ETV Bharat / state

ವಿಧವೆಗೆ ಬಾಳುಕೊಟ್ಟು ‘ಆಶಾ’ ‘ಕಿರಣ’ವಾಗಿದ್ದ ಯೋಧ ಈಗ ಪೊಲೀಸರ ಅತಿಥಿ.. ಆಕೆಗೆ ಗಂಡನನ್ನೇ ತ್ಯಾಗ ಮಾಡಿದ 2ನೇ ಪತ್ನಿ! - ಯೋಧ ಕಿರಣ್

ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಇಬ್ಬರು ಮಹಿಳೆಯರಿಗೆ ವ್ಯಕ್ತಿಯೊಬ್ಬ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಿರಣ್
ಕಿರಣ್
author img

By

Published : Nov 10, 2022, 10:22 PM IST

Updated : Nov 12, 2022, 10:00 AM IST

ಹಾಸನ: ಈಕೆಯ ಗಂಡ ಸಾವಿಗೀಡಾಗಿ 5 ವರ್ಷಗಳು ಕಳೆದಿದೆ. ಕಳೆದ ಮೂರು ವರ್ಷದ ಹಿಂದೆ ಈ ಮಹಾಶಯ ನಾನು ನಿನಗೆ ಬಾಳುಕೊಡುವುದಾಗಿ ನಂಬಿಸಿ ಮನೆಯಲ್ಲಿಯೇ ತಾಳಿಕಟ್ಟಿ 2 ವರ್ಷ ಸಂಸಾರ ಮಾಡಿದ್ದ. ಆದರೆ ಇವತ್ತು ಮತ್ತೊಂದು ಮದುವೆಯಾಗಿ ಆಕೆಗೂ ಮೋಸ ಮಾಡಿದ್ದು, ವಿಚಾರ ತಿಳಿದ ಮೊದಲ ಹೆಂಡತಿ ಮದುವೆ ನಿಲ್ಲಿಸುವಷ್ಟರಲ್ಲಿ ಮತ್ತೊಬ್ಬಳಿಗೆ ತಾಳಿಕಟ್ಟಿದ ಹಿನ್ನೆಲೆಯಲ್ಲಿ ಈಗೆ ಇಬ್ಬರ ಮಹಿಳೆಯರ ಪಾಡು ಡೋಲಾಯಮಾನವಾಗಿದೆ. ಇಂತಹ ಒಂದು ಘಟನೆ ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ ನಡೆದಿದೆ.

ಕಿರಣ್ ಎಂಬಾತನೇ ಈ ಕೃತ್ಯ ಎಸಗಿರುವ ಯೋಧ. ನಗರದ ಆಶಾ ಎಂಬಾಕೆ ಖಾಸಗಿ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಪರಿಚಯವಾದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಒಬ್ಬರಿಗೊಬ್ಬರು ನಾಲ್ಕುಗೊಡೆಯ ನಡುವೆಯೇ ಮದುವೆಯಾಗಿದ್ದರಂತೆ. ಇದು ಕಿರಣ್ ಪೋಷಕರಿಗೂ ತಿಳಿದಿತ್ತು ಎನ್ನಲಾಗಿದೆ. ದೇಶ ಸೇವೆಯಲ್ಲಿ ಯೋಧನಾಗಿರುವ ಈತ ಕೆಲಸದ ನಿಮಿತ್ತ ಹೋಗಿದ್ದು, ಕಿರಣ್ ಮದುವೆ ಆಗಿರುವ ಬಗ್ಗೆ ಮೊದಲೇ ಮನೆಯಲ್ಲಿ ತಿಳಿದಿತ್ತು ಎಂದು ಹೇಳಲಾಗಿದೆ.

ವಿಧವೆಗೆ ಬಾಳುಕೊಟ್ಟು ಆಶಾ ಕಿರಣವಾಗಿದ್ದ ಕಿರಣ್ ಈಗ ಪೊಲೀಸರ ಅತಿಥಿ

ಹಣಕಾಸಿನ ವಿಚಾರವಾಗಿಯೂ ಈ ಹಿಂದಿನಿಂದಲೂ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ನವವಿವಾಹಿತ ಯೋಧ ಕಿರಣ್ ಮತ್ತು ಆಶಾರನ್ನು ಪೊಲೀಸರು ತನಿಖೆ ಮಾಡಲು ಠಾಣೆ ಕರೆದೊಯ್ದಿದ್ದಾರೆ. ಜೊತೆಗೆ ಪೋಷಕರನ್ನು ಕೂಡಾ ವಶಕ್ಕೆ ಪಡೆದು ವಿಚಾರಿಸುತ್ತಿದ್ದು, ಬಡಾವಣೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆಸಿದ್ದಾರೆ.

ಒಂದು ಕಡೆ ವಿಧವೆ ಆಶಾಗೆ ಬಾಳುಕೊಟ್ಟು ಆಶಾ-ಕಿರಣವಾಗಬೇಕಿದ್ದ ಕಿರಣ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆದ್ರೆ ಎರಡನೇ ಮದುವೆಯಾದ ಹುಡುಗಿ ತನ್ನ ಗಂಡನನ್ನು ಮೊದಲ ಹೆಂಡತಿಗೆ ಬಿಟ್ಟುಕೊಡುವ ಮೂಲಕ ತ್ಯಾಗಮಯಿಯಾಗಿದ್ದಾಳೆ.

