ETV Bharat / state

ಕ್ಷೇತ್ರದ ಅನುದಾನ ಕಡಿತ ವಿರೋಧಿಸಿ ಪ್ರತಿಭಟನೆ: ಬಿಎಸ್​ವೈ ಜೊತೆ ಮಾತುಕತೆ ನಡೆಸಿದ ಬೈರೇಗೌಡ

ನಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಸರ್ಕಾರ ಅದರಲ್ಲಿ 300 ಕೋಟಿ ರೂ ಅನುದಾನ ಕಡಿತ ಮಾಡಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ ಎಂದು ಕೃಷ್ಣಬೈರೇಗೌಡ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

author img

By

Published : Sep 23, 2019, 5:12 PM IST

ಕೃಷ್ಣಬೈರೇಗೌಡ

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ಶಾಸಕ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದರು. ಈ ವೇಳೆ ಕ್ಷೇತ್ರದಲ್ಲಿನ ಸಮಸ್ಯೆ, ಅನುದಾನ ಕಡಿತ ವಿಚಾರ ಸಂಬಂಧ ಸಿಎಂ ಬಿಎಸ್​ವೈ ಜೊತೆ ಮಾತುಕತೆ ನಡೆಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಸರ್ಕಾರ ಅದರಲ್ಲಿ 300 ಕೋಟಿ ರೂ ಅನುದಾನ ಕಡಿತ ಮಾಡಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಕಡಿತಗೊಳಿಸಿರುವ ಅನುದಾನ ಮರಳಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಬಿಎಸ್​ವೈ ಜೊತೆ ಮಾತುಕತೆ ನಡೆಸಿದ ಕೃಷ್ಣಬೈರೇಗೌಡ

ನಮ್ಮ ಕ್ಷೇತ್ರದಲ್ಲೇ ಬೇರೆ ಕ್ಷೇತ್ರಗಳ ಕಸ ವಿಲೇವಾರಿ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿ ಇಲ್ಲೇ ತ್ಯಾಜ್ಯ ವಿಲೇವಾರಿ‌ ಮಾಡೋದು ಎಷ್ಟು ಸರಿ ಅನ್ನೋದು ನಮ್ಮ ಕ್ಷೇತ್ರದ ಜನರ ಪ್ರಶ್ನೆಯಾಗಿದೆ. ಇವತ್ತು ಬೆಳಗ್ಗೆ ಅನುದಾನ‌ ಕಡಿತ ಖಂಡಿಸಿ ಪ್ರತಿಭಟನೆ ನಡೆಸಿದೆವು. ಈಗ ಸಿಎಂಗೆ ಅನುದಾನ‌ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದೇವೆ. ಸಿಎಂಗೆ ಸಮಸ್ಯೆ ಅರ್ಥವಾಗಿದೆ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಅವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ಶಾಸಕ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದರು. ಈ ವೇಳೆ ಕ್ಷೇತ್ರದಲ್ಲಿನ ಸಮಸ್ಯೆ, ಅನುದಾನ ಕಡಿತ ವಿಚಾರ ಸಂಬಂಧ ಸಿಎಂ ಬಿಎಸ್​ವೈ ಜೊತೆ ಮಾತುಕತೆ ನಡೆಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಸರ್ಕಾರ ಅದರಲ್ಲಿ 300 ಕೋಟಿ ರೂ ಅನುದಾನ ಕಡಿತ ಮಾಡಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಕಡಿತಗೊಳಿಸಿರುವ ಅನುದಾನ ಮರಳಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಬಿಎಸ್​ವೈ ಜೊತೆ ಮಾತುಕತೆ ನಡೆಸಿದ ಕೃಷ್ಣಬೈರೇಗೌಡ

ನಮ್ಮ ಕ್ಷೇತ್ರದಲ್ಲೇ ಬೇರೆ ಕ್ಷೇತ್ರಗಳ ಕಸ ವಿಲೇವಾರಿ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿ ಇಲ್ಲೇ ತ್ಯಾಜ್ಯ ವಿಲೇವಾರಿ‌ ಮಾಡೋದು ಎಷ್ಟು ಸರಿ ಅನ್ನೋದು ನಮ್ಮ ಕ್ಷೇತ್ರದ ಜನರ ಪ್ರಶ್ನೆಯಾಗಿದೆ. ಇವತ್ತು ಬೆಳಗ್ಗೆ ಅನುದಾನ‌ ಕಡಿತ ಖಂಡಿಸಿ ಪ್ರತಿಭಟನೆ ನಡೆಸಿದೆವು. ಈಗ ಸಿಎಂಗೆ ಅನುದಾನ‌ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದೇವೆ. ಸಿಎಂಗೆ ಸಮಸ್ಯೆ ಅರ್ಥವಾಗಿದೆ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಅವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

