ETV Bharat / state

ರಾಜ್ಯದ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ: ಅರವಿಂದ ಲಿಂಬಾವಳಿ

ಗೋಕಾಕ್​ ಮತ ಕ್ಷೇತ್ರದಲ್ಲಿ ರಮೇಶ್​​ ಜಾರಕಿಹೊಳಿ ಹೆಚ್ಚಿನ ಬಹುಮತ ಪಡೆಯುತ್ತಾರೆ. ಚುನಾವಣೆಯಲ್ಲಿ ನಾವು ಪ್ರತಿದಿನ ಆಂತರಿಕ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಅರವಿಂದ್​ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

author img

By

Published : Nov 30, 2019, 12:03 AM IST

ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ

ಗೋಕಾಕ್​: ಕರ್ನಾಟಕದಲ್ಲಿ ಏಕಪಕ್ಷದ ಸರ್ಕಾರ ಸ್ಥಾಪಿಸಲು ಜನ ಸನ್ನಧ್ದರಾಗಿದ್ದಾರೆ. ಹಿಂದೆ ಧರ್ಮಸಿಂಗ್ ಮತ್ತು ಸಿದ್ದು ಸರ್ಕಾರ ಬಹಳ ದಿನ ನಡೆಯಲಿಲ್ಲ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಕೂಡ ನಡೆಯಲಿಲ್ಲ. ಅವರ ಸರ್ಕಾರದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಆಗ್ತಿಲ್ಲ ಎಂಬ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ನಂತರ ನಾನು ಬಿಜೆಪಿ ಸರ್ಕಾರ ಆಡಳಿತ ನಡೆಸಲು ಬಿಡಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆ ಆದ ಮೇಲೆ ಅವರು ಸಹ ಬದಲಾಗಿದ್ದಾರೆ. ದೇವೆಗೌಡರೂ ಸಹ ಸಮ್ಮಿಶ್ರ ಸರ್ಕಾರ ರಚನೆಯ ಸೂಚನೆ ಕೊಟ್ಟಿದ್ದಾರೆ. ಆದರೆ ಶಾಸಕರು ಸಮ್ಮಿಶ್ರ ಸರ್ಕಾರಗಳ ಬಗ್ಗೆ ಬೇಸತ್ತಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ದಿಗೆ ಶಾಸಕರು ರಾಜೀನಾಮೆ ನೀಡಿದ್ದಾರೆ

ರಮೇಶ್​ ಕುಮಾರ್ ಅವರು ಅಯೋಗ್ಯ, ಮತ್ತು ಅನರ್ಹರು ಎಂಬ ಪದ ಬಳಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆ ಶಬ್ದ ಬಳಸುವುದರಿಂದ ಘನತೆ ಕಡಿಮೆ ಮಾಡಿಕೊಳ್ಳಬೇಡಿ, ಅದರಿಂದ ನಿಮ್ಮ ಕಾಂಗ್ರೆಸ್ ಪಕ್ಷದ ಹತಾಶ ಮನೋಭಾವನೆ ಕಾಣುತ್ತದೆ. ಸಿದ್ದರಾಮಯ್ಯ ಕೂಡ ಅನಗತ್ಯವಾದ ಆರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ವಿರೋಧ ಪಕ್ಷದ ಸ್ಥಾನ ಕೈ ತಪ್ಪುವ ಭೀತಿಯಲ್ಲಿದ್ದಾರೆ. ಗೋಕಾಕ್​ ಮತಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿಯವರು ಹೆಚ್ಚಿನ ಬಹುಮತ ಪಡೆಯುತ್ತಾರೆ ಎಂದರು.

