ETV Bharat / state

ಸೋನಿಯಾಗೆ ಎಂ.ಬಿ.ಪಾಟೀಲ್​ರ ಪತ್ರ: ಅದು ಅವರ ವೈಯಕ್ತಿಕ ಅಂದ್ರು ಸತೀಶ್​​ - undefined

ಪ್ರತ್ಯೇಕ ಧರ್ಮದ ಕುರಿತು ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದದ್ದು ಅವರ ವೈಯಕ್ತಿಕ ಎಂದು ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ಎಂ. ಬಿ ಪಾಟೀಲ್ ಪತ್ರದ ಕುರಿತು ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ
author img

By

Published : Apr 17, 2019, 11:59 AM IST

ಬೆಳಗಾವಿ: ಪ್ರತ್ಯೇಕ ಧರ್ಮದ ಕುರಿತು ಎಂ.ಬಿ.ಪಾಟೀಲ್ ಹೈಕಮಾಂಡ್​​ಗೆ ಪತ್ರ ಬರೆದಿದ್ದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ, ಇದು ಎಂ.ಬಿ.ಪಾಟೀಲ್​ರ ವೈಯಕ್ತಿಕ ವಿಷಯ ಎಂದು ಹೇಳಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸೋನಿಯಾ ಗಾಂಧಿ ಅವರಿಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರ ಬಿಜೆಪಿಗರಿಗೆ ಅಸ್ತ್ರವಾಗಿದೆ. ಯಡಿಯೂರಪ್ಪ ಸಹ ಇದೇ ವಿಚಾರವಾಗಿ ಎಂ.ಬಿ. ಪಾಟೀಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಂ. ಬಿ ಪಾಟೀಲ್ ಪತ್ರದ ಕುರಿತು ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ

ಈ ಬಗ್ಗೆ ಮಾಧ್ಯಮದವರು ಸತೀಶ್​ ಜಾರಕಿಹೊಳಿರನ್ನು ಪ್ರಶ್ನಿಸಿದಾಗ, ಇದು ಎಂ.ಬಿ.ಪಾಟೀಲ್ ಅವರ ವೈಯಕ್ತಿಕ ವಿಷಯ. ಈಗಾಗಲೇ ಪತ್ರದ ಕುರಿತು ಹಲವಾರು ಚರ್ಚೆಗಳಾಗಿವೆ. ಇದು ಮುಗಿದು ಹೋದ ಅಧ್ಯಾಯ. ಈ ಪತ್ರವನ್ನು ಹೈಕಮಾಂಡ್​​ಗೆ ಬರೆದಿಲ್ಲ ಎಂದು ಸ್ವತಃ ಎಂ.ಬಿ.ಪಾಟೀಲ್ ಹೇಳಿರುವಾಗ ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.

ಲಿಂಗಾಯತ ಧರ್ಮ ವಿಭಜನೆ ಮಾಡಿದರೆ ಬಿಜೆಪಿಗೆ ಇರುವ ಲಿಂಗಾಯತ ಮತಗಳನ್ನು ಒಡೆಯಬಹುದು. ಹಾಗೂ ಆರ್​ಎಸ್​ಎಸ್​ನಿಂದ ಲಿಂಗಾಯತ ಯುವಕರನ್ನು ಬೇರ್ಪಡಿಸಿ, ಬಿಜೆಪಿಗೆ ಆಗುತ್ತಿರುವ ಲಾಭವನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಲಿಂಗಾಯತ ಧರ್ಮ ವಿಭಜನೆಯನ್ನು ಸರ್ಕಾರ ಒಪ್ಪಬೇಕು ಎಂದು ಉಲ್ಲೇಖಿಸಲಾದ ವಿವಾದಾತ್ಮಕ ಪತ್ರವನ್ನು ಎಂ.ಬಿ. ಪಾಟೀಲ್​ರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು ಎನ್ನಲಾಗಿದೆ.

ಬೆಳಗಾವಿ: ಪ್ರತ್ಯೇಕ ಧರ್ಮದ ಕುರಿತು ಎಂ.ಬಿ.ಪಾಟೀಲ್ ಹೈಕಮಾಂಡ್​​ಗೆ ಪತ್ರ ಬರೆದಿದ್ದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ, ಇದು ಎಂ.ಬಿ.ಪಾಟೀಲ್​ರ ವೈಯಕ್ತಿಕ ವಿಷಯ ಎಂದು ಹೇಳಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸೋನಿಯಾ ಗಾಂಧಿ ಅವರಿಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರ ಬಿಜೆಪಿಗರಿಗೆ ಅಸ್ತ್ರವಾಗಿದೆ. ಯಡಿಯೂರಪ್ಪ ಸಹ ಇದೇ ವಿಚಾರವಾಗಿ ಎಂ.ಬಿ. ಪಾಟೀಲ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಂ. ಬಿ ಪಾಟೀಲ್ ಪತ್ರದ ಕುರಿತು ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ

