ETV Bharat / state

ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್​​ಗೆ ಬರುವ ವೋಟ್ ಕೂಡಾ ಬರಲ್ಲ: ಈಶ್ವರಪ್ಪ ವ್ಯಂಗ್ಯ

author img

By

Published : Feb 13, 2023, 2:49 PM IST

ನಾನು ಮಂತ್ರಿ ಸ್ಥಾನದ ಆಸೆ ಬಿಟ್ಟಾಗಿದೆ. ಈ ಬಗ್ಗೆ ಸ್ಪಷ್ಟವಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯದ ಸಿಎಂ ಹಾಗೂ ಕೇಂದ್ರದ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದೇ ಅಂತಿಮ - ಕೆ.ಎಸ್ ಈಶ್ವರಪ್ಪ

KS Eshwarappa
ಕೆ.ಎಸ್.ಈಶ್ವರಪ್ಪ

ಬೆಂಗಳೂರು: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್​​ಗೆ ಬರುವ ವೋಟ್ ಬರಲ್ಲ ಎಂದು ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೋದಿ ಪ್ರವಾಸಕ್ಕೆ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಈ ದೇಶದವರೇ. ಮೋದಿ ಕಂಡರೆ ಕಾಂಗ್ರೆಸ್​​ಗೆ ಭಯ. ಮೋದಿ ರಾಜ್ಯಕ್ಕೆ ಬರಬಾರದಾ?, ಯಾವುದನ್ನು ಟೀಕೆ ಮಾಡಬೇಕು ಎಂಬ ಕಲ್ಪನೆ ಇಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಯಾಕೆ ಕರೆಸುತ್ತಿಲ್ಲ?. ಮೊದಲು ರಾಹುಲ್ ಗಾಂಧಿನ ರಾಜ್ಯಕ್ಕೆ ಕರೆಸುತ್ತಿದ್ದರು. ಆದರೆ ಈಗ ಕರೆಸುತ್ತಿಲ್ಲ. ಯಾಕೆಂದರೆ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್​​ಗೆ ಬರುವ ವೋಟ್ ಕೂಡ ಬರಲ್ಲ ಎಂದು ವ್ಯಂಗ್ಯವಾಡಿದರು.

ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರಾಗಿ ಮಾಡಿದಕ್ಕೆ ಟೀಕೆ ಮಾಡ್ತಾರೆ. ಎಷ್ಟು ದಿನ‌ ಟೀಕೆ ಮಾಡ್ತಾರೆ ನೋಡೋಣ. ಈಗ ವಿರೋಧ ಪಕ್ಷದಲ್ಲಿ ಇದ್ದಾರೆ. ಎಲೆಕ್ಷನ್ ಆದ್ಮೇಲೆ ಅದು ಇರಲ್ಲ ಎಂದು ಕುಟುಕಿದರು.

ಶಿವಮೊಗ್ಗದಲ್ಲಿ ಶಾಂತಿ ಇದೆ: ಆಯನೂರು ಮಂಜುನಾಥ್ ಪರವಾಗಿ ಶಿವಮೊಗ್ಗದಲ್ಲಿ ಪೋಸ್ಟರ್ ವೈರಲ್ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರವರ ಅಭಿಪ್ರಾಯ ಹೇಳುತ್ತಾರೆ. ಎಲ್ಲಾ ವ್ಯಕ್ತಿಗಳು ಅವರ ಅಭಿಪ್ರಾಯ ಹೇಳಬಹುದು. ಶಿವಮೊಗ್ಗದಲ್ಲಿ ಫಸ್ಟ್ ಕ್ಲಾಸ್ ಆಗಿ ಶಾಂತಿ ಇದೆ. ಶಾಂತಿ ಕೆಡಿಸಿದವರು ಇಂದು ಜೈಲಿನಲ್ಲಿ ಇದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದು ವೈಯಕ್ತಿಕ ಅಭಿಪ್ರಾಯ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು. ಆಯನೂರು ಮಂಜುನಾಥ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಇಷ್ಟೊಂದು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಮಂಜುನಾಥ್ ಪರ ಪೋಸ್ಟರ್: ಫೇಸ್ ಬುಕ್, ವಾಟ್ಸ್​ಆ್ಯಪ್​​ಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾಗಿ ಪೋಸ್ಟರ್​ಗಳು ಶೇರ್​ ಆಗುತ್ತಿವೆ. 'ನಗರದಲ್ಲಿ ಶಾಂತಿ ನೆಮ್ಮದಿಗಾಗಿ ಕೈಗಾರಿಕೆ, ವ್ಯಾಪಾರ, ವಹಿವಾಟುಗಳು ನಿರ್ಭಯವಾಗಿ ನಡೆದು ಬಡವರ ಬದುಕು ಹಸನಾಗಿಸಲು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲಿ' ಎಂಬ ಪೋಸ್ಟರ್​​ಗಳು ವೈರಲ್ ಆಗುತ್ತಿವೆ.

