ಚಿಕ್ಕಮಗಳೂರು : ಕೊರೊನಾ ವೈರಸ್ ಭೀತಿಯಿಂದಾಗಿ ಭಾರತ ಲಾಕ್ಡೌನ್ ಆಗಿದೆ. ಆದರೆ, ಈ ನಿಯಮ ಉಲ್ಲಂಘಿಸಿ ಕೆಲವರು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಪೊಲೀಸರು ಲಾಠಿ ಏಟು ಕೊಟ್ಟ ವಿಡಿಯೋವೊಂದು ವೈರಲ್ ಆಗಿದೆ.
ಜಿಲ್ಲೆಯ ಕಡೂರಿನ ಕೋಟೆ ಬಡಾವಣೆಯಲ್ಲಿ ಲಾಕ್ಡೌನ್ ವೇಳೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ, ಆ ಸೂಚನೆಗೂ ಬಗ್ಗದವರಿಗೆ ಪೊಲೀಸರ ಲಾಠಿ ರುಚಿ ತೋರಿಸಿದ್ದಾರೆ. ಮತ್ತೆ ಈ ರೀತಿ ಮಾಡದಂತೆ ಕಡೂರು ಪೊಲೀಸರು ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.