ಬೆಂಗಳೂರು : 2019ರ ಮೇ ಯಲ್ಲಿ ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಕಲಿ ನೋಟ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ NIA ವಿಶೇಷ ನ್ಯಾಯಲಯಕ್ಕೆ ಹೆಚ್ಚುವರಿ ಚಾರ್ಚ್ ಶೀಟ್ ಸಲ್ಲಿಕೆಯಾಗಿದೆ.
ಈ ಬಗ್ಗೆ ಮುಂಬೈ NIA ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು. ಮಹಾರಾಷ್ಟ್ರ ಮೂಲದ ಜೆಸಿಮ್, ಕರ್ನಾಟಕ ಗೌರಿಬಿದನೂರು ಮೂಲದ ಇಸಾಕ್ ಖಾನ್, ರಾಧಕೃಷ್ಣ ಆರೋಪಿಗಳನ್ನು NIA ಬಂಧಿಸಿತ್ತು. ಬಂಧಿತರ ಬಳಿ 82 ಸಾವಿರ ಮೌಲ್ಯದ ನಕಲಿ ನೋಟ್ಗಳನ್ನು ಜಪ್ತಿ ಕೂಡ ಮಾಡಿಲಾಗಿತ್ತು.
ತನಿಖೆ ವೇಳೆ ಆರೋಪಿ ಇಸಾಕ್ ಖಾನ್ ಕೊಲ್ಕತ್ತಾದಿಂದ ಕರ್ನಾಟಕಕ್ಕೆ ನಕಲಿ ನೋಟ್ ತಂದಿದ್ದಾಗಿ ಮಾಹಿತಿ ನೀಡಿದ್ದ. ಬಾಂಗ್ಲಾದೇಶದಿಂದ ಕೊಲ್ಕತ್ತಾ ಮೂಲಕ ಕರ್ನಾಟಕಕ್ಕೆ ಸರಬರಾಜು ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟದ್ದರು.
ಕರ್ನಾಟಕ ಜೊತೆಗೆ ದೇಶದ್ಯಾಂತ ನಕಲಿ ನೋಟ್ಗಳನ್ನ ಸಾರ್ವಜನಿಕವಾಗಿ ಮಾರಾಟ ಮಾಡಲು ಆರೋಪಿಗಳು ಯತ್ನಿಸಿದ್ದರು. ಮೂವರು ಆರೋಪಿಗಳ ವಿರುದ್ಧ NIA ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ ಅಂತ NIA ಯಿಂದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.