ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಗೆಗ್ಗಿರಾಲ್ಲಹಳ್ಳಿಯಲ್ಲಿ ಶಾಸಕರ ಎದುರಲ್ಲೇ ಪಂಚಾಯತಿ ಸದಸ್ಯರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಗೆಗ್ಗಿರಾಲ್ಲಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಮ್ಮುಖದಲ್ಲೇ ಗ್ರಾಮದ ಪಂಚಾಯತಿ ಸದಸ್ಯರ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿವೆ. ಗಲಾಟೆ ನಡುವೆಯೆ ಶಾಸಕ ಸುಬ್ಬಾರೆಡ್ಡಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಡೆಸಿ ವಾಪಸ್ ಆಗಿದ್ದಾರೆ.