ETV Bharat / state

ದರ್ಬೆ ಫಾಸ್ಟ್​​​ಫುಡ್​​​ ಕೇಂದ್ರದ ಮೇಲೆ ನಗರಸಭಾ ಅಧಿಕಾರಿಗಳ ದಾಳಿ.. ವ್ಯಾಪಾರ ಸ್ಥಗಿತಗೊಳಿಸಲು ಸೂಚನೆ! - puttur fast food

ಪುತ್ತೂರು ನಗರಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್, ಆರೋಗ್ಯ ಇಲಾಖೆಯ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಅವರು ದರ್ಬೆಯ ಶರ್ಮಾ ಕಾರ್ನರ್ ಫಾಸ್ಟ್​​ಫುಡ್​​ ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದರು..

fast food center
ದರ್ಬೆ ಫಾಸ್ಟ್​​​ಫುಡ್​​​ ಕೇಂದ್ರದ ಮೇಲೆ ನಗರಸಭಾ ಅಧಿಕಾರಿಗಳ ದಾಳಿ
author img

By

Published : Jun 27, 2020, 2:46 PM IST

ಪುತ್ತೂರು : ಇಲ್ಲಿನ ದರ್ಬೆಯ ಫಾಸ್ಟ್​ಫುಡ್​​ ತಯಾರಿಕಾ ಕೇಂದ್ರವೊಂದಕ್ಕೆ ನಗರಸಭಾ, ಆರೋಗ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಫಾಸ್ಟ್​​ಫುಡ್​​ ತಯಾರಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಪುತ್ತೂರು ನಗರಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್, ಆರೋಗ್ಯ ಇಲಾಖೆಯ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಅವರು ದರ್ಬೆಯ ಶರ್ಮಾ ಕಾರ್ನರ್ ಫಾಸ್ಟ್​​ಫುಡ್​​ ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದರು.

ದಾಳಿ ವೇಳೆ ಫಾಸ್ಟ್​​​ಫುಡ್ ಘಟಕದ ಒಳಗಡೆ ಗಲೀಜು ಕಂಡು ಬಂದಿದ್ದು, ಸ್ವಚ್ಛತೆಯ ಬಗ್ಗೆ ನಿಗಾ ವಹಿಸಿಲ್ಲ. ಇದರ ಜೊತೆ ನಗರಸಭೆಯಿಂದ ವ್ಯಾಪಾರದ ಪರವಾನಿಗೆ ಪಡೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ತಕ್ಷಣದಿಂದಲೇ ಈ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಮಾಲೀಕ ನಿಸಾರ್ ಕೂರ್ನಡ್ಕ ಅವರಿಗೆ ಸೂಚಿಸಿದ್ದಾರೆ.

ಪುತ್ತೂರು : ಇಲ್ಲಿನ ದರ್ಬೆಯ ಫಾಸ್ಟ್​ಫುಡ್​​ ತಯಾರಿಕಾ ಕೇಂದ್ರವೊಂದಕ್ಕೆ ನಗರಸಭಾ, ಆರೋಗ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಫಾಸ್ಟ್​​ಫುಡ್​​ ತಯಾರಿಕೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಪುತ್ತೂರು ನಗರಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್, ಆರೋಗ್ಯ ಇಲಾಖೆಯ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಅವರು ದರ್ಬೆಯ ಶರ್ಮಾ ಕಾರ್ನರ್ ಫಾಸ್ಟ್​​ಫುಡ್​​ ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದರು.

ದಾಳಿ ವೇಳೆ ಫಾಸ್ಟ್​​​ಫುಡ್ ಘಟಕದ ಒಳಗಡೆ ಗಲೀಜು ಕಂಡು ಬಂದಿದ್ದು, ಸ್ವಚ್ಛತೆಯ ಬಗ್ಗೆ ನಿಗಾ ವಹಿಸಿಲ್ಲ. ಇದರ ಜೊತೆ ನಗರಸಭೆಯಿಂದ ವ್ಯಾಪಾರದ ಪರವಾನಿಗೆ ಪಡೆದುಕೊಂಡಿಲ್ಲ ಎಂಬ ಕಾರಣಕ್ಕಾಗಿ ತಕ್ಷಣದಿಂದಲೇ ಈ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಮಾಲೀಕ ನಿಸಾರ್ ಕೂರ್ನಡ್ಕ ಅವರಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.