ETV Bharat / state

Debate on Budget: ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ, ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ

ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮೇಲೆ ಸೋಮವಾರ ನಡೆದ ಸಾಮಾನ್ಯ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

author img

By

Published : Jul 17, 2023, 4:03 PM IST

Debate on Budget
ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ
ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.

ಬೆಂಗಳೂರು: ''ಆದ್ಯತಾ ವಲಯಗಳಿಗೆ ಬಜೆಟ್​ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿಲ್ಲ'' ಎಂದು ಬಿಜೆಪಿಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾಡಿದ ಆರೋಪವು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ಸೋಮವಾರ ನಡೆಯಿತು.

2023-24ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ, ಅಂಕಿ- ಅಂಶಗಳ ಸಹಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅರಗ ಜ್ಞಾನೇಂದ್ರ ಅವರು ಮುಂದಾದಾಗ, ಮಧ್ಯೆ ಪ್ರವೇಶಿಸಿದ ಇಂಧನ ಸಚಿವ ಕೆ ಜೆ ಜಾರ್ಜ್, ಆರೋಪದಲ್ಲಿ ಹುರುಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ, ಪ್ರತಿಪಕ್ಷಗಳ ನಡುವೆ ವಾಗ್ವಾದ: ಈ ವೇಳೆ, ಬಿಜೆಪಿ ಶಾಸಕರಾದ ಅಶ್ವತ್ಧನಾರಾಯಣ, ಎಸ್‍ ಟಿ ಸೋಮಶೇಖರ್, ಅರವಿಂದ ಬೆಲ್ಲದ್‍ ಮೊದಲಾದವರು, ಸಚಿವ ಜಾರ್ಜ್ ಅವರ ಧೋರಣೆಯನ್ನು ಟೀಕಿಸಿದರು. ಆಡಳಿತ ಪಕ್ಷದ ಶಾಸಕರಾದ ಎನ್‍ ಎಚ್‍ ಕೋನರೆಡ್ಡಿ, ಕೆ ಎಂ ಶಿವಲಿಂಗೇಗೌಡ ಮತ್ತಿತರರು ಪ್ರತಿಭಟಿಸಿದಾಗ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.

ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ''ಎಲ್ಲರೂ ಒಮ್ಮೆಲೇ ಎದ್ದು ನಿಂತು ಮಾತನಾಡಲು ಶುರು ಮಾಡಿದರೆ, ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೇ, ಗೊಂದಲ ಉಂಟಾಗುತ್ತದೆ. ಅವಕಾಶ ನೀಡಿದವರು ಮಾತನಾಡಿದರೆ, ಅರ್ಥಪೂರ್ಣ ಚರ್ಚೆಗೆ ಅನುಕೂಲವಾಗುತ್ತದೆ. ಜನಪರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಲು ಸದನದ ಸದಸ್ಯರ ಆಶಯವಾಗಿರುತ್ತದೆ. ಅದಕ್ಕೆ ಪೂರಕವಾಗಿ ಮಾತನಾಡುವುದು ಒಳ್ಳೆಯದು. ಉತ್ತಮ ನಾಯಕರಾಗಬೇಕಾದರೆ, ಉತ್ತಮ ಕೇಳುಗರೂ ಆಗಿರಬೇಕು ಎಂದು ಕಿವಿಮಾತು ಹೇಳಿದರು.

ಬಜೆಟ್‍ ಪಾವಿತ್ರ್ಯತೆಗೆ ತೀಲಾಂಜಲಿ: ಇದಕ್ಕೂ ಮುನ್ನ ಬಜೆಟ್ ಮೇಲೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಮುಂಗಡಪತ್ರದಲ್ಲಿ ಬಜೆಟ್‍ ಪಾವಿತ್ರ್ಯತೆಗೆ ತೀಲಾಂಜಲಿ ನೀಡಿದ್ದಾರೆ'' ಎಂದು ಆರೋಪಿಸಿದರು. ''ಬಜೆಟ್‍ನಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸಂಪ್ರದಾಯ. ಆದರೆ, ಹಿಂದಿನ ಸರ್ಕಾರವನ್ನು ಬಜೆಟ್‍ ಭಾಷಣದಲ್ಲಿ ತೆಗಳಿದ್ದಾರೆ. ಕೇಂದ್ರ ಸರ್ಕಾರ ದೇಶವನ್ನು ಹಾಳು ಮಾಡಿದೆ ಎಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಾರೂ ಈ ರೀತಿಯ ಬಜೆಟ್‍ ಮಂಡಿಸಿರಲಿಲ್ಲ. ಇದನ್ನು ಖಂಡಿಸುತ್ತೇನೆ'' ಎಂದರು.

