ETV Bharat / state

ಮೃತ ವ್ಯಕ್ತಿಗೆ ಆಸ್ತಿ ಇದ್ದರೆ ಮಕ್ಕಳು ಮಲತಾಯಿಗೂ ಜೀವನಾಂಶ ನೀಡಬೇಕು : ಹೈಕೋರ್ಟ್ - high court

ಗಂಡನಿಗೆ ಆಸ್ತಿ ಇರುವ ಬಗ್ಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಾಬೀತಾದರೆ ಮಕ್ಕಳು ಮಲತಾಯಿಗೂ ಜೀವನಾಂಶ ನೀಡಬೇಕು ಎಂದು ಹೈಕೋರ್ಟ್​ ಹೇಳಿದೆ

high-court-says-that-stepmother-may-ask-maintenance
ಮೃತ ವ್ಯಕ್ತಿಗೆ ಆಸ್ತಿ ಇದ್ದರೆ ಮಕ್ಕಳು ಮಲತಾಯಿಗೂ ಜೀವನಾಂಶ ನೀಡಬೇಕು : ಹೈಕೋರ್ಟ್
author img

By

Published : Mar 18, 2023, 8:49 PM IST

ಬೆಂಗಳೂರು : ತನ್ನ ಗಂಡನಿಗೆ ಆಸ್ತಿ ಇರುವ ಸಂಬಂಧ ಕೌಟುಂಬಿಕ ನ್ಯಾಯಾಲಯದಲ್ಲಿ ಸಾಬೀತುಪಡಿಸಿದಲ್ಲಿ ಪತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಮಲತಾಯಿಯೂ ಜೀವನಾಂಶ ಕೇಳಬಹುದು ಎಂದು ಹೈಕೋರ್ಟ್​ ತಿಳಿಸಿದೆ. ಖಲೀಲ್​ ಉಲ್​ ರೆಹಮಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ. ಕೆ. ನಟರಾಜನ್ ಅವರಿದ್ದ ಏಕ ಸದಸ್ಯಪೀಠವು ಈ ಆದೇಶ ನೀಡಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯ ಮಲತಾಯಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಜೊತೆಗೆ, ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಮತ್ತೆ ವಿಚಾರಣೆ ನಡೆಸಬೇಕು. ಮಲತಾಯಿ ತನ್ನ ಪತಿ ಅಧಿಕ ಆಸ್ತಿಗಳನ್ನು ಹೊಂದಿದ್ದರು ಮತ್ತು ಅವರಿಗೆ ಆದಾಯವಿತ್ತು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿ ಜೀವನಾಂಶ ಕೇಳಬಹುದು ಎಂದು ಕೋರ್ಟ್​ ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ, ಸುಪ್ರಿಂಕೋರ್ಟ್ ಅಪರಾಧ ದಂಡ ಸಂಹಿತೆ ಸೆಕ್ಷನ್ 125 ಮತ್ತು ಹಿರಿಯ ನಾಗರಿಕರ ಕಾಯಿದೆಯ ಅಂಶಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲಿಯವರೆಗೂ ಮಧ್ಯಂತರ ಪರಿಹಾರವಾಗಿ ಮಲತಾಯಿಗೆ ಮಾಸಿಕ 10 ಸಾವಿರ ರೂ.ಗಳ ಜೀವನಾಂಶ ನೀಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.

