ETV Bharat / state

ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಿದ್ದರಾಮಯ್ಯ - Siddaramaiah barrage against BJP government

ಸುಳ್ಳು ಹೇಳಿದ್ದೇ ಯಡಿಯೂರಪ್ಪ ಸರ್ಕಾರದ 100 ದಿನದ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಡಿಕೆಶಿ ಹಾಗು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಅವರು ಸ್ಪಷ್ಟನೆ ನೀಡಿದ್ರು.

ಯಡಿಯೂರಪ್ಪ ಸರ್ಕಾರದ ನೂರು ದಿನದ ಅಧಿಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ
author img

By

Published : Nov 1, 2019, 6:16 PM IST

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಅಧಿಕಾರಕ್ಕೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದ್ರ ಜೊತೆಗೆ ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ರು.

ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನೆರೆ ಸಂತ್ರಸ್ತರ ವಿಚಾರದಲ್ಲಿ ನಾನು ದಾಖಲೆ, ಮಾಹಿತಿ ಇಲ್ಲದೇ ಯಾವುದೇ ಮಾತನಾಡಿಲ್ಲ. ಅಧಿಕಾರಿಗಳಿಂದ ವಿವರ ಪಡೆದು, ಸ್ಥಳ ಪರಿಶೀಲಿಸಿ ಮಾತಾಡಿದ್ದೇನೆ. ಸುಳ್ಳು ನಾನು ಹೇಳುತ್ತಿದ್ದೇನಾ? ಯಡಿಯೂರಪ್ಪ ಹೇಳುತ್ತಿದ್ದಾರಾ? ಎನ್ನುವುದಕ್ಕೆ ಪ್ರವಾಹ ಸಂತ್ರಸ್ತರು ಸಾಕ್ಷಿಯಾಗಿದ್ದಾರೆ. ಮಾಧ್ಯಮ ವರದಿ ಸತ್ಯದರ್ಶನ ನೀಡಿದೆ. ಪ್ರವಾಹ ಬಂದಾಗ ಆಡಿದ ಮಾತು ಒಂದು, ಈಗ ನೀಡುತ್ತಿರುವ ಪರಿಹಾರ ಇನ್ನೊಂದಾಗಿದೆ. ಮಗ್ಗ, ಅಂಗಡಿ ಮುಂಗಟ್ಟು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಿಲ್ಲ. ನಿರಾಶ್ರಿತರ ಸಂಪೂರ್ಣ ಸರ್ವೇ ಆಗಿಲ್ಲ. ಮನೆ ಪರಿಹಾರ ಎಲ್ಲರಿಗೂ ಏಕೆ ನೀಡಿಲ್ಲ. ಮನೆ ಕೊಚ್ಚಿ ಹೋದವರಿಗೆ ಪರಿಹಾರ ಕೊಟ್ಟಿಲ್ಲ. ಎರಡನೇ ಬಾರಿ ಪ್ರವಾಹ ಬಂದಿದೆ. ಮನೆ, ಬೆಳೆ ಕೊಚ್ವಿ ಹೋಗಿದೆ. ಇದರ ಸರ್ವೇ ಆಗಿದೆಯೇ? ಪ್ರವಾಹ ನಿಂತ ನಂತರ ಬಿದ್ದ ಮನೆಗಳ ಸರ್ವೇ ಆಗಿಲ್ಲ. 2004, 2005, 2009 ಮತ್ತು ಈಗ ಇಡೀ ಊರು ಮುಳುಗಡೆ ಆಗಿದೆ. ಊರನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದಿದ್ದಾರೆ. ಅದಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನು 2009 ರಲ್ಲಿ ಕಟ್ಟಿಸಿದ ಆಸರೆ ಮನೆಗಳನ್ನು ಯಾರೂ ಬಳಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಯಡಿಯೂರಪ್ಪ ಸರ್ಕಾರದ ನೂರು ದಿನದ ಅಧಿಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ


ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. 15 ಗೆದ್ದರೂ ಅಚ್ಚರಿ ಇಲ್ಲ. ಸಂಘಟಿತವಾಗಿ ಪಕ್ಷ ಹೋರಾಟ ಮಾಡಿ ಗೆಲ್ಲಲಿದೆ. ಸರ್ಕಾರದ ಆಡಳಿತ ಜನರಿಗೆ ಬೇಸರ ತರಿಸಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ. ಹಾಗಾಗಿ ಈ ಬಾರಿ ನಮ್ಮ ಪರ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲೂ ತೊಂದರೆ ಇಲ್ಲ. ಅಭ್ಯರ್ಥಿ ಆಯ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ್ದು. ಸುಳ್ಳು ಹೇಳುವುದು ಬಿಜೆಪಿ ಜನ್ಮಸಿದ್ಧ ಹಕ್ಕು. ಟಿಪ್ಪು ಪೇಟ ಧರಿಸಿದ ಅಶೋಕ್, ಚಂದ್ರೇಗೌಡ, ಜಗದೀಶ್ ಶೆಟ್ಟರ್ ಮತಾಂಧರಾ? 2013 ರಲ್ಲಿ ನಾನೇ ಟಿಪ್ಪು, ಈಗ ಟಿಪ್ಪು ಮತಾಂಧ ಅಂತ ಹೇಳಿದ್ದು ಮಿಸ್ಟರ್ ಯಡಿಯೂರಪ್ಪ. ಯಾರು ಸ್ವಾತಂತ್ರ್ಯ ಹೋರಾಟಗಾರ, ಯಾರು ಮತಾಂಧ? ಮತಕ್ಕಾಗಿ ಇಂತಹ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಿದ್ದು ಟೀಕಿಸಿದ್ರು.

ಯಡಿಯೂರಪ್ಪ ಸರ್ಕಾರ ಬಹುಮತ ಇಲ್ಲದೇ ಬಂದಿದ್ದು. ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿತ್ತು. ಸರಾಸರಿ ಮತದಲ್ಲಿ ಅವರು ನಮಗಿಂತ ಹಿಂದಿದ್ದರು. ನಮಗಿಂತ ಶೇ. 1.8 ರಷ್ಟು ಕಡಿಮೆ ಮತ ಪಡೆದಿದ್ದರು. ಈಗ ಹಿಂಬಾಗಿಲಿನದ ಮತ್ತೆ ಸರ್ಕಾರ ಮಾಡಿದ್ದಾರೆ. ಇದು ಅನೈತಿಕ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ರು.

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಅಧಿಕಾರಕ್ಕೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದ್ರ ಜೊತೆಗೆ ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದಾಗಿಯೂ ಅವರು ಸ್ಪಷ್ಟಪಡಿಸಿದ್ರು.

ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ನೆರೆ ಸಂತ್ರಸ್ತರ ವಿಚಾರದಲ್ಲಿ ನಾನು ದಾಖಲೆ, ಮಾಹಿತಿ ಇಲ್ಲದೇ ಯಾವುದೇ ಮಾತನಾಡಿಲ್ಲ. ಅಧಿಕಾರಿಗಳಿಂದ ವಿವರ ಪಡೆದು, ಸ್ಥಳ ಪರಿಶೀಲಿಸಿ ಮಾತಾಡಿದ್ದೇನೆ. ಸುಳ್ಳು ನಾನು ಹೇಳುತ್ತಿದ್ದೇನಾ? ಯಡಿಯೂರಪ್ಪ ಹೇಳುತ್ತಿದ್ದಾರಾ? ಎನ್ನುವುದಕ್ಕೆ ಪ್ರವಾಹ ಸಂತ್ರಸ್ತರು ಸಾಕ್ಷಿಯಾಗಿದ್ದಾರೆ. ಮಾಧ್ಯಮ ವರದಿ ಸತ್ಯದರ್ಶನ ನೀಡಿದೆ. ಪ್ರವಾಹ ಬಂದಾಗ ಆಡಿದ ಮಾತು ಒಂದು, ಈಗ ನೀಡುತ್ತಿರುವ ಪರಿಹಾರ ಇನ್ನೊಂದಾಗಿದೆ. ಮಗ್ಗ, ಅಂಗಡಿ ಮುಂಗಟ್ಟು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಿಲ್ಲ. ನಿರಾಶ್ರಿತರ ಸಂಪೂರ್ಣ ಸರ್ವೇ ಆಗಿಲ್ಲ. ಮನೆ ಪರಿಹಾರ ಎಲ್ಲರಿಗೂ ಏಕೆ ನೀಡಿಲ್ಲ. ಮನೆ ಕೊಚ್ಚಿ ಹೋದವರಿಗೆ ಪರಿಹಾರ ಕೊಟ್ಟಿಲ್ಲ. ಎರಡನೇ ಬಾರಿ ಪ್ರವಾಹ ಬಂದಿದೆ. ಮನೆ, ಬೆಳೆ ಕೊಚ್ವಿ ಹೋಗಿದೆ. ಇದರ ಸರ್ವೇ ಆಗಿದೆಯೇ? ಪ್ರವಾಹ ನಿಂತ ನಂತರ ಬಿದ್ದ ಮನೆಗಳ ಸರ್ವೇ ಆಗಿಲ್ಲ. 2004, 2005, 2009 ಮತ್ತು ಈಗ ಇಡೀ ಊರು ಮುಳುಗಡೆ ಆಗಿದೆ. ಊರನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದಿದ್ದಾರೆ. ಅದಕ್ಕೆ ಕ್ರಮ ಕೈಗೊಂಡಿಲ್ಲ. ಇನ್ನು 2009 ರಲ್ಲಿ ಕಟ್ಟಿಸಿದ ಆಸರೆ ಮನೆಗಳನ್ನು ಯಾರೂ ಬಳಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಯಡಿಯೂರಪ್ಪ ಸರ್ಕಾರದ ನೂರು ದಿನದ ಅಧಿಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ


ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. 15 ಗೆದ್ದರೂ ಅಚ್ಚರಿ ಇಲ್ಲ. ಸಂಘಟಿತವಾಗಿ ಪಕ್ಷ ಹೋರಾಟ ಮಾಡಿ ಗೆಲ್ಲಲಿದೆ. ಸರ್ಕಾರದ ಆಡಳಿತ ಜನರಿಗೆ ಬೇಸರ ತರಿಸಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ. ಹಾಗಾಗಿ ಈ ಬಾರಿ ನಮ್ಮ ಪರ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲೂ ತೊಂದರೆ ಇಲ್ಲ. ಅಭ್ಯರ್ಥಿ ಆಯ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ್ದು. ಸುಳ್ಳು ಹೇಳುವುದು ಬಿಜೆಪಿ ಜನ್ಮಸಿದ್ಧ ಹಕ್ಕು. ಟಿಪ್ಪು ಪೇಟ ಧರಿಸಿದ ಅಶೋಕ್, ಚಂದ್ರೇಗೌಡ, ಜಗದೀಶ್ ಶೆಟ್ಟರ್ ಮತಾಂಧರಾ? 2013 ರಲ್ಲಿ ನಾನೇ ಟಿಪ್ಪು, ಈಗ ಟಿಪ್ಪು ಮತಾಂಧ ಅಂತ ಹೇಳಿದ್ದು ಮಿಸ್ಟರ್ ಯಡಿಯೂರಪ್ಪ. ಯಾರು ಸ್ವಾತಂತ್ರ್ಯ ಹೋರಾಟಗಾರ, ಯಾರು ಮತಾಂಧ? ಮತಕ್ಕಾಗಿ ಇಂತಹ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಿದ್ದು ಟೀಕಿಸಿದ್ರು.

ಯಡಿಯೂರಪ್ಪ ಸರ್ಕಾರ ಬಹುಮತ ಇಲ್ಲದೇ ಬಂದಿದ್ದು. ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿತ್ತು. ಸರಾಸರಿ ಮತದಲ್ಲಿ ಅವರು ನಮಗಿಂತ ಹಿಂದಿದ್ದರು. ನಮಗಿಂತ ಶೇ. 1.8 ರಷ್ಟು ಕಡಿಮೆ ಮತ ಪಡೆದಿದ್ದರು. ಈಗ ಹಿಂಬಾಗಿಲಿನದ ಮತ್ತೆ ಸರ್ಕಾರ ಮಾಡಿದ್ದಾರೆ. ಇದು ಅನೈತಿಕ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ರು.

