ETV Bharat / state

ಧಾರವಾಡದಲ್ಲಿ ಆಸ್ತಿ ವಿಚಾರವಾಗಿ ಶೂಟೌಟ್​... ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

author img

By

Published : Jul 5, 2020, 4:26 PM IST

ಧಾರವಾಡದ ಮದಿಹಾಳ ಗಣೇಶನಗರದ ಮನೆಯೊಂದರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Shootout for  property..one death, two serious injury
ಆಸ್ತಿವಾಗಿ ವಿಚಾರವಾಗಿ ಶೂಟೌಟ್​..ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಧಾರವಾಡ: ನಗರದ ಮದಿಹಾಳ ಗಣೇಶನಗರದ ಮನೆಯೊಂದರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಆಸ್ತಿ ವಿಚಾರವಾಗಿ ಶೂಟೌಟ್​... ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ (44) ಮೃತ ವ್ಯಕ್ತಿ. ಶುಕ್ರವಾರ ತಡರಾತ್ರಿ ಈರಪ್ಪ ಯಂಗಳ್ಳಿ ಎಂಬಾತ ತನ್ನ ಗೆಳೆಯರಾದ ಸುನೀಲ್​ ಕೋನಣ್ಣವರ್ ಹಾಗೂ ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ ಜೊತೆಗೆ ತನ್ನ ಸಂಬಂಧಿ ಶ್ರೀಶೈಲ ಮನೆಗೆ ತೆರಳಿದ್ದರು. ಈ ವೇಳೆ ಆಸ್ತಿ ವಿಚಾರವಾಗಿ ಈರಪ್ಪ ಮತ್ತು ಶ್ರೀಶೈಲ ನಡುವಿನ ಜಗಳ ತಾರಕಕ್ಕೇರಿದ್ದು, ಶ್ರೀಶೈಲ​ ರಿವಾಲ್ವರ್​ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಪರಿಣಾಮ ಶಿವಯೋಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈರಪ್ಪ (27) ಮತ್ತು ಸುನೀಲ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಈರಪ್ಪ ಮತ್ತು ಶ್ರೀಶೈಲ ಮಧ್ಯೆ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಳೇ ವೈಷಮ್ಯವಿದ್ದು, ಅದೇ ಈ ಘಟನೆಗೆ ನಡೆಯಲು ಕಾರಣ ಎಂದು ತಿಳಿಸಿದರು. ಈ ಬಗ್ಗೆ ಖಚಿತವಾದ ಎಲ್ಲಾ ಮಾಹಿತಿಗಳು ಸಹ ನಮಗೆ ಲಭ್ಯವಾಗಿವೆ. ತನಿಖೆಗಾಗಿ ಟೀಂ ಸಹ ರಚನೆ ಮಾಡಿದ್ದೇವೆ. ಶೀಘ್ರವೇ ಶೂಟ್ ಮಾಡಿರುವ ಆರೋಪಿಯನ್ನ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಧಾರವಾಡ: ನಗರದ ಮದಿಹಾಳ ಗಣೇಶನಗರದ ಮನೆಯೊಂದರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಆಸ್ತಿ ವಿಚಾರವಾಗಿ ಶೂಟೌಟ್​... ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ (44) ಮೃತ ವ್ಯಕ್ತಿ. ಶುಕ್ರವಾರ ತಡರಾತ್ರಿ ಈರಪ್ಪ ಯಂಗಳ್ಳಿ ಎಂಬಾತ ತನ್ನ ಗೆಳೆಯರಾದ ಸುನೀಲ್​ ಕೋನಣ್ಣವರ್ ಹಾಗೂ ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ ಜೊತೆಗೆ ತನ್ನ ಸಂಬಂಧಿ ಶ್ರೀಶೈಲ ಮನೆಗೆ ತೆರಳಿದ್ದರು. ಈ ವೇಳೆ ಆಸ್ತಿ ವಿಚಾರವಾಗಿ ಈರಪ್ಪ ಮತ್ತು ಶ್ರೀಶೈಲ ನಡುವಿನ ಜಗಳ ತಾರಕಕ್ಕೇರಿದ್ದು, ಶ್ರೀಶೈಲ​ ರಿವಾಲ್ವರ್​ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಪರಿಣಾಮ ಶಿವಯೋಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈರಪ್ಪ (27) ಮತ್ತು ಸುನೀಲ್ (22) ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಈರಪ್ಪ ಮತ್ತು ಶ್ರೀಶೈಲ ಮಧ್ಯೆ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಳೇ ವೈಷಮ್ಯವಿದ್ದು, ಅದೇ ಈ ಘಟನೆಗೆ ನಡೆಯಲು ಕಾರಣ ಎಂದು ತಿಳಿಸಿದರು. ಈ ಬಗ್ಗೆ ಖಚಿತವಾದ ಎಲ್ಲಾ ಮಾಹಿತಿಗಳು ಸಹ ನಮಗೆ ಲಭ್ಯವಾಗಿವೆ. ತನಿಖೆಗಾಗಿ ಟೀಂ ಸಹ ರಚನೆ ಮಾಡಿದ್ದೇವೆ. ಶೀಘ್ರವೇ ಶೂಟ್ ಮಾಡಿರುವ ಆರೋಪಿಯನ್ನ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.