ETV Bharat / state

ಪರವಾನಗಿ ಇಲ್ಲದೆ ಜಿಂದಾಲ್​ಗೆ ಮುತ್ತಿಗೆ: ವಾಟಾಳ್​ ಬೆಂಬಲಿಗರಿಗೆ ಸಮನ್ಸ್ ಜಾರಿ

author img

By

Published : Jun 28, 2019, 8:28 PM IST

ರಾಜ್ಯ ಸರ್ಕಾರವು ಜಿಂದಾಲ್​ ಉಕ್ಕು ಕಾರ್ಖಾನೆಗೆ ಸುಮಾರು 3,667 ಎಕರೆ ಭೂಮಿ ಪರಾಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಜೂ. 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಬೆಂಬಲಿಗರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ.

ಪರವಾನಗಿ ಇಲ್ಲದೆ ಜಿಂದಾಲ್​ಗೆ ಮುತ್ತಿಗೆ

ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್​ ಉಕ್ಕು ಕಾರ್ಖಾನೆಗೆ ಸುಮಾರು 3,667 ಎಕರೆ ಭೂಮಿ ಪರಾಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಜೂ. 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಬೆಂಬಲಿಗರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ.

ಅಧಿನಿಯಮ- 107ರನ್ವಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದಡಿ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದು, ವಾಟಾಳ್ ನಾಗರಾಜ್​ ಸಹಚರರಾದ ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ. ಸ್ವಾಮಿ, ಮಲ್ಲಿಕಾರ್ಜುನ, ಶಿವಕುಮಾರ, ವೀರೇಶ, ರಾಜ, ರವಿ ಕುಮಾರ , ಬಿ.ಆರ್. ಕೃಷ್ಣ ಸೇರಿದಂತೆ ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ, ಹೊಸಪೇಟೆ ತಾಲೂಕಿನ ಭಾಗದ ಹೋರಾಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.‌

enforcement of summons notice from sandur taluk tahsildar
ಸಮನ್ಸ್ ನೋಟಿಸ್

ಅಲ್ಲದೇ, ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿ ಮೂರು ಲಕ್ಷ ರೂ.ಗಳ ಬಾಂಡ್ ನೀಡಬೇಕು. ಉತ್ತಮ ವ್ಯಕ್ತಿಯೊಬ್ಬರ ಸಾಕ್ಷಿ ನೀಡಬೇಕು. ಹಾಗೂ ಇನ್ಮುಂದೆ ಯಾವುದೇ ಸಮಾವೇಶ, ರಸ್ತೆ ತಡೆಯಂತಹ ಪ್ರತಿಭಟನೆಯನ್ನು ಪರವಾನಗಿ ಪಡೆಯದೆ ಮಾಡಲ್ಲವೆಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಮುಂದಿನ ಒಂದು ವರ್ಷಕ್ಕೆ ಅನ್ವಯವಾಗುವಂತೆ ಆ ಮುಚ್ಚಳಿಕೆ ಪತ್ರ ಇರಬೇಕು ಎಂದು ದಂಡಾಧಿಕಾರಿಗಳು ಸೂಚಿಸಿದ್ದಾರೆ.‌‌

ಘಟನೆಯ ವಿವರ:

ಜಿಂದಾಲ್​ ಕಾರ್ಖಾನೆ ಮುತ್ತಿಗೆ ಹಾಕುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ಪರವಾನಗಿ ಪಡೆಯದೆ, ಏಕಾಏಕಿ ಆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಯಾವುದೇ ರೀತಿಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಉಂಟಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್​ಐ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಕಾರಿನಿಂದ ಬಂದಿಳಿದ ವಾಟಾಳ್ ನಾಗರಾಜ್​ ಹಾಗೂ ಸಹಚರರು ನೇರವಾಗಿ ಜಿಂದಾಲ್ ಕಾರ್ಖಾನೆ ಮುಂದೆ ನಿಂತುಕೊಂಡರು. ತೋರಣಗಲ್ಲಿನ ಪೊಲೀಸರು ತಡೆದು, ಬ್ಯಾರಿಕೇಡ್ ಒಳಗೆ ನಿಂತುಕೊಂಡು ಪ್ರತಿಭಟಿಸುವಂತೆ ಸೂಚಿಸಿದ್ದರು. ನಿಮ್ಮ ಕೆಲ್ಸ ನೀವ್ ಮಾಡಿ. ನಾ ಎಲ್ಲ ಮಾತನಾಡಿರುವೆ ಎಂದು ವಾಟಾಳ್ ನಾಗರಾಜ್ ಅವರ ಕಡೆಯಿಂದ ಮಾತು ತೂರಿ ಬಂದಿತ್ತು.