ಸಿಆರ್​​ಪಿಸಿ ಸೆಕ್ಷನ್ 125 ಅಡಿ ಮಲತಾಯಿಯು ಮಲಮಕ್ಕಳಿಂದ ಜೀವನಾಂಶ ಕೇಳುವ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಹಿರಿಯ ನಾಗರಿಕರ ಕಾಯಿದೆ ಸೆಕ್ಷನ್ 9 (1)(2) ಅಡಿ ಬರುವ ವ್ಯಾಖ್ಯಾನದಲ್ಲಿ ಪೋಷಕರು ಎಂದರೆ ಜೈವಿಕ ತಾಯಿ ಅಥವಾ ತಂದೆ, ಮಲತಂದೆ ಅಥವಾ ಮಲತಾಯಿ ಸೇರಿ ಅಯಾ ಪ್ರಕರಣದ ಅನುಸಾರ ಜೀವನಾಂಶವನ್ನು ಕೇಳಬಹುದಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಮಲ ತಾಯಿ ಮಲ ಮಕ್ಕಳಿಂದ ಜೀವನಾಂಶ ಪಡೆಯಬಹುದು, ಆದರೆ ಪತಿಗೆ ಆಸ್ತಿ ಇತ್ತು, ಅವರಿಗೆ ಆದಾಯ ಬರುತ್ತಿತ್ತು ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ? : ಮೊಹಿದ್ದೀನಿ ಮುನಿರಿ ಅವರ ಮೊದಲ ಪತ್ನಿ ಮೃತಪಟ್ಟ ನಂತರ ಶಫ್ರುನ್ನೀಸಾ ಅವರನ್ನು ಮದುವೆಯಾಗಿದ್ದರು. ಆ ವೇಳೆ ತನ್ನ ಆಸ್ತಿಯಲ್ಲಿ ಪಾಲು ಕೊಡುವುದಾಗಿ ಭರವಸೆ ನೀಡಿದ್ದರು. ಮೊಹಿದ್ದೀನಿ ಅವರು ಭಟ್ಕಳದಲ್ಲಿ ಮನೆ ಹಾಗೂ ಆಸ್ತಿಯನ್ನು ಹೊಂದಿದ್ದರು. ಅವರು 1994ರಲ್ಲಿ ನಿಧನರಾಗಿದ್ದರು. ಆನಂತರ ಶ್ರಫುನ್ನಿಸಾ ತಾನು ಹಿರಿಯ ನಾಗರಿಕಳು, ಅವಿದ್ಯಾವಂತೆ ಮತ್ತು ಭಟ್ಕಳದ ಮನೆಯಿಂದ ಬರುವ 4 ಸಾವಿರ ಬಾಡಿಗೆ ಹೊರತು ಬೇರೆ ಆದಾಯವಿಲ್ಲ. ಜೊತೆಗೆ ಮಗಳಿಗೂ ವಿಚ್ಛೇದನವಾಗಿದೆ, ಮೊಮ್ಮಗುವನ್ನು ನೋಡಿಕೊಳ್ಳಬೇಕು. ಹಾಗಾಗಿ ತನ್ನ ಪತಿಯ ಮಲ ಮಕ್ಕಳಿಂದ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರ ಮನವಿ ಮಾನ್ಯ ಮಾಡಿ ಮಲಮಗ ಖಲೀಲ್ ಉಲ್ ರೆಹಮಾನ್​ಗೆ ಮಲತಾಯಿಗೆ ತಿಂಗಳಿಗೆ 25 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಖಲೀಲ್ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಅಪಘಾತದಲ್ಲಿ ಟೆಕ್ಕಿ ಸಾವು ಪ್ರಕರಣ : 3.66 ಕೋಟಿ ಪರಿಹಾರವನ್ನು 1.99 ಕೋಟಿಗೆ ಕಡಿತಗೊಳಿಸಿದ ಹೈಕೋರ್ಟ್

ಬೆಂಗಳೂರು : ತನ್ನ ಗಂಡನಿಗೆ ಆಸ್ತಿ ಇರುವ ಸಂಬಂಧ ಕೌಟುಂಬಿಕ ನ್ಯಾಯಾಲಯದಲ್ಲಿ ಸಾಬೀತುಪಡಿಸಿದಲ್ಲಿ ಪತಿಯ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಮಲತಾಯಿಯೂ ಜೀವನಾಂಶ ಕೇಳಬಹುದು ಎಂದು ಹೈಕೋರ್ಟ್​ ತಿಳಿಸಿದೆ. ಖಲೀಲ್​ ಉಲ್​ ರೆಹಮಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ. ಕೆ. ನಟರಾಜನ್ ಅವರಿದ್ದ ಏಕ ಸದಸ್ಯಪೀಠವು ಈ ಆದೇಶ ನೀಡಿದೆ.

ಅಲ್ಲದೆ, ವಿಚಾರಣಾ ನ್ಯಾಯಾಲಯ ಮಲತಾಯಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಜೊತೆಗೆ, ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ಮತ್ತೆ ವಿಚಾರಣೆ ನಡೆಸಬೇಕು. ಮಲತಾಯಿ ತನ್ನ ಪತಿ ಅಧಿಕ ಆಸ್ತಿಗಳನ್ನು ಹೊಂದಿದ್ದರು ಮತ್ತು ಅವರಿಗೆ ಆದಾಯವಿತ್ತು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿ ಜೀವನಾಂಶ ಕೇಳಬಹುದು ಎಂದು ಕೋರ್ಟ್​ ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ, ಸುಪ್ರಿಂಕೋರ್ಟ್ ಅಪರಾಧ ದಂಡ ಸಂಹಿತೆ ಸೆಕ್ಷನ್ 125 ಮತ್ತು ಹಿರಿಯ ನಾಗರಿಕರ ಕಾಯಿದೆಯ ಅಂಶಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಅಲ್ಲಿಯವರೆಗೂ ಮಧ್ಯಂತರ ಪರಿಹಾರವಾಗಿ ಮಲತಾಯಿಗೆ ಮಾಸಿಕ 10 ಸಾವಿರ ರೂ.ಗಳ ಜೀವನಾಂಶ ನೀಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.

