ETV Bharat / state

ಫಲಿತಾಂಶ ಹೀಗೇಕಾಯ್ತು ಅಂತಾ ಚರ್ಚಿಸಿದ್ದೇವೆ... ಪರಮೇಶ್ವರ್​​​ ಪರಾಮರ್ಶೆ - undefined

ಎರಡೂ ಪಕ್ಷ ಜೊತೆ ಗೂಡಿ ಚುನಾವಣೆ ಎದುರಿಸಿದ್ದೆವು. ಹೀಗಾದರೂ ಇಂತಹ ಫಲಿತಾಂಶ ಹೇಗೆ ಬಂತು. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಡಿಸಿಎಂ ಡಾ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ಡಿಸಿಎಂ ಡಾ. ಪರಮೇಶ್ವರ್
author img

By

Published : May 29, 2019, 6:03 PM IST

ಬೆಂಗಳೂರು: ಲೋಕಸಭಾ ಫಲಿತಾಂಶದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದ್ದಾರೆ.

ಕುಮಾರ ಕೃಪ ಅತಿಥಿಗೃಹದಲ್ಲಿ ಮಾತನಾಡಿದ ಅವರು ಯಾಕೆ ಇಂತಹ ಫಲಿತಾಂಶ ಬಂತು ಎಂಬುದರ ಕುರಿತಾಗಿ ಚರ್ಚೆ ನಡೆಸಿದ್ದೇವೆ. ಎರಡೂ ಪಕ್ಷ ಜೊತೆ ಗೂಡಿ ಚುನಾವಣೆ ಎದುರಿಸಿದ್ದೆವು. ಹೀಗಾದರೂ ಇಂತಹ ಫಲಿತಾಂಶ ಹೇಗೆ ಬಂತು. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಸ್ತುತ ರಾಜಕೀಯ ಕುರಿತಾಗಿಯೂ ಚರ್ಚೆ ನಡೆದಿದೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಶಾಸಕರಿಗೆ ಅವರವರ ಕ್ಷೇತ್ರಗಳ ಸಮಸ್ಯೆ ತಿಳಿಸಬೇಕು ಎಂದು‌ ಸೂಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲ ಇಲ್ಲ ಎಂದರು.

ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್​ ನಾಯಕರು.. ಸಭೆ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್​ ಹಾಗೂ ಸಚಿವ ಡಿ.ಕೆ. ಶಿವಕುಮಾರ್​

ಈ ಬಗ್ಗೆ ಮಾತನಾಡಿದ ಸಚಿವ ಡಿಕೆಶಿ, ನಮ್ಮ ಶಾಸಕರೆಲ್ಲ ಜೊತೆಗಿದ್ದಾರೆ. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಒಂದಿಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲ ಆಗಮಿಸುತ್ತಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಎಲ್ಲವನ್ನೂ ವಿವರಿಸಲಾಗದು ಎಂದರು.

ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಮಾತನಾಡಿ, ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ. ಅದನ್ನು ಮಾಧ್ಯಮಗಳಿಗೆ ವಿವರಿಸಲು ಸಾಧ್ಯವಿಲ್ಲ. ಹೇಳಿದರೆ, ಅದು ತಂತ್ರಗಾರಿಕೆಯಾಗಿ ಉಳಿಯಲ್ಲ. ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ. ಯಾರೂ ಎಲ್ಲಿಗೂ ಹೋಗಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.

ಇದೇ ವೇಳೆ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವ ಲಿಂಗಸಗೂರು ಶಾಸಕ ಡಿ.ಎಸ್. ಹುಲಗೇರಿ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ ಆಗಮಿಸಿದ್ದು, ಇವರ ಮನವೊಲಿಸುವ ಕಾರ್ಯ ನಡೆಯಿತು.

ಬೆಂಗಳೂರು: ಲೋಕಸಭಾ ಫಲಿತಾಂಶದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದ್ದಾರೆ.