ಪೊಲೀಸ್ ಸಿಬ್ಬಂದಿ ಮಾತನ್ನೇ ಲೆಕ್ಕಿಸದ ವಾಟಾಳ್ ನಾಗರಾಜ್​ ಮತ್ತು ಸಹಚರರು ಜಿಂದಾಲ್ ಉಕ್ಕು ಕಾರ್ಖಾನೆ ಗೇಟ್ ಬಳಿ ಬರಲು ಪ್ರಯತ್ನಿಸಿದ್ದರು. ಆಗ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಅನ್ನು ಅಡ್ಡಲಾಗಿ ಸರಿಸಿದರು. ಆ ಬ್ಯಾರಿಕೇಡನ್ನು ತಳ್ಳಿ ಜಿಂದಾಲ್ ಕಾರ್ಖಾನೆ ಪ್ರವೇಶದ್ವಾರ ಪ್ರವೇಶಿಸಲು ಮುಂದಾದಾಗ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಅಲ್ಲಿಂದ ಕರೆದೊಯ್ದಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ

ಇದಕ್ಕೂ ಮುಂಚೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಅವರು ಪ್ರತಿಭಟನೆ ಅಥವಾ ಮುತ್ತಿಗೆಯ ಪರವಾನಗಿ ಪಡೆಯಿರಿ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಅಧ್ಯಕ್ಷ ಯರಿಸ್ವಾಮಿಯವರಿಗೆ ಸೂಚಿಸಿದ್ದರು.

ಪರವಾನಗಿ ಕಡ್ಡಾಯ:

ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಉದ್ದೇಶದೊಂದಿಗೆ ಹೋರಾಟ, ಪ್ರತಿಭಟನೆ ಇರಲಿ, ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಆದರೆ, ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವಿಚಾರದಲ್ಲಿ ವಾಟಾಳ್ ನಾಗರಾಜ್​ ಸಹಚರರು ಪರವಾನಗಿಯನ್ನು ಹೊಂದಿರದ ಕಾರಣ ಸಂಡೂರು ತಹಶೀಲ್ದಾರರು ಸಮನ್ಸ್ ಜಾರಿಗೊಳಿಸಿದ್ದಾರೆ. ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶಾಂತಿಭಂಗ ಹಾಗೂ ಕಾನೂನು ವ್ಯವಸ್ಥೆ ಹದಗೆಡುವ ಆರೋಪದಡಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್​ ಉಕ್ಕು ಕಾರ್ಖಾನೆಗೆ ಸುಮಾರು 3,667 ಎಕರೆ ಭೂಮಿ ಪರಾಭಾರೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಜೂ. 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಬೆಂಬಲಿಗರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ.

ಅಧಿನಿಯಮ- 107ರನ್ವಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದಡಿ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದು, ವಾಟಾಳ್ ನಾಗರಾಜ್​ ಸಹಚರರಾದ ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ. ಸ್ವಾಮಿ, ಮಲ್ಲಿಕಾರ್ಜುನ, ಶಿವಕುಮಾರ, ವೀರೇಶ, ರಾಜ, ರವಿ ಕುಮಾರ , ಬಿ.ಆರ್. ಕೃಷ್ಣ ಸೇರಿದಂತೆ ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ, ಹೊಸಪೇಟೆ ತಾಲೂಕಿನ ಭಾಗದ ಹೋರಾಟಗಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.‌

enforcement of summons notice from sandur taluk tahsildar
ಸಮನ್ಸ್ ನೋಟಿಸ್

ಅಲ್ಲದೇ, ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿ ಮೂರು ಲಕ್ಷ ರೂ.ಗಳ ಬಾಂಡ್ ನೀಡಬೇಕು. ಉತ್ತಮ ವ್ಯಕ್ತಿಯೊಬ್ಬರ ಸಾಕ್ಷಿ ನೀಡಬೇಕು. ಹಾಗೂ ಇನ್ಮುಂದೆ ಯಾವುದೇ ಸಮಾವೇಶ, ರಸ್ತೆ ತಡೆಯಂತಹ ಪ್ರತಿಭಟನೆಯನ್ನು ಪರವಾನಗಿ ಪಡೆಯದೆ ಮಾಡಲ್ಲವೆಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಮುಂದಿನ ಒಂದು ವರ್ಷಕ್ಕೆ ಅನ್ವಯವಾಗುವಂತೆ ಆ ಮುಚ್ಚಳಿಕೆ ಪತ್ರ ಇರಬೇಕು ಎಂದು ದಂಡಾಧಿಕಾರಿಗಳು ಸೂಚಿಸಿದ್ದಾರೆ.‌‌

