ETV Bharat / state

ಇವೆರಡು ಬೇಡಿಕೆ ಈಡೇರದಿದ್ದರೆ ನನ್ನ ಮುಂದಿನ ನಡೆ ಕಾದು ನೋಡಿ: ಆನಂದ್​​ ಸಿಂಗ್​​​​ - undefined

ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಾಭಾರೆ ಮಾಡೋ ವಿಚಾರ ಕೈ ಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್​ ಸಿಂಗ್ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಶಾಸಕ ಬಿ.ಎಸ್.ಆನಂದಸಿಂಗ್
author img

By

Published : Jul 8, 2019, 5:07 PM IST

ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಾಭಾರೆ ಮಾಡೋ ವಿಚಾರ ಕೈ ಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ನನ್ನ ಪ್ರಮುಖ ಬೇಡಿಕೆಯಾಗಿದ್ದು, ನನ್ನ ಇವೆರಡೂ ಬೇಡಿಕೆ ಈಡೇರಬೇಕು ಎಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್​​​ ಸಿಂಗ್ ಪಟ್ಟು ಹಿಡಿದಿದ್ದಾರೆ.

ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್​​ ಸಿಂಗ್

ಜಿಲ್ಲೆಯ ಹೊಸಪೇಟೆ ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್​​ ಸಿಂಗ್, ಈಗಾಗಲೇ ನನ್ನ ಬೇಡಿಕೆಯನ್ನು ಕಾಂಗ್ರೆಸ್ ಸಿಎಲ್​​​ಪಿ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿರುವೆ. ಮೊನ್ನೆ ತಾನೇ ಅಮೆರಿಕದಿಂದ ಸಿಎಂ ಕುಮಾರಸ್ವಾಮಿಯವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಿಮ್ಮ ಬೇಡಿಕೆಯನ್ನು ನಾನು ಭಾರತಕ್ಕೆ ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.

ಈ ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖಾನೆಗಳಿಗೆ ಭೂಮಿ ಮಾರಾಟ ಮಾಡಬಾರದು. ಉದ್ಯೋಗ ಸೃಷ್ಟಿ ಮಾಡೋ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡೋದು ಸೂಕ್ತವಲ್ಲ. ಲೀಜ್ ಮಾತ್ರ ಕೊಡಿ. ವಿಜಯನಗರ ಜಿಲ್ಲೆ ಆಗಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಯಾವ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡುವೆ. ನನ್ನ ಬೇಡಿಕೆ ಈಡೇರಿಸುವವರೆಗೆ ನನ್ನ ತಿರ್ಮಾನ ವಾಪಸ್ ತಗೋಳಲ್ಲ. ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸಬೇಕೆಂದು ಮನವಿ ಮಾಡುತ್ತೇನೆ. ಶಾಸಕರ ರಾಜೀನಾಮೆ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಎಸ್.ಟಿ.ಸೋಮಶೇಖರ್ ಹೇಳಿಕೆಗೆ ನಾನು ಉತ್ತರಿಸಲ್ಲ. ನನ್ನ ಕ್ಷೇತ್ರದಲ್ಲಿ ಇದ್ದೇನೆ. ನನ್ನ ಎರಡು ಬೇಡಿಕೆ ಈಡೇರಿಸೋವರೆಗೂ ನನ್ನ ನಿಲುವು ಬದಲಾಗುವುದಿಲ್ಲ ಎಂದರು. ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಈಗ ಹದಿನಾಲ್ಕು ಶಾಸಕರು ಕಾದು ನೋಡಿ ಅಂತಾರಲ್ಲ, ಅವರಂತೆ ನಾನೂ ಕೂಡ ಕಾದು ನೋಡಿ ಎನ್ನುವೆ ಎಂದರು.

ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಾಭಾರೆ ಮಾಡೋ ವಿಚಾರ ಕೈ ಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ನನ್ನ ಪ್ರಮುಖ ಬೇಡಿಕೆಯಾಗಿದ್ದು, ನನ್ನ ಇವೆರಡೂ ಬೇಡಿಕೆ ಈಡೇರಬೇಕು ಎಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್​​​ ಸಿಂಗ್ ಪಟ್ಟು ಹಿಡಿದಿದ್ದಾರೆ.

ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್. ಆನಂದ್​​ ಸಿಂಗ್

ಜಿಲ್ಲೆಯ ಹೊಸಪೇಟೆ ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್​​ ಸಿಂಗ್, ಈಗಾಗಲೇ ನನ್ನ ಬೇಡಿಕೆಯನ್ನು ಕಾಂಗ್ರೆಸ್ ಸಿಎಲ್​​​ಪಿ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿರುವೆ. ಮೊನ್ನೆ ತಾನೇ ಅಮೆರಿಕದಿಂದ ಸಿಎಂ ಕುಮಾರಸ್ವಾಮಿಯವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಿಮ್ಮ ಬೇಡಿಕೆಯನ್ನು ನಾನು ಭಾರತಕ್ಕೆ ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.