ಕುಮಾರ ಕೃಪ ಅತಿಥಿಗೃಹದಲ್ಲಿ ಮಾತನಾಡಿದ ಅವರು ಯಾಕೆ ಇಂತಹ ಫಲಿತಾಂಶ ಬಂತು ಎಂಬುದರ ಕುರಿತಾಗಿ ಚರ್ಚೆ ನಡೆಸಿದ್ದೇವೆ. ಎರಡೂ ಪಕ್ಷ ಜೊತೆ ಗೂಡಿ ಚುನಾವಣೆ ಎದುರಿಸಿದ್ದೆವು. ಹೀಗಾದರೂ ಇಂತಹ ಫಲಿತಾಂಶ ಹೇಗೆ ಬಂತು. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಪ್ರಸ್ತುತ ರಾಜಕೀಯ ಕುರಿತಾಗಿಯೂ ಚರ್ಚೆ ನಡೆದಿದೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಶಾಸಕರಿಗೆ ಅವರವರ ಕ್ಷೇತ್ರಗಳ ಸಮಸ್ಯೆ ತಿಳಿಸಬೇಕು ಎಂದು‌ ಸೂಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲ ಇಲ್ಲ ಎಂದರು.

ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್​ ನಾಯಕರು.. ಸಭೆ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್​ ಹಾಗೂ ಸಚಿವ ಡಿ.ಕೆ. ಶಿವಕುಮಾರ್​

ಈ ಬಗ್ಗೆ ಮಾತನಾಡಿದ ಸಚಿವ ಡಿಕೆಶಿ, ನಮ್ಮ ಶಾಸಕರೆಲ್ಲ ಜೊತೆಗಿದ್ದಾರೆ. ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿ ಒಂದಿಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲ ಆಗಮಿಸುತ್ತಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಎಲ್ಲವನ್ನೂ ವಿವರಿಸಲಾಗದು ಎಂದರು.

ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಮಾತನಾಡಿ, ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ. ಅದನ್ನು ಮಾಧ್ಯಮಗಳಿಗೆ ವಿವರಿಸಲು ಸಾಧ್ಯವಿಲ್ಲ. ಹೇಳಿದರೆ, ಅದು ತಂತ್ರಗಾರಿಕೆಯಾಗಿ ಉಳಿಯಲ್ಲ. ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ. ಯಾರೂ ಎಲ್ಲಿಗೂ ಹೋಗಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.

ಇದೇ ವೇಳೆ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿರುವ ಲಿಂಗಸಗೂರು ಶಾಸಕ ಡಿ.ಎಸ್. ಹುಲಗೇರಿ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ ಆಗಮಿಸಿದ್ದು, ಇವರ ಮನವೊಲಿಸುವ ಕಾರ್ಯ ನಡೆಯಿತು.

