ಗದಗ: ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದರೂ ರೈತರ ಗೋಳು ಇನ್ನೂ ಮುಗಿದಿಲ್ಲ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.
ಸಾಲು ಸಾಲು ಜಾತ್ರೆಗಳು, ಹಬ್ಬ- ಹರಿದಿನಗಳ ಆಚರಣೆ ನಿಷೇಧ ಹೇರಿರುವ ಪರಿಣಾಮ ಹೂ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಲಾಕ್ಡೌನ್ ಅನ್ನು ಕೊಂಚ ಸಡಿಲಿಸಿದರೂ ಗದಗ ಎಪಿಎಂಸಿಯ ಹೂ ಮಾರುಕಟ್ಟೆ ಗ್ರಾಹಕರ ಇಲ್ಲದೇ ಬಿಕೋ ಎನ್ನುತ್ತಿದೆ. ಹೀಗಾಗಿ, ಹೂ ತಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಇಷ್ಟು ದಿನ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಈಗ ಅದನ್ನು ಸಡಿಲಿಸಿದರೂ ಯಾರೊಬ್ಬರೂ ಹೂ ಖರೀದಿಗೆ ಬರುತ್ತಿಲ್ಲ. ಜಮೀನುಗಳಿಂದ ನೇರವಾಗಿ ಮಾರುಕಟ್ಟೆಗೆ ಹೂವು ತರಲಾಗಿದೆ. ಹೀಗೆ ನಷ್ಟವಾದರೆ ನಮ್ಮ ಬದುಕು ಹೇಗೆ ಎಂದು ಅಳಲು ತೋಡಿಕೊಳ್ಳುತ್ತಾರೆ ಹೂ ಬೆಳೆಗಾರರು.