ETV Bharat / state

ಸರ್ಕಾರಿ ಬಸ್ ಹತ್ತಿದವರು ಖಾಸಗಿ ಬಸ್​ಗೆ ಶಿಫ್ಟ್... ಮೂಕ ಪ್ರೇಕ್ಷಕರಾದ ಪೊಲೀಸರು, ಅಧಿಕಾರಿಗಳು

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಖಾಸಗಿ ಬಸ್​ಗಳಲ್ಲಿ ಬಲವಂತದಿಂದ ಹತ್ತಿಸಿಕೊಂಡು ಸಂಚಾರ ನಡೆಸುತ್ತಿದ್ದು, ಕೆಲ ಪೊಲೀಸರು, ನಿಲ್ದಾಣದ ಟಿಸಿಗಳೇ ಖಾಸಗಿ ಬಸ್​ಗೆ ಜನರನ್ನು ಹತ್ತಿಸಿ ಕೋಪ ಶಮನ ಮಾಡುತ್ತಿದ್ದಾರೆ.

author img

By

Published : Apr 15, 2021, 2:44 PM IST

Chamrajnagar
ಸರ್ಕಾರಿ ಬಸ್ ಹತ್ತಿದವರು ಖಾಸಗಿ ಬಸ್​ಗೆ ಶಿಫ್ಟ್

ಚಾಮರಾಜನಗರ: ಸಾರಿಗೆ ಸಂಸ್ಥೆ ನೌಕರರು ಒಂದೆಡೆ ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ಹಾಗೂ ಕೆಎಸ್​ಆರ್​ಟಿಸಿ ಸಿಬ್ಬಂದಿ ನಡುವೆ ತಿಕ್ಕಾಟ ನಡೆಯುತ್ತಿದ್ದು, ಸರ್ಕಾರಿ ಬಸ್​ಗೆ ಪ್ರಯಾಣಿಕರನ್ನು ಹತ್ತಿಸಲು ಬಿಡದ ಘಟನೆ ನಗರದಲ್ಲಿ ನಡೆಯುತ್ತಿದೆ.

ಸರ್ಕಾರಿ ಬಸ್ ಹತ್ತಿದವರು ಖಾಸಗಿ ಬಸ್​ಗೆ ಶಿಫ್ಟ್..

ಮುಷ್ಕರದ ನಡುವೆ ಸರ್ಕಾರಿ ಬಸ್​ಗಳು ಸೇವೆ ನೀಡಲು ಆರಂಭಿಸಿದ ಹಿನ್ನೆಲೆ ಕುಪಿತರಾದ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಸರ್ಕಾರಿ ಬಸ್​ನಲ್ಲಿ ತೆರಳಿದರೆ ತಮಗೆ ನಷ್ಟ ಆಗಲಿದೆ. ಮುಷ್ಕರದ ಸಮಸ್ಯೆ ಬಗೆಹರಿಯುವವರೆಗೂ ಬಸ್ ಬಿಡುವುದು ಸರಿಯಲ್ಲ. ಹತ್ತಾರು ಸಾವಿರ ಖರ್ಚು ಮಾಡಿ ಬಸ್ ಓಡಿಸುತ್ತಿದ್ದು, ಇದರಿಂದ ತಮಗೆ ನಷ್ಟ ಉಂಟಾಗಲಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಖಾಸಗಿ ಬಸ್​ಗಳಲ್ಲಿ ಬಲವಂತದಿಂದ ಹತ್ತಿಸಿಕೊಂಡು ಸಂಚಾರ ನಡೆಸುತ್ತಿದ್ದು, ಕೆಲ ಪೊಲೀಸರು, ನಿಲ್ದಾಣದ ಟಿಸಿಗಳೇ ಖಾಸಗಿ ಬಸ್​ಗೆ ಜನರನ್ನು ಹತ್ತಿಸಿ ಕೋಪ ಶಮನ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ಬಾಗಿಲ ಬಳಿ ಖಾಸಗಿ ಬಸ್ ನಿರ್ವಾಹಕರು ನಿಂತುಕೊಂಡು ಬರುವ ಪ್ರಯಾಣಿಕರನ್ನು ಖಾಸಗಿ ಬಸ್​ಗಳಿಗೆ ಹತ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರಿ ಬಸ್​ನಲ್ಲಿ ತೆರಳಿದರೆ ಬೇಗ ಊರಿಗೆ ಹೋಗಬಹುದು. ಖಾಸಗಿ ಬಸ್​ಗಳು ಹಲವು ಸ್ಟಾಪ್​​​ಗಳಲ್ಲಿ ನಿಲ್ಲಿಸಿಕೊಂಡು ಹೋಗುತ್ತಾರೆ. ಇಷ್ಟವಿಲ್ಲದಿದ್ದರೂ ಖಾಸಗಿ ಬಸ್​ನಲ್ಲೇ ಹೋಗಬೇಕಿದ್ದು, ಸರ್ಕಾರಿ ಬಸ್​ಗೆ ಹತ್ತಲು ಬಿಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.

