ಚಿಕ್ಕೋಡಿ: ನೂತನವಾಗಿ ಪ್ರಾರಂಭವಾದ ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ.ಎಂ.ಐಹೊಳೆ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ಸ್ಟೇಷನ್ನಲ್ಲಿ ಹಸಿರು ನಿಶಾನೆ ತೋರಿಸಿದರು.
ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ಒಂದೇ ಒಂದು ಸೂಪರ್ ಫಾಸ್ಟ್ ರೈಲನ್ನು ಹಿಡಿಯಲು ಅಥಣಿ, ರಾಯಬಾಗ ಮತ್ತು ಚಿಕ್ಕೋಡಿ ಜನರು ಪರದಾಡುತ್ತಿದ್ದರು. ಹಾಗಾಗಿ ಹೊಸ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈತರು, ವ್ಯಾಪರಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಿದೆ.