ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ್ ಅಭಿಯಾನ(ಅಮೃತ) ಯೋಜನೆಯಡಿಯಲ್ಲಿ ₹156 ಕೋಟಿ ಅನುದಾನ ನೀಡಿದೆ. ಒಳಚರಂಡಿ ಹಾಗೂ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
![hbg](https://etvbharatimages.akamaized.net/etvbharat/prod-images/kn-hbl-07-amrut-yojan-9022232_01072019195525_0107f_1561991125_749.jpg)
ನಗರದ ರೈಲ್ವೆ ಕ್ವಾಟ್ರಸ್ ಮತ್ತು ನವೀನ್ ಪಾರ್ಕ್ನ ವೆಟ್ವೆಲ್ಲ್ (ಮಲಿನ ನೀರಿನ ಸಂಗ್ರಹ ಹಾಗೂ ಮೇಲೆತ್ತುವ ಘಟಕ) ಹಾಗೂ ಉಣಕಲ್ನ ಬೈರೀದೇವರಕೊಪ್ಪದ ಮಲಿನದ ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿ ವೀಕ್ಷಿಸಿದರು.
₹156 ಕೋಟಿ ವೆಚ್ಚದಲ್ಲಿ 202 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ, 5 ಮಲಿನ ನೀರು ಶುದ್ಧಿಕರಣ ಘಟಕಗಳು ಹಾಗೂ 3 ವೆಟ್ವೆಲ್ಗಳನ್ನು ಅವಳಿನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಧಾರವಾಡವಾಡದ ಕೃಷಿ ವಿ.ವಿ.ಯಲ್ಲಿ 10, ಕೆಲಗೇರಿಯಲ್ಲಿ 3, ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ 3, ತೋಳನಕರೆ ಬಳಿ 1 ಹಾಗೂ ರಾಮನಗರದಲ್ಲಿ 0.25 ಎಂ.ಎಲ್.ಡಿ ಸಾಮಾಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿವೆ.
ಯೋಜನೆಯ ನಿಯಮಾವಳಿಗಳ ಪ್ರಕಾರ ಗುತ್ತಿಗೆದಾರರು 5 ವರ್ಷಗಳ ಕಾಲ ಎಲ್ಲಾ ಘಟಕಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳವರು ಎಂದರು.