ಚಾಮರಾಜನಗರ: ಸಾರಿಗೆ ಸಂಸ್ಥೆ ನೌಕರರು ಒಂದೆಡೆ ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ಹಾಗೂ ಕೆಎಸ್​ಆರ್​ಟಿಸಿ ಸಿಬ್ಬಂದಿ ನಡುವೆ ತಿಕ್ಕಾಟ ನಡೆಯುತ್ತಿದ್ದು, ಸರ್ಕಾರಿ ಬಸ್​ಗೆ ಪ್ರಯಾಣಿಕರನ್ನು ಹತ್ತಿಸಲು ಬಿಡದ ಘಟನೆ ನಗರದಲ್ಲಿ ನಡೆಯುತ್ತಿದೆ.

ಸರ್ಕಾರಿ ಬಸ್ ಹತ್ತಿದವರು ಖಾಸಗಿ ಬಸ್​ಗೆ ಶಿಫ್ಟ್..

ಮುಷ್ಕರದ ನಡುವೆ ಸರ್ಕಾರಿ ಬಸ್​ಗಳು ಸೇವೆ ನೀಡಲು ಆರಂಭಿಸಿದ ಹಿನ್ನೆಲೆ ಕುಪಿತರಾದ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಸರ್ಕಾರಿ ಬಸ್​ನಲ್ಲಿ ತೆರಳಿದರೆ ತಮಗೆ ನಷ್ಟ ಆಗಲಿದೆ. ಮುಷ್ಕರದ ಸಮಸ್ಯೆ ಬಗೆಹರಿಯುವವರೆಗೂ ಬಸ್ ಬಿಡುವುದು ಸರಿಯಲ್ಲ. ಹತ್ತಾರು ಸಾವಿರ ಖರ್ಚು ಮಾಡಿ ಬಸ್ ಓಡಿಸುತ್ತಿದ್ದು, ಇದರಿಂದ ತಮಗೆ ನಷ್ಟ ಉಂಟಾಗಲಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಖಾಸಗಿ ಬಸ್​ಗಳಲ್ಲಿ ಬಲವಂತದಿಂದ ಹತ್ತಿಸಿಕೊಂಡು ಸಂಚಾರ ನಡೆಸುತ್ತಿದ್ದು, ಕೆಲ ಪೊಲೀಸರು, ನಿಲ್ದಾಣದ ಟಿಸಿಗಳೇ ಖಾಸಗಿ ಬಸ್​ಗೆ ಜನರನ್ನು ಹತ್ತಿಸಿ ಕೋಪ ಶಮನ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ಬಾಗಿಲ ಬಳಿ ಖಾಸಗಿ ಬಸ್ ನಿರ್ವಾಹಕರು ನಿಂತುಕೊಂಡು ಬರುವ ಪ್ರಯಾಣಿಕರನ್ನು ಖಾಸಗಿ ಬಸ್​ಗಳಿಗೆ ಹತ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರಿ ಬಸ್​ನಲ್ಲಿ ತೆರಳಿದರೆ ಬೇಗ ಊರಿಗೆ ಹೋಗಬಹುದು. ಖಾಸಗಿ ಬಸ್​ಗಳು ಹಲವು ಸ್ಟಾಪ್​​​ಗಳಲ್ಲಿ ನಿಲ್ಲಿಸಿಕೊಂಡು ಹೋಗುತ್ತಾರೆ. ಇಷ್ಟವಿಲ್ಲದಿದ್ದರೂ ಖಾಸಗಿ ಬಸ್​ನಲ್ಲೇ ಹೋಗಬೇಕಿದ್ದು, ಸರ್ಕಾರಿ ಬಸ್​ಗೆ ಹತ್ತಲು ಬಿಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.