ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದರು. ಸಾವನ್ನಪ್ಪಿದ ಇಬ್ಬರ ಕುಟುಂಬಸ್ಥರಿಗೆ ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ, ತಲಾ ₹ 5 ಲಕ್ಷ ಪರಿಹಾರ ಚೆಕ್ ನೀಡಿದ್ದಾರೆ.
ಕುದ್ರೋಳಿಯ ರಹಮತ್ ನಗರದಲ್ಲಿರುವ ಮೃತ ನೌಸೀನ್ ಮನೆಗೆ ಭೇಟಿ ನೀಡಿ, ಮೃತನ ತಾಯಿಗೆ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು.
ನಂತರ ಕಂದಕ್ನ ಅಜೀಜುದ್ದೀನ್ ರಸ್ತೆಯಲ್ಲಿರುವ ಮೃತ ಜಲೀಲ್ ನಿವಾಸಕ್ಕೆ ಭೇಟಿ ನೀಡಿ, ಆ ಕುಟುಂಬಕ್ಕೂ ಚೆಕ್ ಮೂಲಕ ಪರಿಹಾರ ಚೆಕ್ಅನ್ನು ಕುಮಾಸ್ವಾಮಿ ನೀಡಿದರು.
ಆಸ್ಪತ್ರೆಗೆ ಭೇಟಿ: ಪ್ರತಿಭಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದವರ ಸಮಸ್ಯೆಗಳನ್ನು ಸಹ ಕುಮಾರಸ್ವಾಮಿ ಆಲಿಸಿದರು. ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಹೇಳಿದ್ರು.
ಒಟ್ಟು ಎಂಟು ಗಾಯಾಳುಗಳು ಯುನಿಟಿ ಹಾಗೂ ಹೈಲ್ಯಾಂಡ್ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.