ಘಟನೆಯ ವಿವರ:

ಜಿಂದಾಲ್​ ಕಾರ್ಖಾನೆ ಮುತ್ತಿಗೆ ಹಾಕುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ಪರವಾನಗಿ ಪಡೆಯದೆ, ಏಕಾಏಕಿ ಆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಯಾವುದೇ ರೀತಿಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಉಂಟಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್​ಐ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಕಾರಿನಿಂದ ಬಂದಿಳಿದ ವಾಟಾಳ್ ನಾಗರಾಜ್​ ಹಾಗೂ ಸಹಚರರು ನೇರವಾಗಿ ಜಿಂದಾಲ್ ಕಾರ್ಖಾನೆ ಮುಂದೆ ನಿಂತುಕೊಂಡರು. ತೋರಣಗಲ್ಲಿನ ಪೊಲೀಸರು ತಡೆದು, ಬ್ಯಾರಿಕೇಡ್ ಒಳಗೆ ನಿಂತುಕೊಂಡು ಪ್ರತಿಭಟಿಸುವಂತೆ ಸೂಚಿಸಿದ್ದರು. ನಿಮ್ಮ ಕೆಲ್ಸ ನೀವ್ ಮಾಡಿ. ನಾ ಎಲ್ಲ ಮಾತನಾಡಿರುವೆ ಎಂದು ವಾಟಾಳ್ ನಾಗರಾಜ್ ಅವರ ಕಡೆಯಿಂದ ಮಾತು ತೂರಿ ಬಂದಿತ್ತು.

ಪೊಲೀಸ್ ಸಿಬ್ಬಂದಿ ಮಾತನ್ನೇ ಲೆಕ್ಕಿಸದ ವಾಟಾಳ್ ನಾಗರಾಜ್​ ಮತ್ತು ಸಹಚರರು ಜಿಂದಾಲ್ ಉಕ್ಕು ಕಾರ್ಖಾನೆ ಗೇಟ್ ಬಳಿ ಬರಲು ಪ್ರಯತ್ನಿಸಿದ್ದರು. ಆಗ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಅನ್ನು ಅಡ್ಡಲಾಗಿ ಸರಿಸಿದರು. ಆ ಬ್ಯಾರಿಕೇಡನ್ನು ತಳ್ಳಿ ಜಿಂದಾಲ್ ಕಾರ್ಖಾನೆ ಪ್ರವೇಶದ್ವಾರ ಪ್ರವೇಶಿಸಲು ಮುಂದಾದಾಗ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಅಲ್ಲಿಂದ ಕರೆದೊಯ್ದಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ

ಇದಕ್ಕೂ ಮುಂಚೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಅವರು ಪ್ರತಿಭಟನೆ ಅಥವಾ ಮುತ್ತಿಗೆಯ ಪರವಾನಗಿ ಪಡೆಯಿರಿ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಅಧ್ಯಕ್ಷ ಯರಿಸ್ವಾಮಿಯವರಿಗೆ ಸೂಚಿಸಿದ್ದರು.

ಪರವಾನಗಿ ಕಡ್ಡಾಯ:

ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಉದ್ದೇಶದೊಂದಿಗೆ ಹೋರಾಟ, ಪ್ರತಿಭಟನೆ ಇರಲಿ, ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಆದರೆ, ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವಿಚಾರದಲ್ಲಿ ವಾಟಾಳ್ ನಾಗರಾಜ್​ ಸಹಚರರು ಪರವಾನಗಿಯನ್ನು ಹೊಂದಿರದ ಕಾರಣ ಸಂಡೂರು ತಹಶೀಲ್ದಾರರು ಸಮನ್ಸ್ ಜಾರಿಗೊಳಿಸಿದ್ದಾರೆ. ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶಾಂತಿಭಂಗ ಹಾಗೂ ಕಾನೂನು ವ್ಯವಸ್ಥೆ ಹದಗೆಡುವ ಆರೋಪದಡಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.

