ETV Bharat / state

ಕೆಲವರು ಅಂಬೇಡ್ಕರ್ ಹೆಸರೇಳಿ ಉದ್ಧಾರವಾಗಿ ಜನಾಂಗವನ್ನು ಹಾಗೆಯೇ ಇಟ್ಟಿದ್ದಾರೆ: ಸಿಎಂ

author img

By

Published : Apr 14, 2022, 6:15 PM IST

ಯಾವುದೇ ಒಂದು ಜನಾಂಗ ಮತ್ತು ಸಮುದಾಯವನ್ನು ರಾಜಕೀಯವಾಗಿ ಬಳಕೆ ಮಾಡುವುದು ಅಪರಾಧ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಹಾಗಾಗಿ, ಸ್ವತಂತ್ರ ಚಿಂತನೆ ಮಾಡಿ, ಒಳ್ಳೆಯವರನ್ನು ಗುರುತಿಸಿ, ಬರೀ ಮಾತನಾಡಿ ಘೋಷಣೆ ಮಾಡುವವರನ್ನಲ್ಲ. ಕೆಲಸದಿಂದ ಎಲ್ಲವನ್ನೂ ಅಳೆಯಿರಿ. ಪರಿವರ್ತನೆ ಲೋಕದ ಧರ್ಮ, ಅಂಬೇಡ್ಕರ್‌ರವರ ಮಂತ್ರವೂ ಇದೇ ಆಗಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕೆಲವರು ಅಂಬೇಡ್ಕರ್ ಹೆಸರೇಳಿಕೊಂಡು ಉದ್ಧಾರ ಆಗಿ ಜನಾಂಗವನ್ನು ಹಾಗೆಯೇ ಇಟ್ಟಿದ್ದಾರೆ: ಸಿಎಂ
ಕೆಲವರು ಅಂಬೇಡ್ಕರ್ ಹೆಸರೇಳಿಕೊಂಡು ಉದ್ಧಾರ ಆಗಿ ಜನಾಂಗವನ್ನು ಹಾಗೆಯೇ ಇಟ್ಟಿದ್ದಾರೆ: ಸಿಎಂ

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಮಾಜಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ಇಂದು ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪಿಟಿಸಿಎಲ್ ಕಾಯಿದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಯಿದೆಯನ್ನು ದುರ್ಬಲವಾಗಲು ಬಿಡುವುದಿಲ್ಲ ಎಂದಿರುವ ಅವರು, ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಅಂಬೇಡ್ಕರ್‌ ಗುಣಧರ್ಮಗಳನ್ನು ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು.


'ಪರಿವರ್ತನೆ ಲೋಕದ ಧರ್ಮ': ಯಾವುದೇ ಒಂದು ಜನಾಂಗ ಮತ್ತು ಸಮುದಾಯವನ್ನು ರಾಜಕೀಯವಾಗಿ ಬಳಕೆ ಮಾಡುವುದು ಅಪರಾಧ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಹಾಗಾಗಿ, ಸ್ವತಂತ್ರ ಚಿಂತನೆ ಮಾಡಿ, ಒಳ್ಳೆಯವರನ್ನು ಅವರನ್ನು ಗುರುತಿಸಿ, ಬರೀ ಮಾತನಾಡಿ ಘೋಷಣೆ ಮಾಡುವವರನ್ನಲ್ಲ. ಕೆಲಸದಿಂದ ಎಲ್ಲವನ್ನೂ ಅಳೆಯಿರಿ. ಪರಿವರ್ತನೆ ಲೋಕದ ಧರ್ಮ. ಅಂಬೇಡ್ಕರ್‌ರವರ ಮಂತ್ರವೂ ಇದೆ ಆಗಿತ್ತು. ನಾವು ಪರಿವರ್ತನೆ ಮಾಡಿಯೇ ತೀರುತ್ತೇವೆ. ನೀವು ಪರಿವರ್ತನೆಯ ಸಾಧನೆ ಮಾಡಿ, ಅಲ್ಲಿಯವರೆಗೂ ವಿಶ್ರಮಿಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡೋಣ ಎಂದು ಕರೆ ಕೊಟ್ಟರು.

'ಜನಾಂಗ ಜಾಗೃತಿಯಾದರೆ ಬದಲಾವಣೆ': ಈ ಹಿಂದೆ ಅಂಬೇಡ್ಕರ್‌ ಹೆಸರೇಳಿಕೊಂಡು ಅವರನ್ನು ಹೊಗಳಿ ಬಹಳಷ್ಟು ಜನ ಉನ್ನತ ಸ್ಥಾನ ಅಲಂಕರಿಸಿ ಸಮಾಜ ಮರೆತರು. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಅಂಬೇಡ್ಕರ್ ಹೆಸರು ಹೇಳಿ ತಾವು ಮಾತ್ರ ಉದ್ಧಾರವಾಗಿ, ಜನಾಂಗವನ್ನು ಹಾಗೆಯೇ ಇಟ್ಟರು. ಜನಾಂಗ ಜಾಗೃತಿಯಾದರೆ ಬದಲಾವಣೆಯಾಗುತ್ತದೆ. ಈ ಬದಲಾವಣೆ ಬೇಡ ಎಂದು ಇವರೆಲ್ಲ ಜನಾಂಗದ ಅಭಿವೃದ್ಧಿಗೆ ಮುಂದಾಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಂಬೇಡ್ಕರ್ ಜನ್ಮದಿನದ ಕಾರ್ಯಕ್ರಮದಲ್ಲಿ ಸಿಎಂಗೆ ಪ್ರತಿಭಟನೆ ಬಿಸಿ

ಅಂಬೇಡ್ಕರ್ ಓಡಾಡಿದ ಸ್ಥಳಗಳ ಅಭಿವೃದ್ಧಿ: ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಓಡಾಡಿದ, ನೆಲೆಸಿದ ಸ್ಥಳಗಳು ಸ್ಫೂರ್ತಿಯ ಸೆಲೆಗಳು. ಇಂತಹ 10 ಸ್ಥಳಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ತಿಳಿಸಿದರು.

