ETV Bharat / state

ಸಂಜೆ ಬರಬೇಕಿದ್ದ ಬಸ್​ ರಾತ್ರಿಗೆ ಆಗಮನ: ಸಾರಿಗೆ ಸಚಿವರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೈರಾಣ!

ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್​ ಬಾರದೆ ವಿದ್ಯಾರ್ಥಿಗಳು ಪರದಾಡಿದರು. ಸಂಜೆಗೆ ಬರಬೇಕಿದ್ದ ಬಸ್​ ರಾತ್ರಿ ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಹೈರಾಣಾಗಿದ್ದರು. ಇದೇ ವೇಳೆ ಸೂಕ್ತವಾದ ಬಸ್​ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

author img

By

Published : Feb 8, 2021, 8:40 AM IST

ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಟ
Athani Students are facing bus problem

ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.

ಸರಿಯಾದ ಬಸ್​ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡ ವಿದ್ಯಾರ್ಥಿಗಳು

ಅಥಣಿ-ಕಲಮಡಿ ಮಾರ್ಗವಾಗಿ ಸಂಚರಿಸುವ ಬಸ್ ಸರಿಯಾದ ಸಮಯಕ್ಕೆ ಬರದೆ ರಾಮತೀರ್ಥ ಗ್ರಾಮದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿತು. ತಾಲೂಕಿನ ರಾಮತೀರ್ಥ ಗ್ರಾಮದ ವಿದ್ಯಾರ್ಥಿಗಳು ಕಕಮರಿ ಗ್ರಾಮದ ಪ್ರೌಢಶಾಲೆಗೆ ವಿದ್ಯಾಭ್ಯಾಸ ಮಾಡಲು ದಿನನಿತ್ಯ 7 ಕಿ.ಮೀ ದೂರ ಸಂಚಾರ ಮಾಡುತ್ತಾರೆ. ಪ್ರತಿದಿನ ಸಂಜೆ 5 ಗಂಟೆಗೆ ಬಸ್​​ ಬರುತ್ತಿತ್ತು. ಆದರೆ ಕಳೆದೊಂದು ವಾರದಿಂದ ಸಮಯಕ್ಕೆ ಸರಿಯಾಗಿ ಬಸ್​ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

Athani Students are facing bus problem
ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳ ಪರದಾಟ

ನಾವು ರಾಮತೀರ್ಥ ಗ್ರಾಮದಿಂದ ಕಕಮರಿ ಗ್ರಾಮಕ್ಕೆ ಶಾಲೆಗೆ ಬರುತ್ತೇವೆ. ನಮ್ಮ ಊರಿನಿಂದ ಹಾಗೂ ಮುರಳಿ ಶಾಲೆಯಿಂದ ಮನೆಗೆ ಹೋಗಬೇಕಾದರೆ ಸರಿಯಾದ ಸಮಯದಲ್ಲಿ ಬಸ್​ ಬರುವುದಿಲ್ಲ. ಇದು ನಮಗೆ ಹಾಗೂ ನಮ್ಮ ಪಾಲಕರಿಗೆ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಿಂದ ನಮ್ಮ ಮನೆ ದೂರ ಇರುವುದರಿಂದ ಕತ್ತಲೆಯಲ್ಲಿ ನಾವು ನಡೆದುಕೊಂಡು ಹೊಗುವಾಗ ತುಂಬಾ ಹೆದರಿಕೆ ಆಗುತ್ತದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಬಸ್​​ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಬಸ್ ವಿಳಂಬಕ್ಕೆ ಕಾರಣ:

ಸ್ಥಳೀಯರ ಮಾಹಿತಿ ಪ್ರಕಾರ ಪ್ರಮುಖವಾಗಿ ಈ ಭಾಗದಲ್ಲಿನ ರಸ್ತೆಗಳು ಸರಿಯಿಲ್ಲ. ಅಷ್ಟೇ ಅಲ್ಲದೆ ಬಸ್ ಕೂಡ ರಿಪೇರಿಲ್ಲಿದೆ. ಎಲ್ಲಿ ಬೇಕಾದರೂ ಕೆಟ್ಟು ನಿಲ್ಲುತ್ತದೆ. ಇದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಮಾಹಿತಿ ನೀಡಿದರು.

ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ವಕ್ಷೇತ್ರವಾದ ಅಥಣಿ ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.

ಸರಿಯಾದ ಬಸ್​ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡ ವಿದ್ಯಾರ್ಥಿಗಳು

ಅಥಣಿ-ಕಲಮಡಿ ಮಾರ್ಗವಾಗಿ ಸಂಚರಿಸುವ ಬಸ್ ಸರಿಯಾದ ಸಮಯಕ್ಕೆ ಬರದೆ ರಾಮತೀರ್ಥ ಗ್ರಾಮದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತಂಕದಲ್ಲಿ ಸಮಯ ಕಳೆಯುವಂತೆ ಮಾಡಿತು. ತಾಲೂಕಿನ ರಾಮತೀರ್ಥ ಗ್ರಾಮದ ವಿದ್ಯಾರ್ಥಿಗಳು ಕಕಮರಿ ಗ್ರಾಮದ ಪ್ರೌಢಶಾಲೆಗೆ ವಿದ್ಯಾಭ್ಯಾಸ ಮಾಡಲು ದಿನನಿತ್ಯ 7 ಕಿ.ಮೀ ದೂರ ಸಂಚಾರ ಮಾಡುತ್ತಾರೆ. ಪ್ರತಿದಿನ ಸಂಜೆ 5 ಗಂಟೆಗೆ ಬಸ್​​ ಬರುತ್ತಿತ್ತು. ಆದರೆ ಕಳೆದೊಂದು ವಾರದಿಂದ ಸಮಯಕ್ಕೆ ಸರಿಯಾಗಿ ಬಸ್​ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

Athani Students are facing bus problem
ಸಾರಿಗೆ ಸಚಿವ ಸ್ವಕ್ಷೇತ್ರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬರದೆ ವಿದ್ಯಾರ್ಥಿಗಳ ಪರದಾಟ

ನಾವು ರಾಮತೀರ್ಥ ಗ್ರಾಮದಿಂದ ಕಕಮರಿ ಗ್ರಾಮಕ್ಕೆ ಶಾಲೆಗೆ ಬರುತ್ತೇವೆ. ನಮ್ಮ ಊರಿನಿಂದ ಹಾಗೂ ಮುರಳಿ ಶಾಲೆಯಿಂದ ಮನೆಗೆ ಹೋಗಬೇಕಾದರೆ ಸರಿಯಾದ ಸಮಯದಲ್ಲಿ ಬಸ್​ ಬರುವುದಿಲ್ಲ. ಇದು ನಮಗೆ ಹಾಗೂ ನಮ್ಮ ಪಾಲಕರಿಗೆ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಿಂದ ನಮ್ಮ ಮನೆ ದೂರ ಇರುವುದರಿಂದ ಕತ್ತಲೆಯಲ್ಲಿ ನಾವು ನಡೆದುಕೊಂಡು ಹೊಗುವಾಗ ತುಂಬಾ ಹೆದರಿಕೆ ಆಗುತ್ತದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಬಸ್​​ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಬಸ್ ವಿಳಂಬಕ್ಕೆ ಕಾರಣ:

ಸ್ಥಳೀಯರ ಮಾಹಿತಿ ಪ್ರಕಾರ ಪ್ರಮುಖವಾಗಿ ಈ ಭಾಗದಲ್ಲಿನ ರಸ್ತೆಗಳು ಸರಿಯಿಲ್ಲ. ಅಷ್ಟೇ ಅಲ್ಲದೆ ಬಸ್ ಕೂಡ ರಿಪೇರಿಲ್ಲಿದೆ. ಎಲ್ಲಿ ಬೇಕಾದರೂ ಕೆಟ್ಟು ನಿಲ್ಲುತ್ತದೆ. ಇದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.