ಮಂತ್ರಿ ಸ್ಥಾನದ ಆಸೆ ಬಿಟ್ಟಾಯ್ತು: ನಾನು ಮಂತ್ರಿ ಸ್ಥಾನದ ಆಸೆ ಬಿಟ್ಟು ಆಗಿದೆ. ಈ ಬಗ್ಗೆ ಸ್ಪಷ್ಟವಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯದ ಸಿಎಂ ಹಾಗೂ ಕೇಂದ್ರದ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದೇ ಅಂತಿಮ ಎಂದು ತಿಳಿಸಿದರು. ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನ ನೀಡುವಂತೆ ಬಿಗಿ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ಬೆಳಗಾವಿ ಅಧಿವೇಶನಕ್ಕೆ ಎರಡು ದಿನಗಳ ಕಾಲ ಹಾಜರಾಗಿರಲಿಲ್ಲ. ಬಳಿಕ ಸಿಎಂ ಮನವೊಲಿಸಿದ್ದರು. ಆದರೆ‌ ಮಂತ್ರಿ ಮಂಡಲ ವಿಸ್ತರಣೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನದ ಆಸೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಬಂಡೆಪ್ಪ ಕಾಶಂಪುರ್ ಅವರಿಗೆ ಡಿಸಿಎಂ ಪೋಸ್ಟ್ ನೀಡುವ‌ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತಿವಾದಿಗಳು ಎಂದು ಆರೋಪಿಸಿದರು. ಈಶ್ವರಪ್ಪ ಕುರುಬ ನಾಯಕ ಎಂಬ ಪ್ರಶ್ನೆಗೆ ಇಲ್ಲ ನಾನು ಹಿಂದೂ ನಾಯಕ. ಆಮೇಲೆ ಕುರುಬ ಎಂದು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ ನಗರದಿಂದ ಪ್ರತಿನಿಧಿಸಲು ನನಗೊಂದು ಅವಕಾಶ ಕೊಡಿ : ಆಯನೂರು ಮಂಜುನಾಥ್

ಬೆಂಗಳೂರು: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್​​ಗೆ ಬರುವ ವೋಟ್ ಬರಲ್ಲ ಎಂದು ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೋದಿ ಪ್ರವಾಸಕ್ಕೆ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೋದಿ ಈ ದೇಶದವರೇ. ಮೋದಿ ಕಂಡರೆ ಕಾಂಗ್ರೆಸ್​​ಗೆ ಭಯ. ಮೋದಿ ರಾಜ್ಯಕ್ಕೆ ಬರಬಾರದಾ?, ಯಾವುದನ್ನು ಟೀಕೆ ಮಾಡಬೇಕು ಎಂಬ ಕಲ್ಪನೆ ಇಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಯಾಕೆ ಕರೆಸುತ್ತಿಲ್ಲ?. ಮೊದಲು ರಾಹುಲ್ ಗಾಂಧಿನ ರಾಜ್ಯಕ್ಕೆ ಕರೆಸುತ್ತಿದ್ದರು. ಆದರೆ ಈಗ ಕರೆಸುತ್ತಿಲ್ಲ. ಯಾಕೆಂದರೆ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್​​ಗೆ ಬರುವ ವೋಟ್ ಕೂಡ ಬರಲ್ಲ ಎಂದು ವ್ಯಂಗ್ಯವಾಡಿದರು.

ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರಾಗಿ ಮಾಡಿದಕ್ಕೆ ಟೀಕೆ ಮಾಡ್ತಾರೆ. ಎಷ್ಟು ದಿನ‌ ಟೀಕೆ ಮಾಡ್ತಾರೆ ನೋಡೋಣ. ಈಗ ವಿರೋಧ ಪಕ್ಷದಲ್ಲಿ ಇದ್ದಾರೆ. ಎಲೆಕ್ಷನ್ ಆದ್ಮೇಲೆ ಅದು ಇರಲ್ಲ ಎಂದು ಕುಟುಕಿದರು.