ಈ ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖಾನೆಗಳಿಗೆ ಭೂಮಿ ಮಾರಾಟ ಮಾಡಬಾರದು. ಉದ್ಯೋಗ ಸೃಷ್ಟಿ ಮಾಡೋ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡೋದು ಸೂಕ್ತವಲ್ಲ. ಲೀಜ್ ಮಾತ್ರ ಕೊಡಿ. ವಿಜಯನಗರ ಜಿಲ್ಲೆ ಆಗಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಯಾವ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡುವೆ. ನನ್ನ ಬೇಡಿಕೆ ಈಡೇರಿಸುವವರೆಗೆ ನನ್ನ ತಿರ್ಮಾನ ವಾಪಸ್ ತಗೋಳಲ್ಲ. ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸಬೇಕೆಂದು ಮನವಿ ಮಾಡುತ್ತೇನೆ. ಶಾಸಕರ ರಾಜೀನಾಮೆ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಎಸ್.ಟಿ.ಸೋಮಶೇಖರ್ ಹೇಳಿಕೆಗೆ ನಾನು ಉತ್ತರಿಸಲ್ಲ. ನನ್ನ ಕ್ಷೇತ್ರದಲ್ಲಿ ಇದ್ದೇನೆ. ನನ್ನ ಎರಡು ಬೇಡಿಕೆ ಈಡೇರಿಸೋವರೆಗೂ ನನ್ನ ನಿಲುವು ಬದಲಾಗುವುದಿಲ್ಲ ಎಂದರು. ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಈಗ ಹದಿನಾಲ್ಕು ಶಾಸಕರು ಕಾದು ನೋಡಿ ಅಂತಾರಲ್ಲ, ಅವರಂತೆ ನಾನೂ ಕೂಡ ಕಾದು ನೋಡಿ ಎನ್ನುವೆ ಎಂದರು.

Intro:ಬೇಡಿಕೆ ಈಡೇರದಿದ್ದರೆ ನನ್ನ ಮುಂದಿನ ನಡೆ ಕಾದುನೋಡಿ!
ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3667
ಎಕರೆ ಭೂಮಿಯನ್ನು ಪರಭಾರೆ ಮಾಡೋ ವಿಚಾರ ಕೈಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ನನ್ನ ಪ್ರಮುಖ ಬೇಡಿಕೆಯಾಗಿದ್ದು, ನನ್ನ ಇವೆರಡೂ ಈಡೇರಬೇಕು ಎಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದಸಿಂಗ್ ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆನಂದಸಿಂಗ್, ಈಗಾಗಲೇ ನನ್ನ ಬೇಡಿಕೆಯನ್ನು ಕಾಂಗ್ರೆಸ್ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿರುವೆ. ಮೊನ್ನೆತಾನೇ ಅಮೇರಿಕಾದಿಂದ ಸಿಎಂ ಕುಮಾರಸ್ವಾಮಿಯವರು ನನಗೆ ದೂರವಾಣಿ ಕರೆಮಾಡಿ ಮಾತ ನಾಡಿದ್ದಾರೆ. ಆಯ್ತು, ನಿಮ್ಮ ಬೇಡಿಕೆಯನ್ನು ನಾನು ಭಾರತಕ್ಕೆ ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.
ಈ ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖಾನೆಗಳಿಗೆ ಭೂಮಿ ಮಾರಾಟ ಮಾಡಬಾರದು. ಉದ್ಯೋಗ ಸೃಷ್ಟಿ ಮಾಡೋ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡೋದು ಸೂಕ್ತವಲ್ಲ. ಲೀಜ್ ಮಾತ್ರ ಕೊಡಿ. ವಿಜಯನಗರ ಜಿಲ್ಲೆ ಆಗಬೇಕೆಂದು ಮನವಿ ಮಾಡಿದ್ದೇನೆ. ನಾನು ಜೊತೆ ಚರ್ಚೆಗೆ ಹೋಗೊಲ್ಲ. ರಾಜ್ಯ ಸರ್ಕಾರ ಏನೂ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡುವೆ.
Body:ನನ್ನ ಬೇಡಿಕೆ ಈಡೇರಿಸುವವರೆಗೆ ನನ್ನ ತಿರ್ಮಾನ ವಾಪಸ್ ತಗೋಳ್ಳಲ್ಲ.. ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸಬೇಕೆಂದು ಮನವಿ ಮಾಡುತ್ತೇನೆ. ಶಾಸಕರ ರಾಜೀನಾಮೆ ವಿಚಾರ, ನನಗೆ ಯಾವುದೇ ಸಂಬಂಧವಿಲ್ಲ. ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಉತ್ತರಿಸಲ್ಲ. ನಾನು ನನ್ನ ಕ್ಷೇತ್ರದಲ್ಲಿ ಇದ್ದೇನೆ. ನನಗೆ ಹಿರಿಯರು ಫೋನ್ ಮಾಡಿ ಹೇಳಿದ್ದಾರೆ. ನನ್ನ ಬೇಡಿಕೆ ಎರಡನ್ನು ಈಡೇರಿಸೋವರೆಗೂ ನನ್ನ ನಿಲುವು ಬದಲಾಗಲ್ಲ ಎಂದರು.
ಕಾದುನೋಡಿ: ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಈಗ ಹದಿನಾಲ್ಕು ಶಾಸಕರು ಕಾದುನೋಡಿ ಅಂತಾರಲ್ಲ. ಅವರಂತೆ ನಾನೂ ಕೂಡ ಕಾದು ನೋಡಿ ಎನ್ನುವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ

Conclusion:KN_BLY_01_MLA_ANADA_SINGH_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.