ಗೋಕಾಕ್​: ಕರ್ನಾಟಕದಲ್ಲಿ ಏಕಪಕ್ಷದ ಸರ್ಕಾರ ಸ್ಥಾಪಿಸಲು ಜನ ಸನ್ನಧ್ದರಾಗಿದ್ದಾರೆ. ಹಿಂದೆ ಧರ್ಮಸಿಂಗ್ ಮತ್ತು ಸಿದ್ದು ಸರ್ಕಾರ ಬಹಳ ದಿನ ನಡೆಯಲಿಲ್ಲ. ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಕೂಡ ನಡೆಯಲಿಲ್ಲ. ಅವರ ಸರ್ಕಾರದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಆಗ್ತಿಲ್ಲ ಎಂಬ ವಿಚಾರವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ನಂತರ ನಾನು ಬಿಜೆಪಿ ಸರ್ಕಾರ ಆಡಳಿತ ನಡೆಸಲು ಬಿಡಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆ ಆದ ಮೇಲೆ ಅವರು ಸಹ ಬದಲಾಗಿದ್ದಾರೆ. ದೇವೆಗೌಡರೂ ಸಹ ಸಮ್ಮಿಶ್ರ ಸರ್ಕಾರ ರಚನೆಯ ಸೂಚನೆ ಕೊಟ್ಟಿದ್ದಾರೆ. ಆದರೆ ಶಾಸಕರು ಸಮ್ಮಿಶ್ರ ಸರ್ಕಾರಗಳ ಬಗ್ಗೆ ಬೇಸತ್ತಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ದಿಗೆ ಶಾಸಕರು ರಾಜೀನಾಮೆ ನೀಡಿದ್ದಾರೆ

ರಮೇಶ್​ ಕುಮಾರ್ ಅವರು ಅಯೋಗ್ಯ, ಮತ್ತು ಅನರ್ಹರು ಎಂಬ ಪದ ಬಳಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆ ಶಬ್ದ ಬಳಸುವುದರಿಂದ ಘನತೆ ಕಡಿಮೆ ಮಾಡಿಕೊಳ್ಳಬೇಡಿ, ಅದರಿಂದ ನಿಮ್ಮ ಕಾಂಗ್ರೆಸ್ ಪಕ್ಷದ ಹತಾಶ ಮನೋಭಾವನೆ ಕಾಣುತ್ತದೆ. ಸಿದ್ದರಾಮಯ್ಯ ಕೂಡ ಅನಗತ್ಯವಾದ ಆರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ವಿರೋಧ ಪಕ್ಷದ ಸ್ಥಾನ ಕೈ ತಪ್ಪುವ ಭೀತಿಯಲ್ಲಿದ್ದಾರೆ. ಗೋಕಾಕ್​ ಮತಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿಯವರು ಹೆಚ್ಚಿನ ಬಹುಮತ ಪಡೆಯುತ್ತಾರೆ ಎಂದರು.

Intro:ರಾಜ್ಯದ ಮತ್ತು ಕ್ಷೇತ್ರದ ಅಭಿವೃದ್ದಿಗೆ ಶಾಸಕರು ರಾಜೀನಾಮೆ ನೀಡಿದ್ದಾರೆ- ಅರವಿಂದ ಲಿಂಬಾವಳಿBody:ಗೋಕಾಕ:  ಕರ್ನಾಟಕದಲ್ಲಿ ಏಕಪಕ್ಷದ ಸರ್ಕಾರ ಸ್ಥಾಪಿಸಲು ಜನ ಸನ್ನಧ್ದರಾಗಿದ್ದಾರೆ, ಹಿಂದೆ ಧರ್ಮಸಿಂಗ್ ಮತ್ತು ಸಿದ್ದು ಸರ್ಕಾರ ಬಹಳ ದಿನ ನಡೆಯಲಿಲ್ಲ, ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಕೂಡ ನಡೆಯಲ್ಲ. ಅವರ ಸರ್ಕಾರದ ಶಾಸಕರು ಕ್ಷೇತ್ರದ ಅಭಿವೃದ್ದಿ ಆಗ್ತಿಲ್ಲ, ರಾಜ್ಯದ ಅಭಿವೃದ್ದಿ ಆಗ್ತಿಲ್ಲ ಎಂಬುದಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಗೋಕಾಕನ ಎನ್ ಎಸ್ ಎಫ್ ಅತಿಥಿ ಗೃಹದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ಚುನಾಚಣೆ ನಂತರ ನಾನು ಬಿಜೆಪಿ ಸರ್ಕಾರ ಬೀಳೋದಿಕ್ಕೆ ಬಿಡೊಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆ ಆದ ಮೇಲೆ ಅವರು ಸಹ ಬದಲಾಗಿದ್ದಾರೆ, ದೇವೆಗೌಡರೂ ಸಹ ಸಮ್ಮಿಶ್ರ ಸರ್ಕಾರ ರಚನೆಯ ಸೂಚನೆ ಕೊಟ್ಟಿದ್ದಾರೆ, ಆದರೆ ಶಾಸಕರು ಸಮ್ಮಿಶ್ರ ಸರ್ಕಾರಗಳ ಬಗ್ಗೆ ಬೇಸತ್ತಿದ್ದಾರೆ ಎಂದರು.