Intro:newsBody:ಯಡಿಯೂರಪ್ಪ ನೇತೃತ್ವದ ಸರ್ಕಾರದ ನೂರು ದಿನದ ಅಧಿಕಾರಕ್ಕೆ ಸೊನ್ನೆ ಅಂಕ ನೀಡುತ್ತೇನೆ: ಸಿದ್ದರಾಮಯ್ಯ


ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದ ನೂರು ದಿನಗಳ ಅಧಿಕಾರಕ್ಕೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ,
ನೆರೆ ಸಂತ್ರಸ್ತರ ವಿಚಾರದಲ್ಲಿ ನಾನು ದಾಖಲೆ, ಮಾಹಿತಿ ಇಲ್ಲದೇ ಯಾವುದೇ ಮಾತು ಆಡಿಲ್ಲ. ಅಧಿಕಾರಿಗಳಿಂದ ವಿವರ ಪಡೆದು, ಸ್ಥಳ ಪರಿಶೀಲಿಸಿ ಮಾತಾಡಿದ್ದೇನೆ.
ಸುಳ್ಳು ನಾನು ಹೇಳುತ್ತಿದ್ದೇನಾ, ಯಡಿಯೂರಪ್ಪ ಅವರಾ ಅನ್ನುವುದಕ್ಕೆ ಪ್ರವಾಹ ಸಂತ್ರಸ್ತರು ಸಾಕ್ಷಿಯಾಗಿದ್ದಾರೆ. ಮಾಧ್ಯಮ ವರದಿ ಸತ್ಯದರ್ಶನ ನೀಡಿದೆ. ಪ್ರವಾಹ ಬಂದಾಗ ಆಡಿದ ಮಾತು ಒಂದು, ಈಗ ನೀಡುತ್ತಿರುವ ಪರಿಹಾರ ಇನ್ನೊಂದಾಗಿದೆ. ಮಗ್ಗ, ಅಂಗಡಿ ಮುಂಗಟ್ಟು, ಬೆಳೆ ಪರಿಹಾರ ನೀಡಿಲ್ಲ. ನಿರಾಶ್ರಿತರ ಸಂಪೂರ್ಣ ಸರ್ವೆ ಆಗಿಲ್ಲ. ಮನೆ ಪರಿಹಾರ ಎಲ್ಲರಿಗೂ ಏಕೆ ನೀಡಿಲ್ಲ. ಮನೆ ಕೊಚ್ಚಿ ಹೋದವರಿಗೆ ಪರಿಹಾರ ಕೊಟ್ಟಿಲ್ಲ. ಎರಡನೇ ಬಾರಿ ಪ್ರವಾಹ ಬಂದಿಗೆ, ಮನೆ, ಬೆಳೆ ಕೊಚ್ವಿ ಹೋಗಿದೆ. ಇದರ ಸರ್ವೆ ಆಗಿದೆಯೇ? ಪ್ರವಾಹ ನಿಂತ ನಂತರ ಬಿದ್ದ ಮನೆಗಳ ಸರ್ವೆ ಆಗಿಲ್ಲ. 2004, 2005, 2009 ಮತ್ತು ಈಗ ಇಡೀ ಊರು ಮುಳುಗಡೆ ಆಗಿದೆ. ಊರನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದಿದ್ದಾರೆ. ಅದಕ್ಕೆ ಕ್ರಮ ಆಗಿಲ್ಲ. ಇನ್ನು 2009 ರಲ್ಲಿ ಕಟ್ಟಿಸಿದ ಆಸರೆ ಮನೆ ಯಾರೂ ಬಳಸುತ್ತಿಲ್ಲ. ಜನರಲ್ಲಿ ಗೊಂದಲ ಮೂಡಿಸಿದ್ದು, ಸುಳ್ಳು ಹೇಳಿದ್ದು ನಾನಾ ಅಥವಾ ಯಡಿಯೂರಪ್ಪ ಅವರಾ ಅಂತ ಅವರೇ ಹೇಳಲಿ. ಇದೇ ಯಡಿಯೂರಪ್ಪ ಸರ್ಕಾರದ 100 ದಿನದ ಸಾಧನೆ. ಇದು ಜನಪರ, ರೈತಪರ, ಬಡವರ ಪರ ಸರ್ಕಾರವಾ? ಯಡಿಯೂರಪ್ಪ ಸರ್ಕಾರದ ನೂರು ದಿನದ ಆಡಳಿತಕ್ಕೆ ಸೊನ್ನೆ ಅಂಕ ಕೊಡುತ್ತೇನೆ ಎಂದರು.