Intro:ಜಿಂದಾಲ್ ಉಕ್ಕು ಕಾರ್ಖಾನೆಗೆ ಮುತ್ತಿಗೆ ಪರವಾನಗಿ ಪಡೆಯದ ವಾಟಾಳ್ ನಾಗರಾಜ ಸಹಚರರು
ಸಂಡೂರು ತಾಲೂಕು ದಂಡಾಧಿಕಾರಿಯಿಂದ ಸಮನ್ಸ್ ನೋಟಿಸ್ ಜಾರಿ..!
ಬಳ್ಳಾರಿ: ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ
ಸರಿ ಸುಮಾರು 3,667 ಎಕರೆ ಭೂಮಿ ಪರಭಾರೆ ಮಾಡಿರುವ ಕ್ರಮವನ್ನು ಖಂಡಿಸಿ ಜೂನ್ 15ರಂದು ಜಿಂದಾಲ್ ಕಾರ್ಖಾನೆ ಎದುರು ಕೈಗೊಂಡಿದ್ದ ಮುತ್ತಿಗೆಯಲ್ಲಿ ಪಾಲ್ಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಸಹಚರರಿಗೆ ಜಿಲ್ಲೆಯ ಸಂಡೂರು ತಾಲೂಕಿನ ದಂಡಾಧಿಕಾರಿ ಈ ದಿನ ಸಮನ್ಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಅಧಿನಿಯಮ- 107ರನ್ವಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಆರೋಪದಡಿ ಸಂಡೂರು ತಾಲೂಕಿನ ದಂಡಾಧಿಕಾರಿ ಸಮನ್ಸ್ ನೋಟಿಸ್ ಜಾರಿಗೊಳಿಸಿದ್ದು, ವಾಟಾಳ್ ನಾಗರಾಜ ಸಹಚರರಾದ ಯರಿಸ್ವಾಮಿ, ಯುಸೂಫ್, ವೆಂಕಟೇಶ, ಬಿ.ಸ್ವಾಮಿ. ಮಲ್ಲಿಕಾರ್ಜುನ, ಶಿವಕುಮಾರ, ವೀರೇಶ, ರಾಜ, ರವಿ ಕುಮಾರ , ಬಿ.ಆರ್. ಕೃಷ್ಣ ಸೇರಿದಂತೆ ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ, ಹೊಸಪೇಟೆ ತಾಲೂಕಿನ ಭಾಗದ ಹೋರಾಟಗಾರರ ಮೇಲೆ ಸಮನ್ಸ್ ನೋಟಿಸ್ ಜಾರಿ ಮಾಡಲಾಗಿದೆ.‌ ಅಲ್ಲದೇ,
ಈ ದಿನವೇ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಿ ಮೂರು ಲಕ್ಷ ರೂ.ಗಳ ಬಾಂಡ್ ನೀಡಬೇಕು.
ಉತ್ತಮ ವ್ಯಕ್ತಿಯೊಬ್ಬರ ಸಾಕ್ಷಿ ನೀಡಬೇಕು. ಹಾಗೂ ಇನ್ಮುಂದೆ ಯಾವುದೇ ಸಮಾವೇಶ ರಸ್ತೆತಡೆಯಂತಹ ಪ್ರತಿಭಟನೆಯನ್ನು ಪರವಾನಗಿ ಪಡೆಯದೆ ಮಾಡಲ್ಲವೆಂದು ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. ಮುಂದಿನ ಒಂದುವರ್ಷಕ್ಕೆ ಅನ್ವಯವಾಗುವಂತೆ ಆ ಮುಚ್ಚಳಿಕೆ ಪತ್ರ ಇರಬೇಕು ಎಂದು ದಂಡಾಧಿಕಾರಿಗಳು ಸೂಚಿಸಿ ದ್ದಾರೆ.‌‌
ಘಟನೆಯ ವಿವರ: ಜಿಂದಾಲ್ ಕಾರ್ಖಾನೆ ಮುತ್ತಿಗೆ ಹಾಕುವ ವೇಳೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರ ಪರವಾನಗಿ ಪಡೆಯದೆ, ಎಕಾಏಕಿ ಆ ಕಾರ್ಖಾನೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಯಾವುದೇ ರೀತಿಯ ಶಾಂತಿಭಂಗ ಹಾಗೂ ಕಾನೂನು ಸುವ್ಯವಸ್ಥೆ ಉಂಟಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್ ಐ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಐಷಾರಾಮಿ ಕಾರಿನೊಳಗೆ ಬಂದಿಳಿದ ವಾಟಾಳ್ ನಾಗರಾಜ ಹಾಗೂ ಸಹಚರರು ನೇರವಾಗಿ ಜಿಂದಾಲ್ ಕಾರ್ಖಾನೆ ಮುಂದೆ ನಿಂತುಕೊಂಡರು. ತೋರಣಗಲ್ಲಿನ ಪೊಲೀಸರು ತಡೆದು, ಬ್ಯಾರಿ ಕ್ಯಾಡ್ ಒಳಗೆ ನಿಂತುಕೊಂಡು ಪ್ರತಿಭಟಿಸುವಂತೆ ಸೂಚಿಸಿದ್ದರು. ನಿಮ್ಮಕೆಲ್ಸ ನೀವ್ ಮಾಡಿ. ನಾ ಎಲ್ಲ ಮಾತನಾಡಿರುವೆ ಎಂಬ ಗುಟುರು ವಾಟಾಳ್ ನಾಗರಾಜ ಅವರ ಕಡೆಯಿಂದ ತೂರಿಬಂತು.
