ETV Bharat / state

ಅಧಿಕಾರಿಗಳ ಮೋಜು-ಮಸ್ತಿ ತಡೆದು ಪ್ರಶ್ನಿಸಿದ್ದ ಗ್ರಾಮಸ್ಥರ ವಿರುದ್ಧವೇ ಎಫ್​ಐಆರ್​

author img

By

Published : May 22, 2021, 5:36 PM IST

ಕಾಫಿನಾಡಿನಲ್ಲಿ ಜನರು ಕೊರೊನಾದಿಂದ ವಿಲವಿಲ ಅಂತಾ ಒದ್ದಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅರಣ್ಯ ಅಧಿಕಾರಿಗಳು ಮೋಜು ಮಸ್ತಿಗೆ ಸಂತವೇರಿ ಗ್ರಾಮದ ಕಡೆ ಪಯಣ ಬೆಳೆಸಿದ್ದರು. ಅಧಿಕಾರಿಗಳ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯರು, ಗ್ರಾಮಕ್ಕೆ ಬಂದ ಕಾರುಗಳನ್ನ ತಡೆದಿದ್ದರು.

ಅಧಿಕಾರಿಗಳ ಮೋಜು-ಮಸ್ತಿ ತಡೆದು ಪ್ರಶ್ನಿಸಿದ್ದ ಗ್ರಾಮಸ್ಥರ ವಿರುದ್ಧವೇ ಎಫ್​ಐಆರ್​..!
ಅಧಿಕಾರಿಗಳ ಮೋಜು-ಮಸ್ತಿ ತಡೆದು ಪ್ರಶ್ನಿಸಿದ್ದ ಗ್ರಾಮಸ್ಥರ ವಿರುದ್ಧವೇ ಎಫ್​ಐಆರ್​..!

ಚಿಕ್ಕಮಗಳೂರು: ಮೋಜು-ಮಸ್ತಿಗೆಂದು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ತಡೆದವರ ಮೇಲೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಡೆದಿದ್ದೇನು..?

ಸಂತವೇರಿಯಲ್ಲಿ 10ಕ್ಕೂ ಹೆಚ್ಚು ಸರ್ಕಾರಿ ಕಾರುಗಳನ್ನು ಸ್ಥಳೀಯರು ತಡೆದಿದ್ದರು. ಟ್ರೆಕ್ಕಿಂಗ್​​ಗೆಂದು ಹೊರಟಿದ್ದ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದು, ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ನಮ್ಮ ಊರಿಗೆ ಬರಬೇಡಿ ಎಂದು ಘೇರಾವ್ ಹಾಕಿದ್ದರು.

fir-registered-against-locals-those-officials-who-arranged-party-at-chikkamagalore
ಗ್ರಾಮಸ್ಥರ ವಿರುದ್ಧ ದಾಖಲಾದ ಎಫ್​ಐಆರ್​ ಪ್ರತಿ

ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿ ವಾಪಸು ಕಳುಹಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಕೆಮ್ಮಣ್ಣಗುಂಡಿಯತ್ತ ಅಧಿಕಾರಿಗಳು ಪ್ರಯಾಣಿಸಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಬಂದ ಹಿನ್ನೆಲೆ ಮುಜುಗರಕ್ಕೀಡಾದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಮೇಲೆಯೇ ಕೇಸ್ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸೇರಿದಂತೆ ಸಿಸಿಎಫ್, ಡಿಎಫ್ಓ ಭಾಗಿಯಾಗಿದ್ದರು.

ಓದಿ: ಸಂಕಷ್ಟದ ನಡುವೆ ಅಧಿಕಾರಿಗಳ ಮೋಜು, ಮಸ್ತಿ: ಕಾರು ತಡೆದು ಕ್ಲಾಸ್​ ತೆಗೆದುಕೊಂಡ ಮಲೆನಾಡ ಜನರು..

ಚಿಕ್ಕಮಗಳೂರು: ಮೋಜು-ಮಸ್ತಿಗೆಂದು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ತಡೆದವರ ಮೇಲೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಡೆದಿದ್ದೇನು..?

ಸಂತವೇರಿಯಲ್ಲಿ 10ಕ್ಕೂ ಹೆಚ್ಚು ಸರ್ಕಾರಿ ಕಾರುಗಳನ್ನು ಸ್ಥಳೀಯರು ತಡೆದಿದ್ದರು. ಟ್ರೆಕ್ಕಿಂಗ್​​ಗೆಂದು ಹೊರಟಿದ್ದ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದು, ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ನಮ್ಮ ಊರಿಗೆ ಬರಬೇಡಿ ಎಂದು ಘೇರಾವ್ ಹಾಕಿದ್ದರು.

fir-registered-against-locals-those-officials-who-arranged-party-at-chikkamagalore
ಗ್ರಾಮಸ್ಥರ ವಿರುದ್ಧ ದಾಖಲಾದ ಎಫ್​ಐಆರ್​ ಪ್ರತಿ

ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿ ವಾಪಸು ಕಳುಹಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಕೆಮ್ಮಣ್ಣಗುಂಡಿಯತ್ತ ಅಧಿಕಾರಿಗಳು ಪ್ರಯಾಣಿಸಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಬಂದ ಹಿನ್ನೆಲೆ ಮುಜುಗರಕ್ಕೀಡಾದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಮೇಲೆಯೇ ಕೇಸ್ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸೇರಿದಂತೆ ಸಿಸಿಎಫ್, ಡಿಎಫ್ಓ ಭಾಗಿಯಾಗಿದ್ದರು.

ಓದಿ: ಸಂಕಷ್ಟದ ನಡುವೆ ಅಧಿಕಾರಿಗಳ ಮೋಜು, ಮಸ್ತಿ: ಕಾರು ತಡೆದು ಕ್ಲಾಸ್​ ತೆಗೆದುಕೊಂಡ ಮಲೆನಾಡ ಜನರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.