ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕೇರಳ ಜೆಡಿಎಸ್ ಶಾಸಕ ಸಿ.ಕೆ. ನಾನು ನೇತೃತ್ವದ ರಾಜ್ಯ ಘಟಕವನ್ನು ವಿಸರ್ಜಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಆದೇಶಿಸಿದ್ದಾರೆ.
ಪಕ್ಷದ ಸಂಘಟನಾತ್ಮಕ ಮೇಲುಸ್ತುವಾರಿ ವಹಿಸಲು ತಾತ್ಕಾಲಿಕವಾಗಿ ಹಂಗಾಮಿ ಅಧ್ಯಕ್ಷರನ್ನಾಗಿ ಮ್ಯಾಥ್ಯೂ ಟಿ. ಥಾಮಸ್ ಅವರನ್ನು ನೇಮಕ ಮಾಡಿದ್ದಾರೆ. ಸಂಘಟನೆ ವಿಚಾರದಲ್ಲಿ ವಿಫಲವಾಗಿರುವ ಮತ್ತು ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದರು ಎಂಬ ಆರೋಪದ ಮೇಲೆ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ.ಎಂ. ಫಾರೂಕ್ ಅವರು ವಿವರಣೆ ಕೇಳಿ ನೋಟಿಸ್ ನೀಡಿದ್ದರು. ಆದರೆ, ಶಾಸಕ ಸಿ.ಕೆ. ನಾನು ಅವರು ನೊಟೀಸ್ ಗೆ ಯಾವುದೇ ಉತ್ತರ ನೀಡದ ಕಾರಣ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೇವೇಗೌಡರು ತಿಳಿಸಿದ್ದಾರೆ.
![banglore](https://etvbharatimages.akamaized.net/etvbharat/prod-images/kn-bng-04-devegowda-statement-script-7208083_12102020201626_1210f_1602513986_290.jpg)
ಉಪಾಧ್ಯಕ್ಷರಾಗಿ ಜೋಸೆ ತೆಟ್ಟಾಯಿಲ್, ಜಮೀಲಾ ಪ್ರಕಾಶಂ ಹಾಗೂ ಬೆನ್ನಿ ಮೂಂಜೇಲಿ, ವಿ.ಮುರುಗದಾಸ್, ಬಿಜೈ ಜೋಸೆಫ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮಹಮದ್ ಶಾ ಅವರನ್ನು ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.