ETV Bharat / state

ಬೀದರ್​ನಲ್ಲಿ ರಂಗೇರಿದ ಲೋಕಲ್ ಅಖಾಡ: ಅಭ್ಯರ್ಥಿಗಳ ಗೆಲುವಿಗಾಗಿ ನಡೆಯುತ್ತಿದೆ ಕಸರತ್ತು...! - undefined

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬೀದರ್​ನಲ್ಲಿ ನೇರ ಫೈಟ್ ನಡೆಯುತ್ತಿದ್ದು,ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

Bidar
author img

By

Published : May 27, 2019, 10:04 PM IST

ಬೀದರ್: ದಿಲ್ಲಿ ಎಲೆಕ್ಷನ್ ಮೂಡಿನಿಂದ ಹೊರ ಬರುವ ಮೊದಲೇ ಗಲ್ಲಿ ಎಲೆಕ್ಷನ್ ಕಾವು ರಂಗೇರುತ್ತಿದ್ದು, ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಗಲಿರುಳು ಕಸರತ್ತು ನಡೆಸುತ್ತಿವೆ.

ಜಿಲ್ಲೆಯ ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಚಿಟಗುಪ್ಪ ಸ್ಥಳೀಯ ಸಂಸ್ಥೆಗಳ 128 ವಾರ್ಡ್​ಗಳಿಗೆ ಮೇ.29ರಂದು ಸ್ಥಳೀಯ ಮಟ್ಟದ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಸುಡು ಬಿಸಿಲಿನಲ್ಲೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಬೀದರ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಪ್ರಚಾರ

ಔರಾದ್​ನಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟ್:

ಔರಾದ್ ಪಟ್ಟಣ ಪಂಚಾಯತ್​ನ 19 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದ ಗೆಲುವು ಸಾಧಿಸಿದ ಹುರುಪಿನಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸ್ಥಳೀಯ ಶಾಸಕ ಪ್ರಭು ಚವ್ಹಾಣ್​ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿರುವ ಪಟ್ಟಣ ಪಂಚಾಯತ್​​ ಮೇಲೆ ಬಿಜೆಪಿ ಅಧಿಕಾರ ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದೆ.

ಇನ್ನೂ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಾರ್ಡ್​ಗಳಲ್ಲಿ ಪ್ರಚಾರ ಮಾಡುತ್ತಿದ್ದು, ಕೈ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಕಣದಲ್ಲಿ ಒಟ್ಟು 430 ಅಭ್ಯರ್ಥಿಗಳಿದ್ದಾರೆ.

ನೀರು ಕೊಟ್ಟು ಓಟ್ ಕೇಳುತ್ತಿರುವ ಅಭ್ಯರ್ಥಿಗಳು:

ಭಯಂಕರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಔರಾದ್ ನಿವಾಸಿಗರ ಪಾಲಿಗೆ ಚುನಾವಣೆ ಘೋಷಣೆಯಾಗಿದ್ದು ಮರುಭೂಮಿಯಲ್ಲಿ ಓಯಸಿಸ್ ಬಂದ ಹಾಗೆ ಆಗಿದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟರು ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚುನಾವಣೆ ಘೋಷಣೆ ಆದಾಗಿನಿಂದ ಅಭ್ಯರ್ಥಿಗಳು ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಟ್ಟು ಮತ ಕೇಳುತ್ತಿದ್ದಾರೆ. ಪರಿಣಾಮ ಪ್ರತಿ ಬಡಾವಣೆಗೆ ದಿನಕ್ಕೆ 15 ರಿಂದ 20 ಟ್ಯಾಂಕರ್ ನೀರು ಹರಿಸಲಾಗುತ್ತಿದೆ. ಇದು ಜನರ ಖುಷಿಗೆ ಕಾರಣವಾಗಿದೆ.

Bidar
ವೋಟಿಗಾಗಿ ನೀರು ಕೊಡುತ್ತಿರುವ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ವಾರ್ಡ್​ಗಳ ವಿವರ:

* ಬಸವಕಲ್ಯಾಣ ನಗರಸಭೆ- 31 ವಾರ್ಡ್
* ಹುಮನಾಬಾದ್​ ಪುರಸಭೆ-27 ವಾರ್ಡ್
* ಚಿಟಗುಪ್ಪ ಪುರಸಭೆ-23 ವಾರ್ಡ್
* ಭಾಲ್ಕಿ ಪುರಸಭೆ-27 ವಾರ್ಡ್
* ಔರಾದ್(ಬಿ) ಪಟ್ಟಣ ಪಂಚಾಯತ್-20 ವಾರ್ಡ್

ಬೀದರ್: ದಿಲ್ಲಿ ಎಲೆಕ್ಷನ್ ಮೂಡಿನಿಂದ ಹೊರ ಬರುವ ಮೊದಲೇ ಗಲ್ಲಿ ಎಲೆಕ್ಷನ್ ಕಾವು ರಂಗೇರುತ್ತಿದ್ದು, ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಗಲಿರುಳು ಕಸರತ್ತು ನಡೆಸುತ್ತಿವೆ.