ಸಿಆರ್​​ಪಿಸಿ ಸೆಕ್ಷನ್ 125 ಅಡಿ ಮಲತಾಯಿಯು ಮಲಮಕ್ಕಳಿಂದ ಜೀವನಾಂಶ ಕೇಳುವ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಹಿರಿಯ ನಾಗರಿಕರ ಕಾಯಿದೆ ಸೆಕ್ಷನ್ 9 (1)(2) ಅಡಿ ಬರುವ ವ್ಯಾಖ್ಯಾನದಲ್ಲಿ ಪೋಷಕರು ಎಂದರೆ ಜೈವಿಕ ತಾಯಿ ಅಥವಾ ತಂದೆ, ಮಲತಂದೆ ಅಥವಾ ಮಲತಾಯಿ ಸೇರಿ ಅಯಾ ಪ್ರಕರಣದ ಅನುಸಾರ ಜೀವನಾಂಶವನ್ನು ಕೇಳಬಹುದಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಮಲ ತಾಯಿ ಮಲ ಮಕ್ಕಳಿಂದ ಜೀವನಾಂಶ ಪಡೆಯಬಹುದು, ಆದರೆ ಪತಿಗೆ ಆಸ್ತಿ ಇತ್ತು, ಅವರಿಗೆ ಆದಾಯ ಬರುತ್ತಿತ್ತು ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ? : ಮೊಹಿದ್ದೀನಿ ಮುನಿರಿ ಅವರ ಮೊದಲ ಪತ್ನಿ ಮೃತಪಟ್ಟ ನಂತರ ಶಫ್ರುನ್ನೀಸಾ ಅವರನ್ನು ಮದುವೆಯಾಗಿದ್ದರು. ಆ ವೇಳೆ ತನ್ನ ಆಸ್ತಿಯಲ್ಲಿ ಪಾಲು ಕೊಡುವುದಾಗಿ ಭರವಸೆ ನೀಡಿದ್ದರು. ಮೊಹಿದ್ದೀನಿ ಅವರು ಭಟ್ಕಳದಲ್ಲಿ ಮನೆ ಹಾಗೂ ಆಸ್ತಿಯನ್ನು ಹೊಂದಿದ್ದರು. ಅವರು 1994ರಲ್ಲಿ ನಿಧನರಾಗಿದ್ದರು. ಆನಂತರ ಶ್ರಫುನ್ನಿಸಾ ತಾನು ಹಿರಿಯ ನಾಗರಿಕಳು, ಅವಿದ್ಯಾವಂತೆ ಮತ್ತು ಭಟ್ಕಳದ ಮನೆಯಿಂದ ಬರುವ 4 ಸಾವಿರ ಬಾಡಿಗೆ ಹೊರತು ಬೇರೆ ಆದಾಯವಿಲ್ಲ. ಜೊತೆಗೆ ಮಗಳಿಗೂ ವಿಚ್ಛೇದನವಾಗಿದೆ, ಮೊಮ್ಮಗುವನ್ನು ನೋಡಿಕೊಳ್ಳಬೇಕು. ಹಾಗಾಗಿ ತನ್ನ ಪತಿಯ ಮಲ ಮಕ್ಕಳಿಂದ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರ ಮನವಿ ಮಾನ್ಯ ಮಾಡಿ ಮಲಮಗ ಖಲೀಲ್ ಉಲ್ ರೆಹಮಾನ್​ಗೆ ಮಲತಾಯಿಗೆ ತಿಂಗಳಿಗೆ 25 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಖಲೀಲ್ ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಅಪಘಾತದಲ್ಲಿ ಟೆಕ್ಕಿ ಸಾವು ಪ್ರಕರಣ : 3.66 ಕೋಟಿ ಪರಿಹಾರವನ್ನು 1.99 ಕೋಟಿಗೆ ಕಡಿತಗೊಳಿಸಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.