ಬೆಳ್ತಂಗಡಿ: ಆಟವಾಡುತ್ತಿದ್ದ ಮಗು ಆಕಸ್ಮಾತ್ತಾಗಿ ಕಾಲು ಜಾರಿ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ದಾರುಣವಾಗಿ ಮೃತ ಪಟ್ಟ ಘಟನೆ ಅರಸಿನಮಕ್ಕಿ ಸಮೀಪದ ಕಲ್ಲಕೋಟೆ ಎಂಬಲ್ಲಿ ನಡೆದಿದೆ.
ಜಗದೀಶ್ ಆಚಾಯ೯ ಮತ್ತು ವಿದ್ಯಾ ದಂಪತಿಗಳ 8 ತಿಂಗಳ ಮಗು ಸಾವನ್ನಪ್ಪಿದೆ. ಇನ್ನು ತಾಯಿ ಬಟ್ಟೆ ಒಗೆಯುತ್ತಿದ್ದ ಸಂದಭ೯ದಲ್ಲಿ ಶೌಚಾಲಯದೊಳಗೆ ಆಟವಾಡುತ್ತಿದ್ದ ಮಗು ನೀರಿನ ಬಕೆಟ್ಗೆ ಲೋಟ ಬಿದ್ದಿದ್ದನ್ನು ತೆಗೆಯಲು ಯತ್ನಿಸಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ.
ಜಗದೀಶ್ ಆಚಾರ್ಯ ಅರಸಿನಮಕ್ಕಿ-ಕೊಕ್ಕಡ ನಡುವೆ ಜೀಪು ಸರ್ವಿಸ್ ಮಾಡುತ್ತಿದ್ದು, ಘಟನೆ ನಡೆದಾಗ ಅವರು ಶಿವಮೊಗ್ಗ ಬಳಿಯ ಜೋಗಕ್ಕೆ ಬಾಡಿಗೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.