ ಬಸವರಾಜ್ ಜಾಧವ್ ಹಾಗೂ ಅಶೋಕ್ ಮೇಲಿನಕೇರಿ ಎಂಬುವರು ಬಸ್ ಮೇಲೆ ಕಲ್ಲು ತೂರಿದ ಆರೋಪಿಗಳು. ಅವರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕರುವಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ದುರಂತ: ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯ!

ಕಲ್ಲು ತೂರಿದ ಪರಿಣಾಮ ಬಸ್ ಮುಂಭಾಗದ ಗ್ಲಾಸ್ ಪುಡಿಯಾಗಿ ಚಾಲಕನ ಕೈಗೆ ತಗುಲಿತ್ತು. ಇದರಿಂದ ಈ ಬಸ್​ನ ಡ್ರೈವರ್​ ಸಹ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.