ಗದಗ: 9ನೇ ದಿನದ ಸಾರ್ವಜನಿಕ ಗಣಪತಿ ಮೂರ್ತಿ ನಿಮಜ್ಜನದ ವೇಳೆ ಯುವಕನಿಗೆ ಚಾಕು ಇರಿತವಾಗಿ ಪ್ರಾಣ ಬಿಟ್ಟ ಘಟನೆ ಗದಗದಲ್ಲಿ ನಡೆದಿದೆ.
ಕಳೆದ ರಾತ್ರಿ ನಡೆದ ಸುದೀಪ ಮುಂಡೆವಾಡಿ (22) ಸೆಟ್ಲಮೆಂಟ್ನ ನಿವಾಸಿಯಾದ ಆದಿತ್ಯ ಮುಟಗಾರ ಹಾಗೂ ಸಹಚರರು ಸೇರಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಲು ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವಕ ಸುದೀಪ ಮುಂಡೆವಾಡಿ ಹತ್ಯೆಯ ಪ್ರಮುಖ ಆರೋಪಿ ಆದಿತ್ಯ ಮುಟಗಾರ ಬಳಿ ಮೀಟರ್ ಬಡ್ಡಿ ಹಣ ಇಸಿದುಕೊಂಡಿದ್ದ. ಆ ಹಣಕ್ಕೆ ಬಡ್ಡಿ ಹಾಗೂ ಅಸಲು ವಾಪಸ್ ನೀಡಿಲ್ಲ. ಇದರಿಂದ ಬಡ್ಡಿ, ಅಸಲು ಸೇರಿ ಎರಡು ವಾಪಸ್ ನೀಡಿಲ್ಲವೆಂದು ಆದಿತ್ಯ ಕಳೆದ ರಾತ್ರಿ ತನ್ನ ಸಹಚರರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.