ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಗಿಮಾವಿನಹಳ್ಳಿ ಗ್ರಾಮದ ಉಡುಸಲಮ್ಮ ಕೆರೆಯಲ್ಲಿ ಈಜಾಡಲು ಹೋಗಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಮಗಿಮಾವಿನಹಳ್ಳಿ ಗ್ರಾಮದ ಬಾಲಕ ವಿಠ್ಠಲ (14) ಮೃತ ಬಾಲಕ ಎಂದು ಗುರುತಿಸಲಾಗಿದೆ. ಗ್ರಾಮದ ನಾಲ್ಕು ಮಂದಿ ಸ್ನೇಹಿತರೊಡನೆ ಉಡುಸಲಮ್ಮ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ, ಈಜು ಬಾರದೇ ಈ ದುರ್ಘಟನೆ ನಡೆದಿದೆ. ನೀರಿನಿಂದ ಬಾಲಕ ವಿಠ್ಠಲನನ್ನು ಹೊರಗೆ ತೆಗೆದು ಆಸ್ಪತ್ರೆಗಾಗಿ ಹೊಸಪೇಟೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದೊಂದು ವರ್ಷದ ಹಿಂದಷ್ಟೇ ಈ ಬಾಲಕನ ತಂದೆ ಹನುಮಂತಪ್ಪ ಮೃತಪಟ್ಟಿದ್ದರು. ಇದೀಗ ತಾಯಿ ಮಂಜಮ್ಮಗೆ ಒಬ್ಬನೇ ಮಗನಾಗಿದ್ದ ವಿಠ್ಠಲ್ನ ಆಗಲಿಕೆಯಿಂದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.