ರಮೇಶ ಕುಮಾರ್ ಅವರು ಅಯೋಗ್ಯ, ಮತ್ತು ಅನರ್ಹರು ಎಂಬ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಆ ಶಬ್ದ ತಾವು ಬಳಸುವುದರಿಂದ ನಿಮ್ಮ ಘನತೆ ಕಡಿಮೆ ಮಾಡಿಕೊಳ್ಳಬೇಡಿ,
ಅದರಿಂದ ನಿಮ್ಮ ಕಾಂಗ್ರೇಸ್ ಪಕ್ಷದ ಹತಾಶ ಮನೋಭಾವನೆ ಕಾಣುತ್ತದೆ. ಸಿದ್ದರಾಮಯ್ಯ ಕೂಡ ಅನಗತ್ಯವಾದ ಆರೋಪ ಮಾಡ್ತಿದ್ದಾರೆ ಇದು ಅವರ ಅಸ್ಥಿರತೆ ತೋರಿಸುತ್ತೆ, ಸಿದ್ದರಾಮಯ್ಯನವರು ವಿರೋಧ ಪಕ್ಷದ ಸ್ಥಾನ ಕೈ ತಪ್ಪುವ ಭೀತಿಯಲ್ಲಿದ್ದಾರೆ ಅದಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ.

ಗೋಕಾಕ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿಯವರು ಹೆಚ್ಚಿನ ಬಹುಮತ ಪಡೆಯುತ್ತಾರೆ, ಚುನಾವಣೆಯಲ್ಲಿ ನಾವು ಪ್ರತಿದಿನ ಆಂತರಿಕ ವರದಿಯನ್ನು ತರಿಸಿಕೊಳ್ತಿವಿ, ನಾವು ೧೫ ಕ್ಷೇತ್ರಗಳನ್ನು ಗೆಲ್ತಿವಿ ಎಂದ ಅರವಿಂದ ಲಿಂಬಾವಳಿ ತಿಳಿಸಿದರು.

ಜಾರಕಿಹೊಳಿ ಮನೆತನವನ್ನು ಬಿಜೆಪಿ ಒಡೆಯುತ್ತಿದೆ ಎಂಬ ಉಮಾಶ್ರೀ ಹೇಳಿಕೆ ವಿಚಾರ ಅವರು ನಾಟಕದ ಡೈಲಾಗ್ ಹೊಡೆಯೊದರಲ್ಲಿ ನಸ್ಸೀಮರು ಎಂದರು.