ಓದಿ: ಪ್ರಕರಣ ಪತ್ತೆ ಹಚ್ಚಬೇಕಾದ ಪೊಲೀಸರೇ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ: ಹೈಕೋರ್ಟ್ ಅಸಮಾಧಾನ

ಹಾಸನ: ಈಕೆಯ ಗಂಡ ಸಾವಿಗೀಡಾಗಿ 5 ವರ್ಷಗಳು ಕಳೆದಿದೆ. ಕಳೆದ ಮೂರು ವರ್ಷದ ಹಿಂದೆ ಈ ಮಹಾಶಯ ನಾನು ನಿನಗೆ ಬಾಳುಕೊಡುವುದಾಗಿ ನಂಬಿಸಿ ಮನೆಯಲ್ಲಿಯೇ ತಾಳಿಕಟ್ಟಿ 2 ವರ್ಷ ಸಂಸಾರ ಮಾಡಿದ್ದ. ಆದರೆ ಇವತ್ತು ಮತ್ತೊಂದು ಮದುವೆಯಾಗಿ ಆಕೆಗೂ ಮೋಸ ಮಾಡಿದ್ದು, ವಿಚಾರ ತಿಳಿದ ಮೊದಲ ಹೆಂಡತಿ ಮದುವೆ ನಿಲ್ಲಿಸುವಷ್ಟರಲ್ಲಿ ಮತ್ತೊಬ್ಬಳಿಗೆ ತಾಳಿಕಟ್ಟಿದ ಹಿನ್ನೆಲೆಯಲ್ಲಿ ಈಗೆ ಇಬ್ಬರ ಮಹಿಳೆಯರ ಪಾಡು ಡೋಲಾಯಮಾನವಾಗಿದೆ. ಇಂತಹ ಒಂದು ಘಟನೆ ಹಾಸನ ನಗರದ ಹೊರವಲಯದ ಬೂವನಹಳ್ಳಿಯಲ್ಲಿ ನಡೆದಿದೆ.

ಕಿರಣ್ ಎಂಬಾತನೇ ಈ ಕೃತ್ಯ ಎಸಗಿರುವ ಯೋಧ. ನಗರದ ಆಶಾ ಎಂಬಾಕೆ ಖಾಸಗಿ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದರು. ಆಕಸ್ಮಿಕವಾಗಿ ಪರಿಚಯವಾದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಒಬ್ಬರಿಗೊಬ್ಬರು ನಾಲ್ಕುಗೊಡೆಯ ನಡುವೆಯೇ ಮದುವೆಯಾಗಿದ್ದರಂತೆ. ಇದು ಕಿರಣ್ ಪೋಷಕರಿಗೂ ತಿಳಿದಿತ್ತು ಎನ್ನಲಾಗಿದೆ. ದೇಶ ಸೇವೆಯಲ್ಲಿ ಯೋಧನಾಗಿರುವ ಈತ ಕೆಲಸದ ನಿಮಿತ್ತ ಹೋಗಿದ್ದು, ಕಿರಣ್ ಮದುವೆ ಆಗಿರುವ ಬಗ್ಗೆ ಮೊದಲೇ ಮನೆಯಲ್ಲಿ ತಿಳಿದಿತ್ತು ಎಂದು ಹೇಳಲಾಗಿದೆ.

ವಿಧವೆಗೆ ಬಾಳುಕೊಟ್ಟು ಆಶಾ ಕಿರಣವಾಗಿದ್ದ ಕಿರಣ್ ಈಗ ಪೊಲೀಸರ ಅತಿಥಿ

ಹಣಕಾಸಿನ ವಿಚಾರವಾಗಿಯೂ ಈ ಹಿಂದಿನಿಂದಲೂ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ನವವಿವಾಹಿತ ಯೋಧ ಕಿರಣ್ ಮತ್ತು ಆಶಾರನ್ನು ಪೊಲೀಸರು ತನಿಖೆ ಮಾಡಲು ಠಾಣೆ ಕರೆದೊಯ್ದಿದ್ದಾರೆ. ಜೊತೆಗೆ ಪೋಷಕರನ್ನು ಕೂಡಾ ವಶಕ್ಕೆ ಪಡೆದು ವಿಚಾರಿಸುತ್ತಿದ್ದು, ಬಡಾವಣೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆಸಿದ್ದಾರೆ.

ಒಂದು ಕಡೆ ವಿಧವೆ ಆಶಾಗೆ ಬಾಳುಕೊಟ್ಟು ಆಶಾ-ಕಿರಣವಾಗಬೇಕಿದ್ದ ಕಿರಣ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆದ್ರೆ ಎರಡನೇ ಮದುವೆಯಾದ ಹುಡುಗಿ ತನ್ನ ಗಂಡನನ್ನು ಮೊದಲ ಹೆಂಡತಿಗೆ ಬಿಟ್ಟುಕೊಡುವ ಮೂಲಕ ತ್ಯಾಗಮಯಿಯಾಗಿದ್ದಾಳೆ.

ಓದಿ: ಪ್ರಕರಣ ಪತ್ತೆ ಹಚ್ಚಬೇಕಾದ ಪೊಲೀಸರೇ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ: ಹೈಕೋರ್ಟ್ ಅಸಮಾಧಾನ

Last Updated : Nov 12, 2022, 10:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.