Intro:newsBody:
ಫಲಿತಾಂಶ ಯಾಕೆ ಹೀಗಾಯ್ತು ಅಂತ ಚರ್ಚಿಸಿದ್ದೇವೆ: ಪರಮೇಶ್ವರ್


ಬೆಂಗಳೂರು: ಲೋಕಸಭಾ ಫಲಿತಾಂಶದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಾ. ಪರಮೇಶ್ವರ್ ತಿಳಿಸಿದ್ದಾರೆ.
ಕುಮಾರಕೃಪ ಅತಿಥಿಗೃಹದಲ್ಲಿ ಮಾತನಾಡಿ, ಯಾಕೆ ಇಂತಹಾ ಫಲಿತಾಂಶ ಬಂತು ಎಂಬ ಕುರಿತಾಗಿ ಚರ್ಚೆ ನಡೆಸಿದ್ದೇವೆ. ಎರಡೂ ಪಕ್ಷ ಜೊತೆಗೂಡಿ ಚುನಾವಣೆಗೆ ಎದುರಿಸಿದ್ದೆವು. ಹೀಗಾದರೂ ಇಂತಹಾ ಫಲಿತಾಂಶ ಹೇಗೆ ಬಂತು. ಈ ಕುರುತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಸ್ವಾಭಾವಿಕವಾಗಿ ಪ್ರಸ್ತುತ ರಾಜಕೀಯ ಕುರಿತಾಗಿಯೂ ಚರ್ಚೆ ನಡೆದಿದೆ. ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತೆ. ಶಾಸಕರಿಗೆ ಅವರವರ ಕ್ಷೇತ್ರಗಳ ಸಮಸ್ಯೆ ತಿಳಿಸಬೇಕು ಎಂದು‌ ಸೂಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದೆ ಯಾವುದೇ ಗೊಂದಲ ಇಲ್ಲ ಎಂದರು.
ಮತ್ತೆ ಬಂದ ಸಚಿವ ಡಿಕೆಶಿ
ಕೆ ಕೆ ಗೆಸ್ಟ್ ಹೌಸ್ ನಲ್ಲಿ ದೋಸ್ತಿ ಸಭೆ ಮುಕ್ತಾಯದ ನಂತರ ಸಿಎಂ ಜತೆ ರವಿಚಂದ್ರನ್ ಪುತ್ರಿ ವಿವಾಹಕ್ಕೆ ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್ ವಾಪಸ್ ಕುಮಾರಕೃಪ ಅತಿಥಿಗೃಹಕ್ಕೆ ಆಗಮಿಸಿದರು.
ಸಿಎಂ ಕುಮಾರಸ್ವಾಮಿ ಜೊತೆಯಲ್ಲಿ ಒಂದೆ ಕಾರಿನಲ್ಲಿ ತೆರಳಿ, ಮತ್ತೆ ಕೆಕೆ ಗೆಸ್ಟ್ ಹೌಸ್ ಆಗಮಿಸಿದರು.
ಗೃಹ ಕಚೇರಿ ಕೃಷ್ಣಾಗೆ ಸಿಎಂ ರನ್ನು ಬಿಟ್ಟು ಬಂದ ಇದೀಗ ವಾಪಸ್ಸು ಬಂದ ಸಚಿವ ಡಿಕೆ ಶಿವಕುಮಾರ್ ಕೆ ಸಿ ವೇಣುಗೋಪಾಲ್ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಇದೇ ಸಂದರ್ಭ ಅತೃಪ್ರ ಶಾಸಕರಲ್ಲಿ ಗುರುತಿಸಿಕೊಂಡಿರುವ ಲಿಂಗಸಗೂರು ಶಾಸಕ ಡಿ.ಎಸ್. ಹುಲಗೇರಿ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ ಆಗಮಿಸಿದ್ದು, ಇವರ ಮನವೊಲಿಸುವ ಕಾರ್ಯ ನಡೆಯಿತು.
ಡಿಕೆಶಿ ಮಾತನಾಡಿ, ನಮ್ಮ ಶಾಸಕರೆಲ್ಲಾ ಜತೆಗಿದ್ದಾರೆ. ಇಂದು ಸಂಜೆಯ ಶಾಸಕಾಂಗ ಸಭೆಯಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲಾ ಆಗಮಿಸುತ್ತಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ಒಂದಾಗಿದ್ದೇವೆ. ಇಂದಿನ ಸಭೆಯಲ್ಲಿ ಹಲವು ವಿಚಾರ ಚರ್ಚೆಯಾಗಿದೆ. ಎಲ್ಲವನ್ನೂ ವಿವರಿಸಲಾಗದು.
ವೇಣುಗೋಪಾಲ ಮಾತನಾಡಿ, ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ. ಅದನ್ನು ಮಾಧ್ಯಮಗಳಿಗೆ ವಿವರಿಸಲು ಸಾಧ್ಯವಿಲ್ಲ. ಹೇಳಿದರೆ ಅದು ತಂತ್ರಗಾರಿಕೆಯಾಗಿ ಉಳಿಯಲ್ಲ. ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ. ಯಾರೂ ಎಲ್ಲಿಗೂ ಹೋಗಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.