ಚುನಾವಣೆ ನಂತರ ಸ್ಥಿರ ಸರ್ಕಾರ ರಚನೆಯಾಗುತ್ತೆ, ಬೇರೆ ಪಕ್ಷದ ನಾಯಕರೇ ನಮ್ಮನ್ನು ಪಕ್ಷಕ್ಕೆ ಬರ್ತಿವಿ ಅಂತ ಹೇಳ್ತಿದ್ದಾರೆ, ನಾವು ಎಲ್ಲಿ ಇಲ್ಲಿಯವರೆಗೂ ಗೆಲ್ಲೋಕೆ ಆಗಿಲ್ಲವೋ ಅಲ್ಲಿನ ನಾಯಕರು ಪಕ್ಷಕ್ಕೆ ಬಂದರೆ ಸ್ವಾಗತ ಎಂದ ಲಿಂಬಾವಳಿ ನಾನು ಈಗಲೇ ಯಾವುದೇ ಶಾಸಕರ  ಹೆಸರು ಈಗ ಹೇಳೊಲ್ಲ, ಆದರೆ ಚುನಾವಣೆ ಮುಗಿದ ಮೇಲೆ ಹೇಳ್ತಿನಿ,
ದೇಶದಲ್ಲಿ ರಾಜಕೀಯ ದೃವೀಕರಣ ನಡೆಯುತ್ತಿದೆ ಮೋದಿ ಯಡಿಯೂರಪ್ಪ ನೇತೃತ್ವದಲ್ಲಿ ದೃವೀಕರಣ ನಡೆಯುತ್ತಿದೆ.

ಎಲೆಕ್ಷನ್ ಆದ ಮೇಲೆ ಒಂದು ವಾರ ರಮೇಶ್ ಬಿಜೆಪಿಯಲ್ಲಿ ಇರೋಲ್ಲ ಎಂಬ ದಿನೇಶ್ ಹೇಳಿಕೆಗೆ ತಿರುಗೇಟು ನೀಡಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಅವರು ಈ ಚುನಾವಣೆಯಲ್ಲಿ ನಿರಾಸಕ್ತವಾಗಿದ್ದಾರೆ, ಅವರು ಬರೀ ಸುಳ್ಳು ಹೇಳ್ತಾರೆ ಅವರು ಸರ್ಕಾರ ಫೇಲ್ಯುವರ್ ಬಗ್ಗೆ ಹೇಳಲ್ಲ, ವಯುಕ್ತಿಕ ಟೀಕೆ ಮಾಡ್ತಾ ಹೋಗ್ತಾರೆ ಎಂದರು.

ನನಗೂ ತಾಕತ್ತಿದೆ ಆಪರೇಷನ್ ನಾನು ಮಾಡಬಲ್ಲೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಅವರು ಆಪರೇಷನ್ ಮಾಡಲಿ ಆದರೆ ಪರ್ಚೇಸ್ ಮಾಡೋದು ಬೇಡ, ಅನರ್ಹ ಶಾಸಕರು ದುಡ್ಡು ತಗೊಂಡು ಸೇಲ್ ಆಗಿದಾರೆ ಎಂಬ ಸದ್ದು ಹೇಳಿಕೆ ವಿಚಾರ ಅದಕ್ಕೆ ಸಿದ್ದರಾಮಯ್ಯನವರು ಸಾಕ್ಷೀ ಕೊಡಲಿ ಅವರು ಬೊಗಳ್ತಾರೆ ಅದಕ್ಕೆ ನಾನು ಉತ್ತರ ಕೊಡಲ್ಲ,

ನಾವು ಚುನಾವಣಾ ಆಯೋಗಕ್ಕೆ ಕಾಂಗ್ರೇಸ್ ಮತ್ತು ಜೆಡಿಎಸ್ ಮೇಲೆ ೩೦ಕ್ಕೂ ಹೆಚ್ಚು ದೂರು ನೀಡಿದ್ದವೆ, ವಕ್ತಿಗತವಾಗಿ ಮತ್ತು ಪಕ್ಷದ ಪರವಾಗಿಯೂ ಸಹ ದೂರು ನೀಡಿದ್ದೆವೆ ಎಂದ ಅರವಿಂದ ಲಿಂಬಾವಳಿ ಹೇಳಿದರು.

kn_gkk_03_29_aravindlibavali_pressmeet_byte_kac10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.