ಶಿವಮೊಗ್ಗದಲ್ಲಿ ಶಾಂತಿ ಇದೆ: ಆಯನೂರು ಮಂಜುನಾಥ್ ಪರವಾಗಿ ಶಿವಮೊಗ್ಗದಲ್ಲಿ ಪೋಸ್ಟರ್ ವೈರಲ್ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರವರ ಅಭಿಪ್ರಾಯ ಹೇಳುತ್ತಾರೆ. ಎಲ್ಲಾ ವ್ಯಕ್ತಿಗಳು ಅವರ ಅಭಿಪ್ರಾಯ ಹೇಳಬಹುದು. ಶಿವಮೊಗ್ಗದಲ್ಲಿ ಫಸ್ಟ್ ಕ್ಲಾಸ್ ಆಗಿ ಶಾಂತಿ ಇದೆ. ಶಾಂತಿ ಕೆಡಿಸಿದವರು ಇಂದು ಜೈಲಿನಲ್ಲಿ ಇದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದು ವೈಯಕ್ತಿಕ ಅಭಿಪ್ರಾಯ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು. ಆಯನೂರು ಮಂಜುನಾಥ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಇಷ್ಟೊಂದು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಮಂಜುನಾಥ್ ಪರ ಪೋಸ್ಟರ್: ಫೇಸ್ ಬುಕ್, ವಾಟ್ಸ್​ಆ್ಯಪ್​​ಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾಗಿ ಪೋಸ್ಟರ್​ಗಳು ಶೇರ್​ ಆಗುತ್ತಿವೆ. 'ನಗರದಲ್ಲಿ ಶಾಂತಿ ನೆಮ್ಮದಿಗಾಗಿ ಕೈಗಾರಿಕೆ, ವ್ಯಾಪಾರ, ವಹಿವಾಟುಗಳು ನಿರ್ಭಯವಾಗಿ ನಡೆದು ಬಡವರ ಬದುಕು ಹಸನಾಗಿಸಲು ಆಯನೂರು ಮಂಜುನಾಥ್ ಅವರಿಗೆ ಅವಕಾಶ ಸಿಗಲಿ' ಎಂಬ ಪೋಸ್ಟರ್​​ಗಳು ವೈರಲ್ ಆಗುತ್ತಿವೆ.

ಮಂತ್ರಿ ಸ್ಥಾನದ ಆಸೆ ಬಿಟ್ಟಾಯ್ತು: ನಾನು ಮಂತ್ರಿ ಸ್ಥಾನದ ಆಸೆ ಬಿಟ್ಟು ಆಗಿದೆ. ಈ ಬಗ್ಗೆ ಸ್ಪಷ್ಟವಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯದ ಸಿಎಂ ಹಾಗೂ ಕೇಂದ್ರದ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದೇ ಅಂತಿಮ ಎಂದು ತಿಳಿಸಿದರು. ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನ ನೀಡುವಂತೆ ಬಿಗಿ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆ ಬೆಳಗಾವಿ ಅಧಿವೇಶನಕ್ಕೆ ಎರಡು ದಿನಗಳ ಕಾಲ ಹಾಜರಾಗಿರಲಿಲ್ಲ. ಬಳಿಕ ಸಿಎಂ ಮನವೊಲಿಸಿದ್ದರು. ಆದರೆ‌ ಮಂತ್ರಿ ಮಂಡಲ ವಿಸ್ತರಣೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಕೆ.ಎಸ್.ಈಶ್ವರಪ್ಪ ಮಂತ್ರಿ ಸ್ಥಾನದ ಆಸೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಬಂಡೆಪ್ಪ ಕಾಶಂಪುರ್ ಅವರಿಗೆ ಡಿಸಿಎಂ ಪೋಸ್ಟ್ ನೀಡುವ‌ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತಿವಾದಿಗಳು ಎಂದು ಆರೋಪಿಸಿದರು. ಈಶ್ವರಪ್ಪ ಕುರುಬ ನಾಯಕ ಎಂಬ ಪ್ರಶ್ನೆಗೆ ಇಲ್ಲ ನಾನು ಹಿಂದೂ ನಾಯಕ. ಆಮೇಲೆ ಕುರುಬ ಎಂದು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ ನಗರದಿಂದ ಪ್ರತಿನಿಧಿಸಲು ನನಗೊಂದು ಅವಕಾಶ ಕೊಡಿ : ಆಯನೂರು ಮಂಜುನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.