ETV Bharat / state

ಆಡಿಯೋ ಲೀಕ್ ಮಾಡಿದವರನ್ನು ಸುಮ್ಮನೆ ಬಿಡಬೇಡಿ: ಸಿಎಂಗೆ ಕತ್ತಿ ಒತ್ತಾಯ - Umesh katti meet yadiyurappa latest news

ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದ್ದರು. ಒಂದು ಗಂಟೆಗೂ ಅಧಿಕ ಸಮಯ ಸಿಎಂ ಜೊತೆ  ಚರ್ಚೆ ನಡೆಸಿದ ಅವರು. ಆಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು.

ಉಮೇಶ್ ಕತ್ತಿ
author img

By

Published : Nov 6, 2019, 11:54 AM IST

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುರಗವನ್ನುಂಟು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಉಮೇಶ್ ಕತ್ತಿ ಒತ್ತಾಯಿಸಿದ್ದಾರೆ.

ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದ್ದರು. ಒಂದು ಗಂಟೆಗೂ ಅಧಿಕ ಸಮಯ ಸಿಎಂ ಜೊತೆ ಚರ್ಚೆ ನಡೆಸಿದ ಅವರು. ಆಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು.

ನಮ್ಮ ವಿರೋಧಿಗಳನ್ನು ಸುಮ್ಮನೆ ಬಿಡಬಾರದು, ಈ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ಕಷ್ಟವಾಗಲಿದೆ ನಾವೀಗ ಸುಮ್ಮನಾದ್ರೆ ನಮ್ಮ ವಿರೋಧಿಗಳು ಇನ್ನಷ್ಟು ಬಲಿಷ್ಠವಾಗುತ್ತಾರೆ, ಈಗ ಅವರ ಜುಟ್ಟು ನಿಮ್ಮ ಕೈಯಲ್ಲಿದೆ, ಸುಮ್ಮನಾಗಬೇಡಿ ಎಂದು ಸಿಎಂ ಮೇಲೆ‌ ಕತ್ತಿ ಒತ್ತಡ ಹೇರಿದರು.

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುರಗವನ್ನುಂಟು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಉಮೇಶ್ ಕತ್ತಿ ಒತ್ತಾಯಿಸಿದ್ದಾರೆ.

ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದ್ದರು. ಒಂದು ಗಂಟೆಗೂ ಅಧಿಕ ಸಮಯ ಸಿಎಂ ಜೊತೆ ಚರ್ಚೆ ನಡೆಸಿದ ಅವರು. ಆಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು.

ನಮ್ಮ ವಿರೋಧಿಗಳನ್ನು ಸುಮ್ಮನೆ ಬಿಡಬಾರದು, ಈ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೆ ಕಷ್ಟವಾಗಲಿದೆ ನಾವೀಗ ಸುಮ್ಮನಾದ್ರೆ ನಮ್ಮ ವಿರೋಧಿಗಳು ಇನ್ನಷ್ಟು ಬಲಿಷ್ಠವಾಗುತ್ತಾರೆ, ಈಗ ಅವರ ಜುಟ್ಟು ನಿಮ್ಮ ಕೈಯಲ್ಲಿದೆ, ಸುಮ್ಮನಾಗಬೇಡಿ ಎಂದು ಸಿಎಂ ಮೇಲೆ‌ ಕತ್ತಿ ಒತ್ತಡ ಹೇರಿದರು.

Intro:
Note:ಈ ಸುದ್ದಿಗೆ ವೀಡಿಯೋ,ಫೋಟೋ ಇಲ್ಲ


ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಆಂತರಿಕ ಸಭೆಯ ವೀಡಿಯೋ ತುಣುಕನ್ನು ಬಿಡಿಗಡೆ ಮಾಡಿ ಪಕ್ಷ ಹಾಗು ಸರ್ಕಾರಕ್ಕೆ ತೀವ್ರ ಮುಜುರಗವನ್ನುಂಟುಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಉಮೇಶ್ ಕತ್ತಿ ಒತ್ತಾಯಿಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದರು.ಬೆಳಗ್ಗೆ 8.30 ರಿಂದ 9.30 ರವರೆಗೆ ಸಿಎಂ ಜೊತೆ ಸುದೀರ್ಘ ಚರ್ಚೆ ನಡೆಸಿದರು.ಆಡಿಯೋ ವೀಡಿಯೋ ಪ್ರಕರಣ ವಿಚಾರ ಸಂಬಂಧ ಮಾತುಕತೆ ನಡೆಸಿದರು. ಆಡಿಯೊ ಲೀಕ್ ಮಾಡಿರುವವರು ಯಾರೆಂಬ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಕತ್ತಿ ವಿರೋಧಿ ಬಣ ಈ ಆಡಿಯೊ ಲೀಕ್ ಮಾಡಿದ್ದಾರೆಂಬ ಆರೋಪದ ಬಗ್ಗೆಯೂ ಚರ್ಚೆ ನಡೆಸಿದ ಕತ್ತಿ ಆಡಿಯೊ ಲೀಕ್ ಮಾಡಿದವರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದರು.ಇದು ನಮ್ಮ ವಿರೋಧಿಗಳು ಮಾಡಿರುವ ಕುತಂತ್ರ ಅವರನ್ನು ಸುಮ್ಮನೆ ಬಿಡಬಾರದು ಎಂದು ಸಿಎಂ ಮೇಲೆ ಕತ್ತಿ ಒತ್ತಡ ಹಾಕಿದರು.

ನಮ್ಮ ವಿರೋಧಿಗಳನ್ನು ಸುಮ್ಮನೆ ಬಿಡಬೇಡಿ ಈ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕ್ರಮ ಕೈಗೊಳ್ಳದಿದ್ರೆ ಮುಂದೆ ಕಷ್ಟವಾಗಲಿದೆ ನಾವೀಗ ಸುಮ್ಮನಾದ್ರೆ ನಮ್ಮ ವಿರೋಧಿಗಳು ಇನ್ನಷ್ಟು ಬಲವಾಗ್ತಾರೆ ನಾವು ಅಂದರೆ ಇನ್ನಷ್ಟು ಕಡೆಯಾಗಿ ನೋಡ್ತಾರೆ ನಿಮಗೆ ಪಕ್ಷದಲ್ಲಿ ವಿರೋಧಿಗಳು ಎಷ್ಟೆಲ್ಲ ಕಾಟ ಕೊಟ್ಟಿಲ್ಲ ? ಈಗ ಅವರ ಜುಟ್ಟು ನಿಮ್ಮ ಕೈಯಲ್ಲಿದೆ, ಸುಮ್ಮನಾಗಬೇಡಿ ಎಂದು ಸಿಎಂ
ಬಿಎಸ್ವೈ ಮೇಲೆ‌ ಕತ್ತಿ ಒತ್ತಡ ಹೇರಿದರು.

ಯಡಿಯೂರಪ್ಪ ನಿವಾಸದಿಂದ ನಿರ್ಗಮಿಸಿದರೂ ಕೆಲಕಾಲ ಸಿಎಂ ನಿವಾಸದಲ್ಲಿ ಇದ್ದ ಉಮೇಶ್ ಕತ್ತಿ ನಂತರ ಮಾಧ್ಯಮಗಳ ಕಣ್ಣುತಪ್ಪಿಸಿ ನಿರ್ಗಮಿಸಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.