Intro:KN_BNG_06_KRISHNABAIREGOWDA_CM_MEET_SCRIPT_9021933

ಯಾವ ಕ್ಷೇತ್ರಕ್ಕೆ ಅನುದಾನ ಕೊಡುತ್ತೀರೋ ಅಲ್ಲೇ ಕಸ ವಿಲೇವಾರಿ ಮಾಡಿ: ಅನುದಾನ ಕಡಿತಕ್ಕೆ‌ ಕೃಷ್ಣಬೈರೇಗೌಡ ಗರಂ

ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾವನ್ನು ಕಡಿತಗೊಳಿಸಿರುವುದಕ್ಕೆ ಶಾಸಕ ಕೃಷ್ಣಬೈರೇಗೌಡ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ನಮ್ಮ ಅನುದಾನ ಯಾರಿಗೆ ಕೊಟ್ಟಿದ್ದೀರೋ ಆ ಕ್ಷೇತ್ರದಲ್ಲೇ ಕಸ ವಿಲೇವಾರಿ ಮಾಡಿ ಎಂದು ಆಗ್ರಹಿಸಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು. ಕ್ಷೇತ್ರದಲ್ಲಿನ ಸಮಸ್ಯ ಅನುದಾನ ಕಡಿತ ವಿಚಾರ ಸಂಬಂಧ ಸಿಎಂ ಬಿಎಸ್ವೈ ಜೊತೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡ, ನಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರ 400 ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು ಆದರೆ ಈ ಸರ್ಕಾರ ಅದರಲ್ಲಿ 300 ಕೋಟಿ ರೂ ಅನುದಾನ ಕಡಿತ ಮಾಡಿದೆ ಇದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗಿದೆ ಹಾಗಾಗಿ ಕೂಡಲೇ ಕಡೊತಗೊಳಿಸಿರುವ ಅನುದಾನ ಮರಳಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ನಮ್ಮ‌ ಕ್ಷೇತ್ರದಲ್ಲೇ ಬೇರೆ ಕ್ಷೇತ್ರಗಳ ಕಸ ವಿಲೇವಾರಿ ಮಾಡಲಾಗುತ್ತಿದೆ ನಮ್ಮ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿ ಇಲ್ಲೇ ತ್ಯಾಜ್ಯ ವಿಲೇವಾರಿ‌ ಮಾಡೋದು ಎಷ್ಟು ಸರಿ ಅನ್ನೋದು ನಮ್ಮ‌ ಕ್ಷೇತ್ರದ ಜನರ ಪ್ರಶ್ನೆಯಾಗಿದೆ.ನಮಗೆ ಅನುದಾನ ಕಡಿತ ಮಾಡಿದರೆ ಅವರವರ ಕ್ಷೇತ್ರದಲ್ಲೇ ತ್ಯಾಜ್ಯ ವಿಲೇವಾರಿ‌ ಮಾಡಲಿ ಎನ್ನುವುದು ನಮ್ಮ ಆಗ್ರಹವಾಗಿದೆ ಈ ಸಂಬಂಧ ಇವತ್ತು ಬೆಳಗ್ಗೆ ಅನುದಾನ‌ ಕಡಿತ ಖಂಡಿಸಿ ನಾವೆಲ್ಲ ಪ್ರತಿಭಟನೆ ನಡೆಸಿದೆವು‌ ಈಗ ಸಿಎಂಗೆ ಅನುದಾನ‌ ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದೇವೆ, ಸಿಎಂಗೆ ಸಮಸ್ಯೆ ಅರ್ಥವಾಗಿದೆ
ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಸಿಎಂ ಸೂಚಿಸಿದ್ದಾರೆ ಸಿಎಂ ಮಾತಿಗೆ ಗೌರವ ಕೊಟ್ಟು ಎರಡನೇ ಬಾರಿ ಕಾಯಲು ನಿರ್ಧರಿಸಿದ್ದೇವೆ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.