ಮುಖ್ಯಮಂತ್ರಿ ಈ ರೀತಿಯ ಬಜೆಟ್‍ ಮಂಡಿಸುವಾಗ ನೋವಾಗಿತ್ತು. ಅಡ್ಡಿಪಡಿಸಬೇಕಿತ್ತು. ಆದರೂ ಸಹನೆಯಿಂದ ಆಲಿಸಿದೆವು ಎಂದರು. ಆಗ ಇಂಧನ ಸಚಿವ ಕೆ ಜೆ ಜಾರ್ಜ್ ಅವರು, 3.27 ಲಕ್ಷ ಕೋಟಿ ಬಜೆಟ್‍ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲವೆ ಎಂದು ಪ್ರಶ್ನಿಸಿ, ಬಸವರಾಜ ಬೊಮ್ಮಾಯಿ ಅವರು ಇದಕ್ಕೂ ಮುನ್ನ ಬಜೆಟ್‍ ಮಂಡಿಸಿದ್ದರು. ಹೀಗಾಗಿ ಹೆಚ್ಚಿನ ಹೊಸ ಯೋಜನೆಗಳು ಇಲ್ಲ ಎಂದು ಸಮರ್ಥಿಸಿಕೊಂಡರು.

ನಂತರ ಆರಗ ಜ್ಞಾನೇಂದ್ರ ಮಾತನಾಡಿ, ಗ್ಯಾರಂಟಿಗಳು ಪುಷ್ಪಕ ವಿಮಾನವೇರಿದಂತೆ ಬಂದವು. ಗ್ಯಾರಂಟಿ ಕಾರ್ಡ್ ಬಹಳ ಕೆಲಸ ಮಾಡಿದೆ. ರಾಜಕೀಯದಲ್ಲಿ ನೀವು ಮಾಡಿದ ತಂತ್ರವನ್ನು ಯಾರೂ ಮಾಡಿಲ್ಲ. ಸಾಧನೆ ಆಧಾರದ ಮೇಲೆ ಮತ ಯಾಚಿಸುವ ಬದಲು ಆಮಿಷವೊಡ್ಡಿ ಮತ ಕೇಳಿದ್ದೀರಾ? ಬಜೆಟ್‍ನಲ್ಲಿನ ಅಂಕಿ-ಅಂಶಗಳು ಜನರಿಗೆ ಮೋಸ ಮಾಡುವಂತಿವೆ. ರಾಜ್ಯದ ಹಿತ ಮತ್ತು ಜನರ ಹಿತ ಬಲಿಕೊಟ್ಟು ಅಧಿಕಾರಕ್ಕೆ ಬಂದಿದ್ದೀರಿ ಎಂದಾಗ ಆಡಳಿತ ಪಕ್ಷದ ಶಾಸಕ ಪ್ರಸಾದ್‍ ಅಬ್ಬಯ್ಯ ಮತ್ತು ಸಚಿವ ಪ್ರಿಯಾಂಕ್​ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.

11 ಸಾವಿರ ಕೋಟಿ ರೂ. ಕಡಿತ: ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಟಿಎಸ್‍ಪಿ ಮತ್ತು ಎಸ್‍ಇಪಿ ಯೋಜನೆಗಳಿಗೆ ಬಜೆಟ್‍ನಲ್ಲಿ 34 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿ, ಗ್ಯಾರಂಟಿ ಯೋಜನೆಗಳಿಗಾಗಿ ಇದೇ ಮೊತ್ತದಿಂದ 11 ಸಾವಿರ ಕೋಟಿ ರೂ. ಕಡಿತಗೊಳಿಸಲಾಗಿದೆ. ಈ ಮೂಲಕ ಆ ಸಮುದಾಯಗಳ ಅನ್ನವನ್ನು ಕಿತ್ತುಕೊಂಡಂತಾಗಿದೆ ಎಂದು ಆರಗ ಜ್ಞಾನೇಂದ್ರ ಅವರು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್​ ಖರ್ಗೆ ಅವರು, ''ನಿಮ್ಮ ಆಡಳಿತಾವಧಿಯಲ್ಲಿ 17 ಸಾವಿರ ಕೋಟಿ ರೂ. ಮೀಸಲಿಟ್ಟು, 10 ಸಾವಿರ ಕೋಟಿ ರೂ.ಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿಲ್ಲವೇ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸದನಕ್ಕೆ ಸಕಾಲಕ್ಕೆ ಸಚಿವರು ಆಗಮಿಸಬೇಕು.. ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.

