ETV Bharat / state

ವಿಶೇಷ ಸ್ಥಾನಮಾನ ರದ್ದತಿಗೆ ಬಿಜೆಪಿ, ಸಂಘ 1947ರಿಂದ್ಲೇ ಹೋರಾಡುತ್ತಿದೆ: ಗೋವಿಂದ ಕಾರಜೋಳ - ಗದಗ ಸುದ್ದಿ

ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಬಗ್ಗೆ ಯಾವುದೇ ಭಿ‌ನ್ನಾಭಿಪ್ರಾಯಗಳಿಲ್ಲ. 1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆಯನ್ನು ರದ್ದು ಮಾಡುವಂತೆ ಹೋರಾಟ ಮಾಡುತ್ತಿತ್ತು. ಕೇಂದ್ರದ ನಿರ್ಧಾರವನ್ನು ಇಡೀ ದೇಶದ ಜನತೆ ಸ್ವಾಗತಿಸಿದ್ದಾರೆಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ಡಿಸಿಎಂ ಗೋವಿಂದ ಕಾರಜೋಳ
author img

By

Published : Sep 20, 2019, 7:29 PM IST

ಗದಗ : ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇಶದ ಜನತೆ ಮೆಚ್ಚಿದ ನಿರ್ಧಾರ ಕಾಂಗ್ರೆಸ್​ನವರಿಗೆ ಏಕೆ ಹೊಟ್ಟೆ ಉರಿ ತಂದಿದೆ ಎಂಬುದು ಗೊತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಡಿಸಿಎಂ ಗೋವಿಂದ ಕಾರಜೋಳ

ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆ ರದ್ದು ಮಾಡುವಂತೆ ಹೋರಾಟ ಮಾಡುತ್ತಿತ್ತು ಎಂದರು.

ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದ ಪರಿಹಾರ ಕುರಿತು ಮಾತನಾಡಿದ ಅವರು, ಸರಕಾರದ ನಿಯಮಾವಳಿಗಳ ಪ್ರಕಾರ, ಪ್ರವಾಹ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 3,800.ರೂ ಪರಿಹಾರ ಮಾತ್ರ ಕೊಡಬೇಕಿದೆ. ಆದ್ರೆ, ಮುಖ್ಯಮಂತ್ರಿಗಳು ಈಗಾಗಲೇ 10,000 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಅಲ್ಲದೇ ಬೆಳೆಹಾನಿ‌ ಬಗ್ಗೆ ಸರ್ವೇ ಕಾರ್ಯ ನಡೆದಿದ್ದು ಎನ್​ಡಿಆರ್​ಎಫ್​ ನಿರ್ದೇಶನದಂತೆ ಪರಿಹಾರ ನೀಡಲಾಗುವುದೆಂದು ಸ್ಪಷ್ಟಪಡಿಸಿದ್ರು.

ಜೊತೆಗೆ ಕೊಚ್ಚಿ ಹೋಗಿರೋ ರಸ್ತೆ ಸೇತುವೆಗಳ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಪುನರ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಪ್ರಾರಂಭವಾಗಿವೆ. ಹೀಗಿದ್ದೂ ಪ್ರತಿಪಕ್ಷ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರಜೋಳ ಹೇಳಿದ್ರು.

ಗದಗ : ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ದೇಶದ ಜನತೆ ಮೆಚ್ಚಿದ ನಿರ್ಧಾರ ಕಾಂಗ್ರೆಸ್​ನವರಿಗೆ ಏಕೆ ಹೊಟ್ಟೆ ಉರಿ ತಂದಿದೆ ಎಂಬುದು ಗೊತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಡಿಸಿಎಂ ಗೋವಿಂದ ಕಾರಜೋಳ

ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆ ರದ್ದು ಮಾಡುವಂತೆ ಹೋರಾಟ ಮಾಡುತ್ತಿತ್ತು ಎಂದರು.

ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದ ಪರಿಹಾರ ಕುರಿತು ಮಾತನಾಡಿದ ಅವರು, ಸರಕಾರದ ನಿಯಮಾವಳಿಗಳ ಪ್ರಕಾರ, ಪ್ರವಾಹ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 3,800.ರೂ ಪರಿಹಾರ ಮಾತ್ರ ಕೊಡಬೇಕಿದೆ. ಆದ್ರೆ, ಮುಖ್ಯಮಂತ್ರಿಗಳು ಈಗಾಗಲೇ 10,000 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಅಲ್ಲದೇ ಬೆಳೆಹಾನಿ‌ ಬಗ್ಗೆ ಸರ್ವೇ ಕಾರ್ಯ ನಡೆದಿದ್ದು ಎನ್​ಡಿಆರ್​ಎಫ್​ ನಿರ್ದೇಶನದಂತೆ ಪರಿಹಾರ ನೀಡಲಾಗುವುದೆಂದು ಸ್ಪಷ್ಟಪಡಿಸಿದ್ರು.