ಪೊಲೀಸ್ ಸಿಬ್ಬಂದಿ ಮಾತನ್ನೇ ಲೆಕ್ಕಿಸದ ವಾಟಾಳ್ ನಾಗರಾಜ ಮತ್ತು ಸಹಚರರು ಜಿಂದಾಲ್ ಉಕ್ಕು ಕಾರ್ಖಾನೆ ಗೇಟ್ ಬಳಿ ಬರಲು ಪ್ರಯತ್ನಿಸಿದ್ದರು. ಆಗ ಪೊಲೀಸ್ ಸಿಬ್ಬಂದಿ ಬ್ಯಾರಿಕ್ಯಾಡ್ ಅನ್ನು ಅಡ್ಡಲಾಗಿ ಸರಿಸಿದರು. ಆ ಬ್ಯಾರಿಕ್ಯಾಡ್ ಅನ್ನೇ ತಳ್ಳಿ ಜಿಂದಾಲ್ ಕಾರ್ಖಾನೆ ಪ್ರವೇಶದ್ವಾರ ಪ್ರವೇಶಿಸಲು ಮುಂದಾದಾಗ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ, ಅಲ್ಲಿಂದ ಕರೆದ್ಯೊಯ್ದುರು.
ಇದಕ್ಕೂ ಮುಂಚೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ ಅವರು ಪ್ರತಿಭಟನೆ ಅಥವಾ ಮುತ್ತಿಗೆಯ ಪರವಾನಗಿ ಪಡೆಯಿರಿ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಅಧ್ಯಕ್ಷ ಯರಿಸ್ವಾಮಿಯವರಿಗೆ ಸೂಚಿಸಿದ್ದರು. ಹೋರಾಟಗಾರರಿಗೆ ಏತಕ್ಕೆ ರೀ ಪರವಾನಗಿ ಎಂದು ವಿತಂಡ ವಾದವನ್ನು ಯರಿಸ್ವಾಮಿ ಮಾಡಿರುವುದು ಇಲ್ಲಿ ಸ್ಮರಿಸಬಹುದು.
ಪರವಾನಗಿ ಕಡ್ಡಾಯ: ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಬಾರದೆಂಬ ಉದ್ದೇಶದೊಂದಿಗೆ ಹೋರಾಟ, ಪ್ರತಿಭಟನೆ ಇರಲಿ. ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಆದರೆ, ಜಿಂದಾಲ್ ಕಾರ್ಖಾನೆ Body:ಮುತ್ತಿಗೆ ಹಾಕುವ ವಿಚಾರದಲ್ಲಿ ವಾಟಾಳ್ ನಾಗರಾಜ ಸಹಚರರು ಪರವಾನಗಿಯನ್ನು ಹೊಂದಿರದ ಕಾರಣ ಸಂಡೂರು ತಹಸೀಲ್ದಾರರು ಸಮನ್ಸ್ ನೋಟಿಸ್ ಜಾರಿಗೊಳಿಸಿ ದ್ದಾರೆ. ತಹಸೀಲ್ದಾರ್ ಅವರ ಸೂಚನೆಯ ಮೇರೆಗೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಶಾಂತಿಭಂಗ ಹಾಗೂ ಕಾನೂನು ವ್ಯವಸ್ಥೆ ಹದಗೆಡುವ ಆರೋಪದಡಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ರಿಪೋರ್ಟರ್ ಆ್ಯಪ್ ಮೂಲಕ ಈ ಬೈಟ್ ಕಳಿಸಿರುವೆ.

KN_BLY_03_28_JINDAL_AGAINST_PROTEST_SP_BYTE_7203310

Wrap app ಮೂಲಕ ಈ ನೋಟಿಸ್ ಗಳನ್ನು ಕಳಿಸಿರುವೆ.

KN_BLY_03e_28_JINDAL_AGAINST_PROTEST_NOTICE_ISSUED_7203310

KN_BLY_03f_28_JINDAL_AGAINST_PROTEST_NOTICE_ISSUED_7203310

KN_BLY_03g_28_JINDAL_AGAINST_PROTEST_NOTICE_ISSUED_7203310

KN_BLY_03h_28_JINDAL_AGAINST_PROTEST_NOTICE_ISSUED_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.