ಇದಕ್ಕೂ ಮೊದಲು ಎಸ್.ಸಿದ್ದಾರ್ಥ, ಆರ್.ಎಸ್.ಸರಸ್ವತಮ್ಮ, ಡಿ. ರಾಮಾನಾಯಕ್, ಗುರುವಪ್ಪ, ಎನ್.ಟಿ.ಬಾಳೇಪುಣಿ ಮತ್ತು ಬಿ.ಎಂ.ಗಿರಿರಾಜ್ ಅವರಿಗೆ ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಗೌರವಿಸಿದರು.

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನನ್ವಯ ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸಮಾಜಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ಇಂದು ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪಿಟಿಸಿಎಲ್ ಕಾಯಿದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಯಿದೆಯನ್ನು ದುರ್ಬಲವಾಗಲು ಬಿಡುವುದಿಲ್ಲ ಎಂದಿರುವ ಅವರು, ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ಸಮಾಜದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಅಂಬೇಡ್ಕರ್‌ ಗುಣಧರ್ಮಗಳನ್ನು ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಹೇಳಿದರು.


'ಪರಿವರ್ತನೆ ಲೋಕದ ಧರ್ಮ': ಯಾವುದೇ ಒಂದು ಜನಾಂಗ ಮತ್ತು ಸಮುದಾಯವನ್ನು ರಾಜಕೀಯವಾಗಿ ಬಳಕೆ ಮಾಡುವುದು ಅಪರಾಧ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಹಾಗಾಗಿ, ಸ್ವತಂತ್ರ ಚಿಂತನೆ ಮಾಡಿ, ಒಳ್ಳೆಯವರನ್ನು ಅವರನ್ನು ಗುರುತಿಸಿ, ಬರೀ ಮಾತನಾಡಿ ಘೋಷಣೆ ಮಾಡುವವರನ್ನಲ್ಲ. ಕೆಲಸದಿಂದ ಎಲ್ಲವನ್ನೂ ಅಳೆಯಿರಿ. ಪರಿವರ್ತನೆ ಲೋಕದ ಧರ್ಮ. ಅಂಬೇಡ್ಕರ್‌ರವರ ಮಂತ್ರವೂ ಇದೆ ಆಗಿತ್ತು. ನಾವು ಪರಿವರ್ತನೆ ಮಾಡಿಯೇ ತೀರುತ್ತೇವೆ. ನೀವು ಪರಿವರ್ತನೆಯ ಸಾಧನೆ ಮಾಡಿ, ಅಲ್ಲಿಯವರೆಗೂ ವಿಶ್ರಮಿಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡೋಣ ಎಂದು ಕರೆ ಕೊಟ್ಟರು.

'ಜನಾಂಗ ಜಾಗೃತಿಯಾದರೆ ಬದಲಾವಣೆ': ಈ ಹಿಂದೆ ಅಂಬೇಡ್ಕರ್‌ ಹೆಸರೇಳಿಕೊಂಡು ಅವರನ್ನು ಹೊಗಳಿ ಬಹಳಷ್ಟು ಜನ ಉನ್ನತ ಸ್ಥಾನ ಅಲಂಕರಿಸಿ ಸಮಾಜ ಮರೆತರು. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡುತ್ತಿವೆ. ಅಂಬೇಡ್ಕರ್ ಹೆಸರು ಹೇಳಿ ತಾವು ಮಾತ್ರ ಉದ್ಧಾರವಾಗಿ, ಜನಾಂಗವನ್ನು ಹಾಗೆಯೇ ಇಟ್ಟರು. ಜನಾಂಗ ಜಾಗೃತಿಯಾದರೆ ಬದಲಾವಣೆಯಾಗುತ್ತದೆ. ಈ ಬದಲಾವಣೆ ಬೇಡ ಎಂದು ಇವರೆಲ್ಲ ಜನಾಂಗದ ಅಭಿವೃದ್ಧಿಗೆ ಮುಂದಾಗಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಂಬೇಡ್ಕರ್ ಜನ್ಮದಿನದ ಕಾರ್ಯಕ್ರಮದಲ್ಲಿ ಸಿಎಂಗೆ ಪ್ರತಿಭಟನೆ ಬಿಸಿ

ಅಂಬೇಡ್ಕರ್ ಓಡಾಡಿದ ಸ್ಥಳಗಳ ಅಭಿವೃದ್ಧಿ: ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಓಡಾಡಿದ, ನೆಲೆಸಿದ ಸ್ಥಳಗಳು ಸ್ಫೂರ್ತಿಯ ಸೆಲೆಗಳು. ಇಂತಹ 10 ಸ್ಥಳಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ತಿಳಿಸಿದರು.

ಇದಕ್ಕೂ ಮೊದಲು ಎಸ್.ಸಿದ್ದಾರ್ಥ, ಆರ್.ಎಸ್.ಸರಸ್ವತಮ್ಮ, ಡಿ. ರಾಮಾನಾಯಕ್, ಗುರುವಪ್ಪ, ಎನ್.ಟಿ.ಬಾಳೇಪುಣಿ ಮತ್ತು ಬಿ.ಎಂ.ಗಿರಿರಾಜ್ ಅವರಿಗೆ ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಗೌರವಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.