ETV Bharat / state

ಚಿಕ್ಕಮಗಳೂರಲ್ಲಿ ಯುವಕನಿಂದ ಚೂರಿ ಇರಿತಕ್ಕೊಳಗಾದ ಯುವತಿ ಚಿಕಿತ್ಸೆ ಫಲಿಸದೆ ಸಾವು!

author img

By

Published : Sep 22, 2019, 3:45 AM IST

ಚಿಕ್ಕಮಗಳೂರಿನಲ್ಲಿ ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವತಿ ನಿನ್ನೆ ಕೊನೆಯುಸಿರೆಳೆದಿದ್ದಾಳೆ.

ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಚಿಕ್ಕಮಗಳೂರು: ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವತಿ ನಿನ್ನೆ ಕೊನೆಯುಸಿರೆಳೆದಿದ್ದಾಳೆ.

ಕಳೆದ ನಾಲ್ಕು ದಿನಗಳ ಹಿಂದೆ ಬಾಳೆಹೊನ್ನೂರಿನ ಬಾಸಪುರು ಗ್ರಾಮದ ಯುವತಿಗೆ ಬಾಳೆಹೊನ್ನೂರಿನ ಸಮೀಪದ ಗಡಿಗೇಶ್ವರದ ಮಿಥುನ್ ಎಂಬ ಯುವಕ ಮನ ಬಂದಂತೆ ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ಕಳಸ ಹಾಗೂ ಬಾಳೆಹೊನ್ನೂರು ರಸ್ತೆ ಮಧ್ಯೆ ಬರುವ ಮಾಲಗೋಡು ರಸ್ತೆಯಲ್ಲಿ ರಾತ್ರಿ ಯುವತಿ ಮೇಲೆ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 8ರಿಂದ 10 ಬಾರಿ ಚೂರಿ ಇರಿತಕ್ಕೊಳಗಾಗಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡು ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದಾಗ ಸ್ಥಳೀಯರು ನೋಡಿ ಕಳಸ ಆಸ್ವತ್ರೆಗೆ ದಾಖಲು ಮಾಡಿದ್ದರು.

ಯುವತಿಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಯುವತಿಯನ್ನು ಹಾಸನಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಯುವತಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಾಲೇ ಇದ್ದಳು. ಆದರೆ ನಿನ್ನೆ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗಲೇ ಗುರುವಾರ ನೇರವಾಗಿ ಎನ್.ಆರ್ ಪುರ ತಾಲೂಕಿನ ನ್ಯಾಯಧೀಶರ ಮುಂದೆ ಆರೋಪಿ ಮಿಥುನ್ ಶರಣಾಗಿದ್ದ. ನ್ಯಾಯಾಧೀಶರು ಆರೋಪಿ ಮಿಥುನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದರು.

ಇನ್ನೊಂದೆಡೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ವತ್ರೆ ಮುಂಭಾಗದಲ್ಲಿ ಯುವತಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಿಕ್ಕಮಗಳೂರು: ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಯುವತಿ ನಿನ್ನೆ ಕೊನೆಯುಸಿರೆಳೆದಿದ್ದಾಳೆ.

ಕಳೆದ ನಾಲ್ಕು ದಿನಗಳ ಹಿಂದೆ ಬಾಳೆಹೊನ್ನೂರಿನ ಬಾಸಪುರು ಗ್ರಾಮದ ಯುವತಿಗೆ ಬಾಳೆಹೊನ್ನೂರಿನ ಸಮೀಪದ ಗಡಿಗೇಶ್ವರದ ಮಿಥುನ್ ಎಂಬ ಯುವಕ ಮನ ಬಂದಂತೆ ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ಕಳಸ ಹಾಗೂ ಬಾಳೆಹೊನ್ನೂರು ರಸ್ತೆ ಮಧ್ಯೆ ಬರುವ ಮಾಲಗೋಡು ರಸ್ತೆಯಲ್ಲಿ ರಾತ್ರಿ ಯುವತಿ ಮೇಲೆ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 8ರಿಂದ 10 ಬಾರಿ ಚೂರಿ ಇರಿತಕ್ಕೊಳಗಾಗಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಗಂಭೀರವಾಗಿ ಗಾಯಗೊಂಡು ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದಾಗ ಸ್ಥಳೀಯರು ನೋಡಿ ಕಳಸ ಆಸ್ವತ್ರೆಗೆ ದಾಖಲು ಮಾಡಿದ್ದರು.

ಯುವತಿಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಯುವತಿಯನ್ನು ಹಾಸನಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಯುವತಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಾಲೇ ಇದ್ದಳು. ಆದರೆ ನಿನ್ನೆ ಯುವತಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗಲೇ ಗುರುವಾರ ನೇರವಾಗಿ ಎನ್.ಆರ್ ಪುರ ತಾಲೂಕಿನ ನ್ಯಾಯಧೀಶರ ಮುಂದೆ ಆರೋಪಿ ಮಿಥುನ್ ಶರಣಾಗಿದ್ದ. ನ್ಯಾಯಾಧೀಶರು ಆರೋಪಿ ಮಿಥುನ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದರು.

