ಗಂಗಾವತಿ: ಟಿ.ಬಿ.ಜಲಾಶಯದಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದ್ದು ತಾಲೂಕಿನ ಆನೆಗೊಂದಿ ಗ್ರಾಮದ ಕೃಷ್ಣದೇವರಾಯ ಸಮಾಧಿ ಎಂದೇ ಹೇಳಲಾಗುತ್ತಿರವ 64 ಕಾಲಿನ ಮಂಟಪ ನೀರಿನಲ್ಲಿ ಮುಳುಗುತ್ತಿದೆ. ಮಾದ್ವರ ಧಾರ್ಮಿಕ ಕ್ಷೇತ್ರ ನವವೃಂದಾವನ ಮಾರ್ಗ ಕೂಡಾ ಸ್ಥಗಿತಗೊಂಡಿದೆ.
ಶ್ರೀಕೃಷ್ಣದೇವರಾಯ 64 ಲಲಿತಾ ಕಲಾ ವಿದ್ಯೆಗಳಲ್ಲಿ ಪ್ರವೀಣರಾಗಿದ್ದರು ಎಂಬ ಕಾರಣಕ್ಕೆ ಅವರ ಮರಣದ ನಂತರ ತುಂಗಭದ್ರಾ ನದಿ ತಟದಲ್ಲಿ ಸಮಾಧಿ ಮಾಡಿ, ಅದರ ಮೇಲೆ 64 ಕಾಲಿನ ಮಂಟಪ ನಿರ್ಮಿಸಲಾಗಿದೆ ಎಂದು ಹೇಳಾಗುತ್ತಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಭಾರಿ ಮಳೆ, ಕೆಲ ಪ್ರದೇಶಗಳು ಜಲಾವೃತ; ಒಡಿಶಾದಲ್ಲಿ ವಿದ್ಯಾರ್ಥಿಗಳ ಸಂಕಷ್ಟ