ಜಿಲ್ಲೆಯ ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಚಿಟಗುಪ್ಪ ಸ್ಥಳೀಯ ಸಂಸ್ಥೆಗಳ 128 ವಾರ್ಡ್​ಗಳಿಗೆ ಮೇ.29ರಂದು ಸ್ಥಳೀಯ ಮಟ್ಟದ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಸುಡು ಬಿಸಿಲಿನಲ್ಲೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಬೀದರ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಪ್ರಚಾರ

ಔರಾದ್​ನಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟ್:

ಔರಾದ್ ಪಟ್ಟಣ ಪಂಚಾಯತ್​ನ 19 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದ ಗೆಲುವು ಸಾಧಿಸಿದ ಹುರುಪಿನಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸ್ಥಳೀಯ ಶಾಸಕ ಪ್ರಭು ಚವ್ಹಾಣ್​ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿರುವ ಪಟ್ಟಣ ಪಂಚಾಯತ್​​ ಮೇಲೆ ಬಿಜೆಪಿ ಅಧಿಕಾರ ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದೆ.

ಇನ್ನೂ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಾರ್ಡ್​ಗಳಲ್ಲಿ ಪ್ರಚಾರ ಮಾಡುತ್ತಿದ್ದು, ಕೈ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಕಣದಲ್ಲಿ ಒಟ್ಟು 430 ಅಭ್ಯರ್ಥಿಗಳಿದ್ದಾರೆ.

ನೀರು ಕೊಟ್ಟು ಓಟ್ ಕೇಳುತ್ತಿರುವ ಅಭ್ಯರ್ಥಿಗಳು:

ಭಯಂಕರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಔರಾದ್ ನಿವಾಸಿಗರ ಪಾಲಿಗೆ ಚುನಾವಣೆ ಘೋಷಣೆಯಾಗಿದ್ದು ಮರುಭೂಮಿಯಲ್ಲಿ ಓಯಸಿಸ್ ಬಂದ ಹಾಗೆ ಆಗಿದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನ ಪಟ್ಟರು ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಚುನಾವಣೆ ಘೋಷಣೆ ಆದಾಗಿನಿಂದ ಅಭ್ಯರ್ಥಿಗಳು ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಟ್ಟು ಮತ ಕೇಳುತ್ತಿದ್ದಾರೆ. ಪರಿಣಾಮ ಪ್ರತಿ ಬಡಾವಣೆಗೆ ದಿನಕ್ಕೆ 15 ರಿಂದ 20 ಟ್ಯಾಂಕರ್ ನೀರು ಹರಿಸಲಾಗುತ್ತಿದೆ. ಇದು ಜನರ ಖುಷಿಗೆ ಕಾರಣವಾಗಿದೆ.

Bidar
ವೋಟಿಗಾಗಿ ನೀರು ಕೊಡುತ್ತಿರುವ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ವಾರ್ಡ್​ಗಳ ವಿವರ:

* ಬಸವಕಲ್ಯಾಣ ನಗರಸಭೆ- 31 ವಾರ್ಡ್
* ಹುಮನಾಬಾದ್​ ಪುರಸಭೆ-27 ವಾರ್ಡ್
* ಚಿಟಗುಪ್ಪ ಪುರಸಭೆ-23 ವಾರ್ಡ್
* ಭಾಲ್ಕಿ ಪುರಸಭೆ-27 ವಾರ್ಡ್
* ಔರಾದ್(ಬಿ) ಪಟ್ಟಣ ಪಂಚಾಯತ್-20 ವಾರ್ಡ್

Intro:ರಂಗೇರಿದ ಲೋಕಲ್ ಅಖಾಡ, ಅಭ್ಯರ್ಥಿಗಳ ಗೆಲುವಿಗಾಗಿ ನಡೆಯುತ್ತಿದೆ ಕಸರತ್ತು...!

ಬೀದರ್:
ದಿಲ್ಲಿ ಎಲೇಕ್ಷನ್ ಮೂಢಿನಿಂದ ಹೊರ ಬರುವ ಮೊದಲೆ ಗಲ್ಲಿ ಎಲೇಕ್ಷನ್ ಕಾವು ರಂಗೇರುತ್ತಿದೆ. ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಮಾಡ್ತಿವೆ ಹಗಲಿರುಳು ಕಸರತ್ತು.

