ETV Bharat / state

ಬೆಂಗಳೂರಲ್ಲಿ ಬೀಡು ಬಿಟ್ಟ ಎನ್​​ಐಎ ತಂಡ: ಚುರುಕುಗೊಂಡ ತನಿಖೆ - ಬೆಂಗಳೂರಿನಲ್ಲಿ ಶೋಧ ಕಾರ್ಯಾಚರಣೆ ಚುರುಕು

ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಐಸಿಸ್​ ಜೊತೆ ನಂಟು ಹೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆದು‌ ಎನ್​ಐಎ ತಂಡ ತನಿಖೆ ನಡೆಸುತ್ತಿದೆ.

NIA team intensifies probe in Bangalore
ಸಿಲಿಕಾನ್ ಸಿಟಿಯಲ್ಲಿ ಬೀಡು ಬಿಟ್ಟ ಎನ್​​ಐಎ ತಂಡ
author img

By

Published : Aug 19, 2020, 8:19 AM IST

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ ನಗರದಲ್ಲಿ ಬೀಡು ಬಿಟ್ಟಿದ್ದು, ಶೋಧ ಕಾರ್ಯಚರಣೆಯಲ್ಲಿ ತೊಡಗಿದೆ. ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ಸ್ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ವಶಕ್ಕೆ ಪಡೆದು‌ ತನಿಖೆ ನಡೆಸುತ್ತಿದ್ದಾರೆ.

ಈತ ಮೂಲತಃ ಬೆಂಗಳೂರು ನಗರದವನಾಗಿದ್ದು, ನಗರದಲ್ಲಿ ಬಹುತೇಕ ಸ್ನೇಹಿತರ ಜೊತೆ ನಂಟು ಹೊಂದಿದ್ದ. ಹಾಗೆಯೇ ಈತನ ಕುಟುಂಬಸ್ಥರು ನಗರದಲ್ಲೇ ವಾಸವಿದ್ದಾರೆ. ಹೀಗಾಗಿ‌ ಸದ್ಯ ಮೂವರು ಸ್ನೇಹಿತರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿ‌ ಸೇವೆ ಸಲ್ಲಿಸುತ್ತಿದ್ದ ಕಾರಣ ಬಹುತೇಕರ ಜೊತೆ ನಂಟು ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಯ ಚೈನ್ ಲಿಂಕ್​ಅನ್ನು ಎನ್​ಐಎ ಪತ್ತೆ ಹಚ್ಚಲು ಶೋಧ ಮುಂದುವರೆಸಿದೆ.

ಮತ್ತೊಂದೆಡೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪ್ರಮುಖ ಆರೋಪಿ ಸಮುಯುದ್ದೀನ್ ಸೇರಿದಂತೆ ಇತರೆ 40 ಆರೋಪಿಗಳು ಉಗ್ರರ ಜೊತೆ ಸಂಪರ್ಕ ಹೊಂದಿರುವ ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗಿದೆ. ಹೀಗಾಗಿ ಎನ್​ಐಎ ಕೂಡ ಡಿ.ಜೆ.ಹಳ್ಳಿ ಆರೋಪಿಗಳ‌ ಮೇಲೆ ಕಣ್ಣಿಟ್ಟು, ಬಂಧಿತ ಡಾಕ್ಟರ್​ಗೆ ಏನಾದ್ರು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರೆಸಿದೆ.

ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್

ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಬಹುತೇಕರು ನಗರವನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ‌ ನಡೆಯುವ ಗಲಭೆಯನ್ನ ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ತಂಡ ಮುಂದಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ ನಗರದಲ್ಲಿ ಬೀಡು ಬಿಟ್ಟಿದ್ದು, ಶೋಧ ಕಾರ್ಯಚರಣೆಯಲ್ಲಿ ತೊಡಗಿದೆ. ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ಸ್ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ವಶಕ್ಕೆ ಪಡೆದು‌ ತನಿಖೆ ನಡೆಸುತ್ತಿದ್ದಾರೆ.

ಈತ ಮೂಲತಃ ಬೆಂಗಳೂರು ನಗರದವನಾಗಿದ್ದು, ನಗರದಲ್ಲಿ ಬಹುತೇಕ ಸ್ನೇಹಿತರ ಜೊತೆ ನಂಟು ಹೊಂದಿದ್ದ. ಹಾಗೆಯೇ ಈತನ ಕುಟುಂಬಸ್ಥರು ನಗರದಲ್ಲೇ ವಾಸವಿದ್ದಾರೆ. ಹೀಗಾಗಿ‌ ಸದ್ಯ ಮೂವರು ಸ್ನೇಹಿತರನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿ‌ ಸೇವೆ ಸಲ್ಲಿಸುತ್ತಿದ್ದ ಕಾರಣ ಬಹುತೇಕರ ಜೊತೆ ನಂಟು ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಯ ಚೈನ್ ಲಿಂಕ್​ಅನ್ನು ಎನ್​ಐಎ ಪತ್ತೆ ಹಚ್ಚಲು ಶೋಧ ಮುಂದುವರೆಸಿದೆ.

ಮತ್ತೊಂದೆಡೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪ್ರಮುಖ ಆರೋಪಿ ಸಮುಯುದ್ದೀನ್ ಸೇರಿದಂತೆ ಇತರೆ 40 ಆರೋಪಿಗಳು ಉಗ್ರರ ಜೊತೆ ಸಂಪರ್ಕ ಹೊಂದಿರುವ ವಿಚಾರ ತನಿಖಾಧಿಕಾರಿಗಳಿಗೆ ಗೊತ್ತಾಗಿದೆ ಎನ್ನಲಾಗಿದೆ. ಹೀಗಾಗಿ ಎನ್​ಐಎ ಕೂಡ ಡಿ.ಜೆ.ಹಳ್ಳಿ ಆರೋಪಿಗಳ‌ ಮೇಲೆ ಕಣ್ಣಿಟ್ಟು, ಬಂಧಿತ ಡಾಕ್ಟರ್​ಗೆ ಏನಾದ್ರು ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರೆಸಿದೆ.

ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್

ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಬಹುತೇಕರು ನಗರವನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ‌ ನಡೆಯುವ ಗಲಭೆಯನ್ನ ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ತಂಡ ಮುಂದಾಗಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.