ETV Bharat / state

ಅಮ್ಮನ ಸಾವಿನಿಂದ 3 ವರ್ಷ ಕೊರಗಿದ ಮಗ: ದುಃಖ ತಾಳಲಾರದೇ ನೇಣಿಗೆ ಶರಣು - ಅಮ್ಮನ ಸಾವಿನಿಂದ ಮಗ ಆತ್ಮಹತ್ಯೆ

ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತರಾದ ಹಿನ್ನೆಲೆ, ಅಮ್ಮನನ್ನು ನೆನೆದು ಕೊರಗುತ್ತಿದ್ದ ಪುತ್ರ, ಅಮ್ಮನಿಲ್ಲದ ಜೀವನವನ್ನು ಜೀವಿಸಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

Deceased
ಮೃತ ಯುವಕ
author img

By

Published : Jan 13, 2021, 2:08 PM IST

ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತರಾದ ಹಿನ್ನಲೆ, ಅಮ್ಮನ ಕೊರಗಿನಲ್ಲಿಯೇ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಜೋಡಿಗಾರ ಬಳಿ‌ ನಡೆದಿದೆ.

ಮೃತ ಯುವಕ

ಸೈಯದ್ ಇರ್ಫಾನ್ (25) ಮೃತ ಯುವಕ. ಈತನ ತಾಯಿ ಅನಾರೋಗ್ಯದ ಹಿನ್ನಲೆ 3 ವರ್ಷಗಳ ಹಿಂದೆ ಮೃತರಾಗಿದ್ದರು. ನಿತ್ಯ ತಾಯಿ ನೆನೆದು ವಾಟ್ಸ್​ಆ್ಯಪ್​​​​ ಸ್ಟೇಟಸ್‌ನಲ್ಲಿ ಮಿಸ್‌ಯೂ ಅಮ್ಮ ಎಂದು ಪೋಸ್ಟ್ ಹಾಕಿಕೊಳ್ಳುತ್ತಿದ್ದ ಈತ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ತಂದೆ ವಿಕಲ ಚೇತನರಾಗಿದ್ದು, ತನ್ನ ಸಂಪಾದನೆಯಲ್ಲೇ ಅಕ್ಕನಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿದ್ದನು. ಈ ಎಲ್ಲದರ ನಡುವೆ ಅಮ್ಮನ ಅಗಲಿಕೆ ಈತನಿಗೆ ತೀವ್ರ ನೋವುಟಂಟು ಮಾಡಿದ್ದು, ದುಃಖ ತಾಳಲಾರದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಗೌರಿಬಿದನೂರು ನಗರ ಠಾಣೆಯ ಪಿಎಸ್​​ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮೃತರಾದ ಹಿನ್ನಲೆ, ಅಮ್ಮನ ಕೊರಗಿನಲ್ಲಿಯೇ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಜೋಡಿಗಾರ ಬಳಿ‌ ನಡೆದಿದೆ.

ಮೃತ ಯುವಕ

ಸೈಯದ್ ಇರ್ಫಾನ್ (25) ಮೃತ ಯುವಕ. ಈತನ ತಾಯಿ ಅನಾರೋಗ್ಯದ ಹಿನ್ನಲೆ 3 ವರ್ಷಗಳ ಹಿಂದೆ ಮೃತರಾಗಿದ್ದರು. ನಿತ್ಯ ತಾಯಿ ನೆನೆದು ವಾಟ್ಸ್​ಆ್ಯಪ್​​​​ ಸ್ಟೇಟಸ್‌ನಲ್ಲಿ ಮಿಸ್‌ಯೂ ಅಮ್ಮ ಎಂದು ಪೋಸ್ಟ್ ಹಾಕಿಕೊಳ್ಳುತ್ತಿದ್ದ ಈತ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ತಂದೆ ವಿಕಲ ಚೇತನರಾಗಿದ್ದು, ತನ್ನ ಸಂಪಾದನೆಯಲ್ಲೇ ಅಕ್ಕನಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿದ್ದನು. ಈ ಎಲ್ಲದರ ನಡುವೆ ಅಮ್ಮನ ಅಗಲಿಕೆ ಈತನಿಗೆ ತೀವ್ರ ನೋವುಟಂಟು ಮಾಡಿದ್ದು, ದುಃಖ ತಾಳಲಾರದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಗೌರಿಬಿದನೂರು ನಗರ ಠಾಣೆಯ ಪಿಎಸ್​​ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.