ಈ ಬಗ್ಗೆ ಮಾಧ್ಯಮದವರು ಸತೀಶ್​ ಜಾರಕಿಹೊಳಿರನ್ನು ಪ್ರಶ್ನಿಸಿದಾಗ, ಇದು ಎಂ.ಬಿ.ಪಾಟೀಲ್ ಅವರ ವೈಯಕ್ತಿಕ ವಿಷಯ. ಈಗಾಗಲೇ ಪತ್ರದ ಕುರಿತು ಹಲವಾರು ಚರ್ಚೆಗಳಾಗಿವೆ. ಇದು ಮುಗಿದು ಹೋದ ಅಧ್ಯಾಯ. ಈ ಪತ್ರವನ್ನು ಹೈಕಮಾಂಡ್​​ಗೆ ಬರೆದಿಲ್ಲ ಎಂದು ಸ್ವತಃ ಎಂ.ಬಿ.ಪಾಟೀಲ್ ಹೇಳಿರುವಾಗ ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.

ಲಿಂಗಾಯತ ಧರ್ಮ ವಿಭಜನೆ ಮಾಡಿದರೆ ಬಿಜೆಪಿಗೆ ಇರುವ ಲಿಂಗಾಯತ ಮತಗಳನ್ನು ಒಡೆಯಬಹುದು. ಹಾಗೂ ಆರ್​ಎಸ್​ಎಸ್​ನಿಂದ ಲಿಂಗಾಯತ ಯುವಕರನ್ನು ಬೇರ್ಪಡಿಸಿ, ಬಿಜೆಪಿಗೆ ಆಗುತ್ತಿರುವ ಲಾಭವನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಲಿಂಗಾಯತ ಧರ್ಮ ವಿಭಜನೆಯನ್ನು ಸರ್ಕಾರ ಒಪ್ಪಬೇಕು ಎಂದು ಉಲ್ಲೇಖಿಸಲಾದ ವಿವಾದಾತ್ಮಕ ಪತ್ರವನ್ನು ಎಂ.ಬಿ. ಪಾಟೀಲ್​ರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು ಎನ್ನಲಾಗಿದೆ.

ಪ್ರತ್ಯೇಕ ಧರ್ಮದ ಕುರಿತು ಹೈಕಮಾಂಡ್ ಗೆ ಪತ್ರ ಬರೆದದ್ದು ಎಂ. ಬಿ ಪಾಟೀಲ್ ವಯಕ್ತಿಕ ವಿಷಯ : ಸತೀಶ್ ಜಾರಕಿಹೊಳಿ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಅವರಿಗೆ ರಾಜ್ಯ ಗ್ರಹ ಸಚಿವ ಎಂ. ಬಿ ಪಾಟೀಲ್ ಬರೆದಿದ್ದಾರೆ ಎನ್ನಲಾದ ವಿವಾದಾತ್ಮಕ ಪತ್ರದ ಕುರಿತು ಮಾತನಾಡಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ. ಇದು ಎಂ.ಬಿ ಪಾಟೀಲ್ ಅವರ ವಯಕ್ತಿಕ ವಿಷಯ ಎಂದಿದ್ದಾರೆ. ನಗದಲ್ಲಿ ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ. ಈಗಾಗಲೇ ಪತ್ರದ ಕುರಿತು ಹಲವಾರು ಚರ್ಚೆಗಳಾಗಿವೆ ಇದು ಮುಗಿದು ಹೋದ ಅಧ್ಯಾಯ ಚುನಾವಣೆ ಮುಗಿದ ನಂತರ ಎಂ.ಬಿ ಪಾಟೀಲ್ ಅವರೆ ತನಿಖೆ ಮಾಡುತ್ತಾರೆ ಹಾಗೆ ಇದನ್ನು ಹೈಕಮಾಂಡ್ ಗೆ ಬರೆದಿಲ್ಲ ಎಂದು ಸಮರ್ಥನೆಯನ್ನು ನೀಡಿದ್ದು ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ವಿಭಜನೆ ಮಾಡಿದರೆ ಬಿಜೆಪಿಗೆ ಇರುವ ಲಿಂಗಾಯತ ಮತಗಳನ್ನು ಒಡೆಯಬಹುದು. ಹಾಗೂ ಆರ್ ಎಸ್ ಎಸ್ ನಿಂದ ಲಿಂಗಾಯತ ಯುವಕರನ್ನು ಬೇರ್ಪಡಿಸಿ ಬಿಜೆಪಿಗೆ ಆಗುತ್ತಿರುವ ಲಾಭವನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಪ್ರತ್ಯೇಕ ಲಿಂಗಾಯತ ಧರ್ಮ ವಿಭಜನೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂಬು ವಿವಾದಾತ್ಮಕ ಪತ್ರವನ್ನು ಎಂ.ಬಿ ಪಾಟೀಲ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು. ಸಧ್ಯ ಈ ಪತ್ರದ ಕುರಿತು ಮತ್ತೆ ಚರ್ಚೆಗಳು ಪ್ರಾರಂವಾಗಿವೆ. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.