ಉಪಚುನಾವಣೆ ವಿಚಾರ
ನಾವು ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುತ್ತೇವೆ. 15 ಗೆದ್ದರೂ ಅಚ್ಚರಿ ಇಲ್ಲ. ಸಂಘಟಿತವಾಗಿ ಪಕ್ಷ ಹೋರಾಟ ಮಾಡಿ ಗೆಲ್ಲಲಿದೆ. ಸರ್ಕಾರದ ಆಡಳಿತ ಜನರಿಗೆ ಬೇಸರ ತರಿಸಿದೆ. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಜನ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನ ಸಭೆ ಚುನಾವಣೆ ಫಲಿತಾಂಶ ಇದಕ್ಕೆ ಸಾಕ್ಷಿ. ನಮ್ಮ ಬರ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲೂ ತೊಂದರೆ ಇಲ್ಲ. ಅಭ್ಯರ್ಥಿ ಆಯ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ್ದು. ಸುಳ್ಳು ಹೇಳುವುದು ಬಿಜೆಪಿ ಜನ್ಮಸಿದ್ಧ ಹಕ್ಕು. ಟಿಪ್ಪು ಪೇಟ ಹಾಕಿದ ಅಶೋಕ್, ಚಂದ್ರೇಗೌಡ, ಜಗದೀಶ್ ಶೆಟ್ಟರ್ ಮತಾಂಧರಾ? 2013 ರಲ್ಲಿ ನಾನೇ ಟಿಪ್ಪು, ಈಗ ಟಿಪ್ಪು ಮತಾಂಧ. ಹೇಳಿದ್ದು ಮಿಸ್ಟರ್ ಯಡಿಯೂರಪ್ಪ. ಯಾರು ಸ್ವಾತಂತ್ರ್ಯ ಹೋರಾಟಗಾರ, ಯಾರು ಮತಾಂಧ?! ಮತಕ್ಕಾಗಿ ಮಾಡಿವ ಇಂತಹ ಇಬ್ಬಂದಿತನ ಸರಿಯಲ್ಲ. ರಾಜಕೀಯ ಮಾಡಿ, ಇಷ್ಟೊಂದು ಇಬ್ನಂದಿತನದ ರಾಜಕೀಯ ಮಾಡುವುದು ಬೇಡ. ಸರ್ಕಾರ ಹಿಮ್ಮುಖವಾಗಿ ಓಡಲು ಶುರುಮಾಡಿದೆ. ಜನರ ಈ ಆತಂಕ ನಿವಾರಣೆಗೆ ಸರ್ಕಾರ ಏನಾದ್ರೂ ಪ್ರಯತ್ನ ನಡೆದಿದ್ಯಾ? ಎಂದರು.
ಅನೈತಿಕ ಸರ್ಕಾರ
ಯಡಿಯೂರಪ್ಪ ಸರ್ಕಾರ ಬಹುಮತ ಇಲ್ಲದೇ ಬಂದದ್ದು. 2018 ರಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಸರ್ಕಾರ ರಚಿಸುವ ಅವಕಾಶ ಸಿಲ್ಕಿತ್ತು. ಸರಾಸರಿ ಮತದಲ್ಲಿ ಅವರು ನಮಗಿಂತ ಹಿಂದಿದ್ದರು. ನಮಗಿಂತ ಶೇ. 