ಜೊತೆಗೆ ಕೊಚ್ಚಿ ಹೋಗಿರೋ ರಸ್ತೆ ಸೇತುವೆಗಳ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಪುನರ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಪ್ರಾರಂಭವಾಗಿವೆ. ಹೀಗಿದ್ದೂ ಪ್ರತಿಪಕ್ಷ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾರಜೋಳ ಹೇಳಿದ್ರು.

Intro:ಕೇಂದ್ರ ಸರಕಾರದ 370 ಕಲಂ ವಿಧಿ ಬಗ್ಗೆ ಯಾವುದೇ ಭಿ‌ನ್ನಾಭಿಪ್ರಾಯಗಳಿಲ್ಲ.....ಗದಗನಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ....1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಇದಕ್ಕೆ ಹೋರಾಟ ಮಾಡಿದೆ....370 ನೇ ಕಲಂ ಹಾಗೂ 30 5A ನ್ನು ರದ್ಧು ಮಾಡಿರುವುದನ್ನು ಇಡೀ ದೇಶ ಸ್ವಾಗತಿಸಿದೆ

ಆಂಕರ್-ಕೇಂದ್ರ ಸರಕಾರ ರದ್ದು ಮಾಡಿರೋ 370 ನೇ ಕಲಂನ ವಿಧಿ ಬಗ್ಗೆ ಯಾವುದೇ ಭಿ‌ನ್ನಾಭಿಪ್ರಾಯಗಳಿಲ್ಲ. ಈ ಕಾಯ್ದೆಯನ್ನು ಇಡೀ ದೇಶದ ಜನತೆ ಸ್ವಾಗತಿಸಿದ್ದಾರೆ. ಆದರೆ ಇದು ಕಾಂಗ್ರೆಸ್ ನವರಿಗೆ ಯಾಕೆ ಹೊಟ್ಟೆಉರಿ ತಂದಿದೆ ಅಂತ ಗೊತ್ತಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ಗದಗನಲ್ಲಿ ಮಾಧ್ಯಮವದರೊಂದಿಗೆ ಮಾತನಾಡಿದ ಅವರು,1947 ರಿಂದಲೇ ಬಿಜೆಪಿ ಹಾಗೂ ಸಂಘ ಪರಿವಾರ ಈ ಕಾಯ್ದೆ ರದ್ದು ಮಾಡುವಂತೆ ಹೋರಾಟ ಮಾಡಿದೆ ಅಂತ ತಿಳಿಸಿದ್ರು. ಇನ್ನು ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರಕಾರದ ಪರಿಹಾರ ಕುರಿತು ಮಾತನಾಡಿದ ಡಿಸಿಎಂ ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ಸಂತ್ರಸ್ತರಿಗೆ ಪ್ರಥಮ‌ ಹಂತದಲ್ಲಿ 3800 ರೂ ಪರಿಹಾರ ಮಾತ್ರ ಕೊಡಬೇಕು. ಆದ್ರೆ ಮುಖ್ಯಮಂತ್ರಿಗಳು ತುರ್ತಾಗಿ ಈಗಾಗಲೇ 10,000 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಅಲ್ಲದೇ ಬೆಳೆಹಾನಿ‌ ಬಗ್ಗೆ ಸರ್ವೇ ಕಾರ್ಯ ನಡೆದಿದ್ದು ಎನ್ಡಿಆರ್ ಎಫ್ ನಿರ್ದೇಶನದಂತೆ ಪರಿಹಾರ ನೀಡಲಾಗುವುದು. ಜೊತೆಗೆ ಕೊಚ್ಚಿ ಹೋಗಿರೋ ರಸ್ತೆ ಸೇತುವೆಗಳ ದುರಸ್ಥಿ ಕಾರ್ಯ ನಡೆದಿದ್ದು ಪುನರ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಪ್ರಾರಂಭವಾಗಿವೆ. ಹೀಗಿದ್ದೂ ಪ್ರತಿಪಕ್ಷದವರು ಮಾಡ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅಂತ ಗೋವಿಂದ ಕಾರಜೋಳ ತಿಳಿಸಿದ್ರು.

ಬೈಟ್-ಗೋವಿಂದ ಕಾರಜೋಳ, ಡಿಸಿಎಂ.

Body:ಗದಗConclusion:ಗದಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.