ಇನ್ನೊಂದೆಡೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ವತ್ರೆ ಮುಂಭಾಗದಲ್ಲಿ ಯುವತಿ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

Intro:Kn_Ckm_05_Girl death_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಯುವತಿಯ ಮೇಲೆ ಯುವಕ ದಾಳಿ ಮಾಡಿ ಚೂರಿಯಿಂದಾ ಇರಿದಿದ್ದ ಘಟನೆಗೆ ಸಂಭದಿಸಿದಂತೆ ಚೂರಿಯಿಂದಾ ಇರಿಸಿಕೊಂಡಿದ್ದ ಯುವತಿ ಇಂದೂ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಲೇ ಕೊನೆಯುಸಿರು ಎಳೆದಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೇ ಬಾಳೆಹೂನ್ನೂರಿನ ಬಾಸಪುರು ಗ್ರಾಮದ ಯುವತಿ ಬಿಂದೂ ಗೆ ಬಾಳೆಹೊನ್ನೂರಿನ ಸಮೀಪದ ಗಡಿಗೇಶ್ವರದ ಯುವಕ ಮಿಥುನ್ ಚಾಕುವಿನಿಂದಾ ಮನ ಬಂದತೆ 8 ರಿಂದ 10 ಬಾರೀ ದೇಹದ ವಿವಿಧ ಭಾಗದಲ್ಲಿ ಮನ ಬಂದತೆ ಇರಿದ್ದನು. ಕಳಸ ಹಾಗೂ ಬಾಳೆಹೊನ್ನೂರು ರಸ್ತೆಯ ಮಧ್ಯೆ ಬರುವ ಮಾಲಗೋಡು ರಸ್ತೆಯಲ್ಲಿ ರಾತ್ರಿ ಬಿಂದು (23) ಮೇಲೆ ಚೂರಿಯಿಂದಾ ಇರಿದು ಸ್ಥಳದಿಂದಾ ಪರಾರಿಯಾಗಿದ್ದನು. ಯುವತಿಗೆ ಸುಮಾರು 8 ರಿಂದ 10 ಬಾರೀ ಚೂರಿಯಿಂದಾ ದಾಳಿ ಮಾಡಿದಾಗ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಗಂಭೀರ ಗಾಯದಿಂದಾ ಈ ಯುವತಿ ರಸ್ತೆಯಲ್ಲಿ ಬಿದ್ದು ನರಳಾಡುವಾಗ ಸ್ಥಳೀಯರು ನೋಡಿ ಕಳಸ ಆಸ್ವತ್ರೆಗೆ ದಾಖಲು ಮಾಡಿದ್ದರು.ಯುವತಿಯ ಸ್ಥಿತಿ ಗಂಭೀರವಾದ ಹಿನ್ನಲೆ ಯುವತಿಯನ್ನು ಹಾಸನಕ್ಕೆ ರವಾನೆ ಚಿಕಿತ್ಸೆ ಕೊಡಿಸಲಾಯಿತು. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು. ಕಳೆದ ಎರಡೂ ದಿನಗಳಿಂದಾ ಮಂಗಳೂರಿನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಾಲೇ ಇಂದೂ ಬಿಂದೂ ಮಂಗಳೂರಿನಲ್ಲಿ ಕೊನೆಯೂರಿಸಿರು ಎಳೆದಿದ್ದಾಳೆ. ಚೂರಿ ಇರಿದ ಆರೋಪಿ ಮಿಥುನ್ ಕಳೆದ ಗುರುವಾರ ನೇರವಾಗಿ ನ್ಯಾಯಲಯದ ಮುಂದೆ ಬಂದೂ ಶರಣಾಗಿದ್ದನು. ಬಾಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಮಿಥುನ್ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯ ಶೋಧ ಕಾರ್ಯ ನಡೆಸುತ್ತಿರುವಾಗಲೇ ಕಳೆದ ಗುರುವಾರ ನೇರವಾಗಿ ಎನ್ ಆರ್ ಪುರ ತಾಲೂಕಿನ ನ್ಯಾಯಧೀಶರ ಮುಂದೆ ಶರಣಾಗತಿಯಾಗಿದ್ದು.ನ್ಯಾಯಧೀಶರು ಆರೋಪಿ ಮಿಥುನ್ ನನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದರು. ಬಿಂದೂ ಇಂದೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಹಿನ್ನಲೆ ಮಂಗಳೂರಿನ ಆಸ್ವತ್ರೆಯ ಮುಂಭಾಗದಲ್ಲಿ ಮನೆಯವರ ಆಕ್ರಂದನ ಮುಗಿಲು ಮುಟ್ಟುವಂತಿದ್ದು ಇಂತಹ ಪರಿಸ್ಥಿತಿಯ ಯಾವ ಹೆಣ್ಣು ಮಕ್ಕಳಿಗೂ ಬಾರದಿರಲಿ ಎಂದೂ ಗೋಳಾಡುತ್ತಿದ್ದಾರೆ..


Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.