ಬೆಂಗಳೂರು: ಈ ಬಾರಿಯ ಸಿಇಟಿ ಫಲಿತಾಂಶ ಪಕಟವಾಗಿದೆ. ಈ ಸಾಲಿನ ಫಲಿತಾಂಶವನ್ನು ಇಂದು ಪ್ರಾಧಿಕಾರದಲ್ಲಿ
ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಪ್ರಕಟಿಸಿದರು.
ಎಂಜಿನಿಯರಿಂಗ್ನಲ್ಲಿ ಜಫಿನ್ ಬಿಜು ಮೊದಲ ಸ್ಥಾನ ಪಡೆದರೆ, ಚಿನ್ಮಯಿ ಎರಡನೇ ಸ್ಥಾನ ಹಾಗೂ ಸಾಯಿ ಸಾಕೇತಿಕ ಚೆಕೂರಿ ಮೂರನೇ ಸ್ಥಾನ ಪಡೆದಿದ್ದಾರೆ.
ಬಿಎಸ್ಸಿ ಕೃಷಿ ವಿಭಾಗದ ಸಿಇಟಿಯಲ್ಲಿ ಬೆಂಗಳೂರಿನ ಕೀರ್ತನಾ ಎಂ ಮೊದಲ, ಮಂಗಳೂರಿನ ಭುವನಾ ಬಿ ಹಾಗೂ ಹಾಸನದ ಶ್ರೀಕಾಂತ್ ಎಂಎಲ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪಿ ಮಹೇಶ್ ಅನಂದ್ ಮೊದಲ ಸ್ಥಾನ ಪಡೆದು ಕೊಂಡಿದ್ದು, ಮೊದಲ ಹತ್ತು ಸ್ಥಾನಗಳಲ್ಲಿ 6 ಸ್ಥಾನ ಬೆಂಗಳೂರು, 2 ಮಂಗಳೂರು, 1 ಮೈಸೂರುಗೆ,1 ದಾವಣಗೆರೆಗೆ ಲಭಿಸಿದೆ.
ಬಿ ಎಸ್ಸಿ ಕೃಷಿ ವಿಭಾಗದಲ್ಲಿ ಕೀರ್ತನ ಎಂ ಅರುಣ್ ಮೊದಲ ಸ್ಥಾನ ಪಡೆದು ಕೊಂಡಿದ್ದಾರೆ. ಬೆಂಗಳೂರಿಗೆ 3 ಮಂಗಳೂರು4, ಮೈಸೂರು ಹಾಸನ, ಶಿವಮೊಗ್ಗ ತಲಾ 1 ಸ್ಥಾನ ಬಂದಿದೆ.
ಪಶು ವೈದ್ಯಕೀಯ ವಿಭಾಗದಲ್ಲಿ ಪಿ ಮಹೇಶ್ ಆನಂದ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು, ಬೆಂಗಳೂರಿಗೆ 8 ಸ್ಥಾನ, ದಾವಣಗೆರೆ ಮೈಸೂರಿಗೆ ತಲಾ 1 ಸ್ಥಾನ ಬಂದಿದೆ.
ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಸಾಯಿ ಸಾಕೇತಿಕ ಚಕುರಿ ಮೊದಲ ಸ್ಥಾನ ಪಡೆದಿದ್ದು, ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 7 ಮತ್ತು ಮಂಗಳೂರು, ಮೈಸೂರು, ಬಳ್ಳಾರಿ ತಲಾ ಒಂದೊಂದು ಸ್ಥಾನಸಿಕ್ಕಿದೆ.
ಏಪ್ರಿಲ್ 29,30 ಮತ್ತು ಮೇ 1 ರಂದು ರಾಜ್ಯಾದ್ಯಂತ ಒಟ್ಟು, 431 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು.. ಈ ವರ್ಷ 180315 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು..
ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಾಧಿಕಾರದ ವೆಬ್ಸೈಟ್ ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.ಫಲಿತಾಂಶಕ್ಕಾಗಿ ವೀಕ್ಷಿಸಬೇಕಾದ ವೆಬ್ಸೈಟ್ಗಳು:
http://kea.kar.nic.in
http://cet.kar.nic.in
http://karresults.nic.in
ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ
ಎಂಜಿನಿಯರಿಂಗ್ ವಿಭಾಗ: ಜಫಿನ್ ಬಿಜು (ಪ್ರಥಮ) ಬೆಂಗಳೂರು, ಚಿನ್ಮಯಿ (ದ್ವಿತೀಯ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ (ತೃತೀಯ) ಬೆಂಗಳೂರು
ನ್ಯಾಚುರೋಪತಿ ಮತ್ತು ಯೋಗ: ಮಹೇಶ್ ಆನಂದ್ (ಪ್ರಥಮ) ಬೆಂಗಳೂರು, ವಸುದೇವ್ (ದ್ವಿತೀಯ) ಮೈಸೂರು, ಉದಿತ್ ಮೋಹನ್ (ತೃತೀಯ) ಬೆಂಗಳೂರು
ಬಿಎಸ್ಸಿ ಕೃಷಿ: ಕೀರ್ತನಾ ಎಂ ಅರುಣ್ (ಪ್ರಥಮ) ಬೆಂಗಳೂರು, ಭುವನ್ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್ ಎಂಲ್ (ತೃತೀಯ) ಹಾಸನ
ಬಿಎಸ್ಸಿ ಪಶುವಿಜ್ಞಾನ: ಪಿ ಮಹೇಶ್ ಆನಂದ್ (ಪ್ರಥಮ) ಬೆಂಗಳೂರು, ಉದಿತ್ ಮೋಹನ್ (ದ್ವಿತೀಯ) ಬೆಂಗಳೂರು, ಸಾಯಿ ರಾಮ್ (ತೃತೀಯ) ಬೆಂಗಳೂರು
ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ (ಪ್ರಥಮ) ಬೆಂಗಳೂರು, ಜಫಿನ್ ಬಿಜು (ದ್ವಿತೀಯ) ಬೆಂಗಳೂರು, ಆರ್.ಚಿನ್ಮಯ್ (ತೃತೀಯ) ಮಂಗಳೂರು
ಈ ಸಲ ಸುಮಾರು 1.90 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ., ಶೇ 92ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.