ಬೆಂಗಳೂರು: ''ಆದ್ಯತಾ ವಲಯಗಳಿಗೆ ಬಜೆಟ್​ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿಲ್ಲ'' ಎಂದು ಬಿಜೆಪಿಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾಡಿದ ಆರೋಪವು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ಸೋಮವಾರ ನಡೆಯಿತು.

2023-24ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ, ಅಂಕಿ- ಅಂಶಗಳ ಸಹಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅರಗ ಜ್ಞಾನೇಂದ್ರ ಅವರು ಮುಂದಾದಾಗ, ಮಧ್ಯೆ ಪ್ರವೇಶಿಸಿದ ಇಂಧನ ಸಚಿವ ಕೆ ಜೆ ಜಾರ್ಜ್, ಆರೋಪದಲ್ಲಿ ಹುರುಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ, ಪ್ರತಿಪಕ್ಷಗಳ ನಡುವೆ ವಾಗ್ವಾದ: ಈ ವೇಳೆ, ಬಿಜೆಪಿ ಶಾಸಕರಾದ ಅಶ್ವತ್ಧನಾರಾಯಣ, ಎಸ್‍ ಟಿ ಸೋಮಶೇಖರ್, ಅರವಿಂದ ಬೆಲ್ಲದ್‍ ಮೊದಲಾದವರು, ಸಚಿವ ಜಾರ್ಜ್ ಅವರ ಧೋರಣೆಯನ್ನು ಟೀಕಿಸಿದರು. ಆಡಳಿತ ಪಕ್ಷದ ಶಾಸಕರಾದ ಎನ್‍ ಎಚ್‍ ಕೋನರೆಡ್ಡಿ, ಕೆ ಎಂ ಶಿವಲಿಂಗೇಗೌಡ ಮತ್ತಿತರರು ಪ್ರತಿಭಟಿಸಿದಾಗ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.

ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ''ಎಲ್ಲರೂ ಒಮ್ಮೆಲೇ ಎದ್ದು ನಿಂತು ಮಾತನಾಡಲು ಶುರು ಮಾಡಿದರೆ, ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೇ, ಗೊಂದಲ ಉಂಟಾಗುತ್ತದೆ. ಅವಕಾಶ ನೀಡಿದವರು ಮಾತನಾಡಿದರೆ, ಅರ್ಥಪೂರ್ಣ ಚರ್ಚೆಗೆ ಅನುಕೂಲವಾಗುತ್ತದೆ. ಜನಪರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಲು ಸದನದ ಸದಸ್ಯರ ಆಶಯವಾಗಿರುತ್ತದೆ. ಅದಕ್ಕೆ ಪೂರಕವಾಗಿ ಮಾತನಾಡುವುದು ಒಳ್ಳೆಯದು. ಉತ್ತಮ ನಾಯಕರಾಗಬೇಕಾದರೆ, ಉತ್ತಮ ಕೇಳುಗರೂ ಆಗಿರಬೇಕು ಎಂದು ಕಿವಿಮಾತು ಹೇಳಿದರು.

ಬಜೆಟ್‍ ಪಾವಿತ್ರ್ಯತೆಗೆ ತೀಲಾಂಜಲಿ: ಇದಕ್ಕೂ ಮುನ್ನ ಬಜೆಟ್ ಮೇಲೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಮುಂಗಡಪತ್ರದಲ್ಲಿ ಬಜೆಟ್‍ ಪಾವಿತ್ರ್ಯತೆಗೆ ತೀಲಾಂಜಲಿ ನೀಡಿದ್ದಾರೆ'' ಎಂದು ಆರೋಪಿಸಿದರು. ''ಬಜೆಟ್‍ನಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸಂಪ್ರದಾಯ. ಆದರೆ, ಹಿಂದಿನ ಸರ್ಕಾರವನ್ನು ಬಜೆಟ್‍ ಭಾಷಣದಲ್ಲಿ ತೆಗಳಿದ್ದಾರೆ. ಕೇಂದ್ರ ಸರ್ಕಾರ ದೇಶವನ್ನು ಹಾಳು ಮಾಡಿದೆ ಎಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಾರೂ ಈ ರೀತಿಯ ಬಜೆಟ್‍ ಮಂಡಿಸಿರಲಿಲ್ಲ. ಇದನ್ನು ಖಂಡಿಸುತ್ತೇನೆ'' ಎಂದರು.