1.8 ರಷ್ಟು ಕಡಿಮೆ ಮತ ಪಡೆದಿದ್ದರು. ಸರ್ಕಾರ ಅಂದು ಬಿದ್ದಿತ್ತು. ಈಗ ಹಿಂಬಾಗಿಲಿನದ ಮತ್ತೆ ಸರ್ಕಾರ ಮಾಡಿದ್ದಾರೆ. ಅಂದುಊರು ದಿನ ಸರ್ಕಾರ ಮಾಡಿ ಬಿದ್ದ ನಂತರ ನಾವು ಜೆಡಿಎಸ್ ಜತೆ ಸೇರಿ 14 ತಿಂಗಳು ಸರ್ಕಾರ ರಚಿಸಿದೆವು. ಅಂದಿನಿಂದ ನಿರಂತರವಾಗಿ ಆಪರೇಷನ್ ಕಮಲ ಮಾಡುತ್ತಾ ಬಂದರು. ಹಣ, ಬೆದರಿಕೆ ಇತ್ಯಾದಿ ಮೂಲಕ ಶಾಸಕರನ್ನು ಸೆಳೆಯುವ ಕಾರ್ಯ ಮಾಡಿದರು. ಕಳೆದ ಜುಲೈ ನಲ್ಲಿ ಯಶ ಕಂಡರು. ಸಾಕಷ್ಟು ವಿಫಲ ಯತ್ನ ಇದಕ್ಕೆ ಮುನ್ನ ಮಾಡಿದ್ದರು. ತಮ್ಮ ಪ್ರಯತ್ನ ಒಪ್ಪಿಕೊಂಡಿದ್ದರು. ಶಾಸಕರು ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಅನೈತಿಕ ವಾಗಿ ಸರ್ಕಾರ ರಚಿಸಿದರು. ಸಂಪುಟ ರಚನೆ ವಿಳಂಭವಾಯಿತು. ಭಾರಿ ಪ್ರವಾಹ ಸ್ಥಿತಿ ಎದುರಾಯಿತು. ಪ್ರವಾಹ ದೊಡ್ಡ ಅನಾಹುತ ಸೃಷ್ಟಿಸಿತು. ಇನ್ನೂ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯ ಆಗಿಲ್ಲ. ನಾನು ಎಲ್ಲಾ ಕಡೆ ಹೋಗಿ ಬಂದಿದ್ದೇನೆ. ಸಂತ್ರಸ್ತರನ್ನು ಭೇಟಿಮಾಡಿ ಬಂದು ನೋಡಿದ್ದನ್ನು, ಕೇಳಿದ್ದನ್ನು ಹೇಳಿದ್ದೆ. ಆದರೆ ಸಿಎಂ ಯಡಿಯೂರಪ್ಪ ನನ್ನದು ಬೇಜವಾಬ್ದಾರಿ ಹೇಳಿಕೆ ಎಂದಿದ್ದಾರೆ. ರಾಜ್ಯದಲ್ಲಿ ಏನು ಜೇಳಬೇಕೆಂಬ ಜವಾಬ್ದಾರಿ ನನಗಿದೆ. ನಾನು ಮಾಹಿತಿ ಇಲ್ಲದೇ ಸುಳ್ಳು ಹೇಳಿದ್ದೇನೆ ಎಂದಿದ್ದಾರೆ. ಅದು ತಪ್ಪು. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ನೀವು ಎಲ್ಲಾ ಮನೆಗೂ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದ್ದೇನೆ. ಅದನ್ನೇ ಜಾಹೀರಾತಿನಲ್ಲಿ ಯಡಿಯೂರಪ್ಪ ನೀಡಿದ್ದಾರೆ. ನಾನು ತಪ್ಪು ಹೇಳಿದ್ದೇನೆ ಎಂದು ಅವರೇಕೆ ಹೇಳಿದ್ದು, ನನ್ನ ಮಾತಲ್ಲಿ ತಪ್ಪೇನಿದೆ? ಟೆಲ್ ಮಿ ಮಿ. ಯಡಿಯೂರಪ್ಪ. ರಾಜ್ಯದಲ್ಲಿ 1.5 ಕೋಟಿ ಮಂದಿ ಹಾಲು ಉದ್ಯಮ ಅವಲಂಬಿಸಿದ್ದಾರೆ. ಇದೀಗ ಸರ್ಕಾರ ದೇಶದ 10 ಜನ ಅವಲಂಭಿಸಿರುವ ಹಾಲು ಉದ್ಯಮಕ್ಕೆ ಹೊಡೆತ ಕೊಡುವ ನಿರ್ಧಾರ ಕೇಂದ್ರ ಸರ್ಕಾರ ಕೈಗೊಳ್ಳಲು ಮುಂದಾಗಿದೆ. ಆಸ್ಟ್ರೇಲಿಯಾ, ಹಾಲೆಂಡ್ ನಿಂದ ಹಾಲು ತರಲು ಮುಂದಾಗಿದೆ. ಹೈನು ಉದ್ಯಮ ಹಾಳಾಗಲಿದೆ. ಯಡಿಯೂರಪ್ಪ ಕೇಂದ್ರದ ಗಮನಕ್ಕೆ ತರಬೇಕಲ್ಲವೇ? ಸಚಿವ ಪೀಯುಷ್ ಗೋಯಲ್ ಗಮನಕ್ಕೆ ತರಬೇಕಲ್ಲವೇ. ರೈತರ ಮನಸ್ಸಿನ ಗೊಂದಲ ನಿವಾರಿಸುವುದು ಸರ್ಕಾರದ ಕರ್ತವ್ಯ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಿ ವಿರುದ್ಧ ಆಕ್ರೋಶ
ಪ್ರವಾಹ ಬಂದಾಗ ಪ್ರಧಾನಿ ಭೇಟಿ ನೀಡಲಿಲ್ಲ. ಕರ್ನಾಕದ ಬಗ್ಗೆ ಅವರಿಗೆ ಅಸಡ್ಡೆಯೇಕೆ? ರಾಜ್ಯದ ಬಗ್ಗೆ ಅವಮಾನೀಯ ಧೋರಣೆಯೇಕೆ? ಬಿಹಾರದ ಬಗ್ಗೆ ಸಾಂತ್ವನ ಹೇಳೋಕೆ ಆಗುತ್ತೆ. ಆದರೆ ರಾಜ್ಯದ ಬಗ್ಗೆ ಒಂದು ಸಾಂತ್ವನ ಹೇಳಲಿಲ್ಲ. 38 ಸಾವಿರ ಕೋಟಿ ಪರಿಹಾರ ಸರ್ಕಾರ ಕೇಳಿತ್ತು. ಪರಿಹಾರ ಕೊಟ್ಟಿದ್ದು ಮಾತ್ರ 1200 ಕೋಟಿ ಕೊಟ್ಟು ನಾವು ದೂಪಹಾಕ್ತೀವಲ್ಲ ಹಾಗೆ ಅವರ ಪರಿಹಾರ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ಹೋದ್ರಲ್ಲ ಏನ್ ಹೇಳಿದ್ರು? 24 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಕಬ್ಬು, ಭತ್ತ, ಬಾಳೆ, ಉದ್ದು, ತೊಗರಿ ಬೆಳೆ ಹಾಳಾಗಿದೆ. ಆದರೆ ರೈತರಿಗೆ ಇವರು ಕೊಟ್ಟಿದ್ದೇನು? ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಪ್ರಧಾನ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಕಾಲಿಟ್ಟಿಲ್ಲ ಅನ್ನೊದು ಸತ್ಯನಾ? ಸುಳ್ಳಾ? ಬಿಹಾರಕ್ಕೆ ಟ್ವೀಟ್ ಮೂಲಕ ಸಿಂಪತಿ ವ್ಯಕ್ತ ಪಡಿಸುತ್ತೀರಾ? ಕರ್ನಾಟಕಕ್ಕೆ ಯಾಕಿಲ್ಲ? ಅದೇ ಮನಮೋಹನ್ ಸಿಂಗ್ ಅವರು ಪ್ರವಾಹ ಪೀಡಿತ ಪ್ರದೇಗಳಿಗೆ ಭೇಟಿ ನೀಡಿ ತಕ್ಷಣ ಪರಿಹಾರ ಘೋಷಣೆ ಮಾಡಿದ್ರು. ಸಿಎಂ ಬಿಎಸ್ವೈ ಆದ್ರೂ ಪರಿಹಾರ ತರಲು ಪ್ರಯತ್ನ ಮಾಡಲಿಲ್ಲ. ಹಾಗಾಗಿಯೇ ಬಿಎಸ್ವೈ ವೀಕ್ ಸಿಎಂ ಅಂತಾ ನಾನು ಹೇಳೋದು. ಪರಿಹಾರ ಕೇಳೋಕೆ ಸಿಎಂಗೆ ಪ್ರಧಾನ ಮಂತ್ರಿಗಳಿ ಸಮಯಾವಕಾಶ ನೀಡಲಿಲ್ಲ‌. ನಾವು ಕಾಂಗ್ರೆಸ್ ನವರು ಪತ್ರ ಬರೆದ್ವಿ ಪ್ರಧಾನಿಗಳಿಗೆ. ಆದ್ರೆ ನಮಗೂ ಸಮಯಾವಕಾಶ ನೀಡಲಿಲ್ಲ ಎಂದರು.
ಗೊಂದಲ ಯಾರು ಮಾಡಿದ್ದು
ಸಂತ್ರಸ್ಥರ ವಿಚಾರದಲ್ಲಿ ನಾನು ಗೊಂದಲ ಮಾಡಿದ್ದೇನಾ? ಮಿಸ್ಟರ್ ಯಡಿಯೂರಪ್ಪ ನಾನು ಗೊಂದಲ ಮಾಡಿಲ್ಲ. ಗೊಂದಲ ಉಂಟುಮಾಡ್ತಿರೋದು ನೀವು. ನೂರು ದಿನದ ನಿಮ್ಮ ಸಾಧನೆ ಶೂನ್ಯ. ನಿಮ್ಮ ಸಾಧನೆ ಶಾಸಕರನ್ನ ರಾಜೀನಾಮೆ ಕೊಡಿಸಿದ್ದು. ಅನರ್ಹರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು. ವರ್ಗಾವಣೆ ದಂಧೇ ಮಾಡಿದ್ದೇ ನಿಮ್ಮ ನೂರು ದಿನದ ಸಾಧನೆ. ಸರ್ಕಾರದ ನೂರು ದಿನಕ್ಕೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಅಧಿಕಾರಿಗಳನ್ನ ಎಲ್ಲಿಂದ ಎಲ್ಲಿಗೆ ಹಾಕಿದ್ರೂ ಅಷ್ಟೇ. ನಿಮ್ಮ ಬಾರುಗೋಲು ಸರಿಯಿರಬೇಕು. ಆಗ ಮಾತ್ರ ಆಡಳಿತ ಉತ್ತಮವಾಗಲಿದೆ. ಅಧಿಕಾರಿಗಳ ಬದಲಾವಣೆಯಿಂದ ಉತ್ತಮವಾಗಲ್ಲ. ನೂರು ದಿನದಲ್ಲಿ ನೀವು ಮಾಡಿದ ಸಾಧನೆ ಏನು. ನಿಮಗೆ ಸರ್ಟಿಫಿಕೆಟ್ ಕೊಡೋಕೆ ಆಗುತ್ತಾ? ಯಾವುದೇ ಡೆವಲಪ್ ಮೆಂಟ್ ಇಲ್ಲವೇ ಇಲ್ಲ. ಸರ್ಕಾರ ಮುಂದಕ್ಕೆ ಅಲ್ಲ ಹಿಮ್ಮುಖವಾಗಿ ಹೋಗ್ತಿದೆ. ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಬೇಕು ಯಡಿಯೂರಪ್ಪ ಎಂದರು.

Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.