ಚಿಕ್ಕೋಡಿ : ಸಿಎಂ ಕಾರ್ಯಕ್ರಮದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆಯೂ ಬ್ಯಾರಿಕೆಡ್ ಬಿಚ್ಚಿಸಿ ಸಭೆಗೆ ತೆರಳಿ ಆನೆ ನಡೆದದ್ದೆ ದಾರಿ ಎಂಬಂತೆ ರಾಯಭಾಗ ಶಾಸಕ ಡಿ.ಎಮ್ ಐಹೊಳೆ ವರ್ತಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಗೆ ಆಗಮಿಸಿದ ರಾಯಭಾಗ ಶಾಸಕ ಡಿ.ಎಮ್ ಐಹೊಳೆ ಪೊಲೀಸ್ ಬಂದೋಬಸ್ತ್ ನಡುವೆಯೂ ಬ್ಯಾರಿಕೆಡ್ ಬಿಚ್ಚಿಸಿ ಸಭೆಯತ್ತ ತೆರಳಿದ್ದಾರೆ.
ದಾರಿ ತಪ್ಪಿದ ಬಳಿಕ ಸರಿಯಾದ ಮಾರ್ಗದಲ್ಲಿ ಬರದೇ ಶಿಸ್ತು ಉಲ್ಲಂಘಿಸಿದ ಡಿ.ಎಮ್ ಐಹೊಳೆ ಕೆಲಹೊತ್ತು ಪೊಲೀಸರೊಂದಿಗೆ ವಾಗ್ವಾದ ಮಾಡಿ ಕೊನೆಗೆ ಒಳ ಹೋಗಿ ತಮ್ಮ ದರ್ಪ ತೋರಿದ್ದಾರೆ.