ಮುಖ್ಯಮಂತ್ರಿ ಈ ರೀತಿಯ ಬಜೆಟ್‍ ಮಂಡಿಸುವಾಗ ನೋವಾಗಿತ್ತು. ಅಡ್ಡಿಪಡಿಸಬೇಕಿತ್ತು. ಆದರೂ ಸಹನೆಯಿಂದ ಆಲಿಸಿದೆವು ಎಂದರು. ಆಗ ಇಂಧನ ಸಚಿವ ಕೆ ಜೆ ಜಾರ್ಜ್ ಅವರು, 3.27 ಲಕ್ಷ ಕೋಟಿ ಬಜೆಟ್‍ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲವೆ ಎಂದು ಪ್ರಶ್ನಿಸಿ, ಬಸವರಾಜ ಬೊಮ್ಮಾಯಿ ಅವರು ಇದಕ್ಕೂ ಮುನ್ನ ಬಜೆಟ್‍ ಮಂಡಿಸಿದ್ದರು. ಹೀಗಾಗಿ ಹೆಚ್ಚಿನ ಹೊಸ ಯೋಜನೆಗಳು ಇಲ್ಲ ಎಂದು ಸಮರ್ಥಿಸಿಕೊಂಡರು.

ನಂತರ ಆರಗ ಜ್ಞಾನೇಂದ್ರ ಮಾತನಾಡಿ, ಗ್ಯಾರಂಟಿಗಳು ಪುಷ್ಪಕ ವಿಮಾನವೇರಿದಂತೆ ಬಂದವು. ಗ್ಯಾರಂಟಿ ಕಾರ್ಡ್ ಬಹಳ ಕೆಲಸ ಮಾಡಿದೆ. ರಾಜಕೀಯದಲ್ಲಿ ನೀವು ಮಾಡಿದ ತಂತ್ರವನ್ನು ಯಾರೂ ಮಾಡಿಲ್ಲ. ಸಾಧನೆ ಆಧಾರದ ಮೇಲೆ ಮತ ಯಾಚಿಸುವ ಬದಲು ಆಮಿಷವೊಡ್ಡಿ ಮತ ಕೇಳಿದ್ದೀರಾ? ಬಜೆಟ್‍ನಲ್ಲಿನ ಅಂಕಿ-ಅಂಶಗಳು ಜನರಿಗೆ ಮೋಸ ಮಾಡುವಂತಿವೆ. ರಾಜ್ಯದ ಹಿತ ಮತ್ತು ಜನರ ಹಿತ ಬಲಿಕೊಟ್ಟು ಅಧಿಕಾರಕ್ಕೆ ಬಂದಿದ್ದೀರಿ ಎಂದಾಗ ಆಡಳಿತ ಪಕ್ಷದ ಶಾಸಕ ಪ್ರಸಾದ್‍ ಅಬ್ಬಯ್ಯ ಮತ್ತು ಸಚಿವ ಪ್ರಿಯಾಂಕ್​ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.

11 ಸಾವಿರ ಕೋಟಿ ರೂ. ಕಡಿತ: ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಟಿಎಸ್‍ಪಿ ಮತ್ತು ಎಸ್‍ಇಪಿ ಯೋಜನೆಗಳಿಗೆ ಬಜೆಟ್‍ನಲ್ಲಿ 34 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿ, ಗ್ಯಾರಂಟಿ ಯೋಜನೆಗಳಿಗಾಗಿ ಇದೇ ಮೊತ್ತದಿಂದ 11 ಸಾವಿರ ಕೋಟಿ ರೂ. ಕಡಿತಗೊಳಿಸಲಾಗಿದೆ. ಈ ಮೂಲಕ ಆ ಸಮುದಾಯಗಳ ಅನ್ನವನ್ನು ಕಿತ್ತುಕೊಂಡಂತಾಗಿದೆ ಎಂದು ಆರಗ ಜ್ಞಾನೇಂದ್ರ ಅವರು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್​ ಖರ್ಗೆ ಅವರು, ''ನಿಮ್ಮ ಆಡಳಿತಾವಧಿಯಲ್ಲಿ 17 ಸಾವಿರ ಕೋಟಿ ರೂ. ಮೀಸಲಿಟ್ಟು, 10 ಸಾವಿರ ಕೋಟಿ ರೂ.ಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡಿಲ್ಲವೇ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸದನಕ್ಕೆ ಸಕಾಲಕ್ಕೆ ಸಚಿವರು ಆಗಮಿಸಬೇಕು.. ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.