ಹೌದು. ಜಿಲ್ಲೆಯ ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್, ಹಾಗೂ ಚಿಟಗುಪ್ಪಾ ಸ್ಥಳೀಯ ಸಂಸ್ಥೆಗಳ 128 ವಾರ್ಡ್ ಗಳಿಗಾಗಿ ಮೇ.29 ರಂದು ನಡೆಯುತ್ತಿರುವ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಸುಡು ಬಿಸಿಲಿನಲ್ಲೂ ಕಾಲಿಗೆ ಗೆಜ್ಜೆ ಕಟ್ಟಕೊಂಡವರ ತರ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ.

ಔರಾದ್ ನಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟ್:

ಔರಾದ್ ಪಟ್ಟಣ ಪಂಚಾಯತನ 19 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಟ್ರೈಟ್ ಫೈಟ್ ನಡೆಯುತ್ತಿದ್ದು. ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದ ಗೆಲುವು ಸಾಧಿಸಿ ಹುರುಪಿನಲ್ಲಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಸ್ಥಳೀಯ ಶಾಸಕ ಪ್ರಭು ಚವ್ಹಾಣ ಪ್ರಚಾರ ಮಾಡಿದ್ದು ಕಾಂಗ್ರೆಸ್ ಹಿಡಿತದಲ್ಲಿರುವ ಪಟ್ಟಣ ಪಂಚಾಯತ ಮೇಲೆ ಬಿಜೆಪಿ ಅಧಿಕಾರ ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ವಾರ್ಡಗಳಲ್ಲಿ ಪ್ರಚಾರ ಮಾಡ್ತಿದ್ದು ಕೈ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.

ನೀರು ಕೊಟ್ಟು ಓಟ್ ಕೆಳ್ತಿರುವ ಅಭ್ಯರ್ಥಿಗಳು:

ಭಯಂಕರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಔರಾದ್ ನಿವಾಸಿಗರ ಪಾಲಿಗೆ ಚುನಾವಣೆ ಘೋಷಣೆಯಾಗಿ ಮರುಭೂಮಿಯಲ್ಲಿ ಓಯಸಿಸ್ ಬಂದ ಹಾಗೆ ಆಗಿದೆ. ಜಿಲ್ಲಾಡಳಿತ ಎಷ್ಟೇ ಪ್ರಯತ್ನಪಟ್ಟರು ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗ್ತಿರಲಿಲ್ಲ. ಚುನಾವಣೆ ಘೋಷಣೆ ಆದಾಗಿನಿಂದ ಆಭ್ಯರ್ಥಿಗಳು ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಟ್ಟು ಮತ ಕೇಳ್ತಿದ್ದಾರೆ. ಪರಿಣಾಮ ಪ್ರತಿ ಬಡಾವಣೆಯಲ್ಲಿ ದಿನಕ್ಕೆ ೧೫ ರಿಂದ ೨೦ ಟ್ಯಾಂಕರ್ ನೀರು ಹರಿಸಲಾಗ್ತಿದೆ. ಇದು ಒಂಥರಾ ಜನರಲ್ಲಿ ಖುಷಿಗೆ ಕಾರಣವಾಗಿದೆ ಎನ್ನಲಾಗ್ತಿದೆ.


* ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ವಾರ್ಡ್ ಗಳು: -128

* ಬಸವಕಲ್ಯಾಣ ನಗರಸಭೆ- 31 ವಾರ್ಡ್.

* ಹುಮನಾಬಾದ ಪುರಸಭೆ-27 ವಾರ್ಡ್.

* ಚಿಟಗುಪ್ಪ ಪುರಸಭೆ-23 ವಾರ್ಡ್.

* ಭಾಲ್ಕಿ ಪುರಸಭೆ-27 ವಾರ್ಡ್.

* ಔರಾದ್(ಬಿ) ಪಟ್ಟಣ ಪಂಚಾಯತ್-20 ವಾರ್ಡ್

* ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು-430

ಬೈಟ್-೦೧: ಪ್ರಭು ಚವ್ಹಾಣ- ಶಾಸಕರು( ಕನ್ನಡಕ ಧರಿಸಿದವರು)

ಬೈಟ್-೦೨: ಸುನೀಲಕುಮಾರ್- ಅಭ್ಯರ್ಥಿ ( ಮುಖದ ಮೇಲೆ ಗಡ್ಡ ಇದೆ)



------ ಈಟಿವಿ ಭಾರತ ಬೀದರ್----------Body:AnilConclusion:Bidar

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.