ಹೊಸಕೋಟೆ(ಬೆಂ.ಗ್ರಾ): ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ಹೇಳುವ ಕೆಲಸವನ್ನು ಒಂದಿಷ್ಟು ಶಾಸಕರು ಮಾತ್ರ ಉತ್ಸಾಹದಿಂದ ಮಾಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸಕೋಟೆ ತಾಲೂಕಿನ ಶಾಸಕ ಶರತ್ ಬಚ್ಚೇಗೌಡ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸಕ್ರಿಯವಾಗಿ ಹೋರಾಟ ಮಾಡುತ್ತಿದ್ದಾರೆ.
ಅದೇ ರೀತಿ ಇಂದು ಹೊಸಕೋಟೆ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಶರತ್ ಬಚ್ಚೇಗೌಡ ಮತ್ತು ತಾಲೂಕು ವೈದ್ಯಾಧಿಕಾರಿ ಉಮೇಶ್ ರೆಡ್ಡಿ ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳ ಆರೋಗ್ಯ ವಿಚಾರಿಸಿ, ಕಾಯಿಲೆಯಿಂದ ಬೇಗ ಗುಣಮುಖರಾಗುವಂತೆ ಧೈರ್ಯ ಹೇಳಿ ಯೋಗಕ್ಷೇಮ ವಿಚಾರಿಸಿದರು.
ಚಿಕಿತ್ಸೆ ಸರಿಯಾಗಿಲ್ಲದಿರುವುದು ಸೇರಿ ಏನಾದರೂ ಸಮಸ್ಯಗಳಿದ್ದರೆ ತನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಇದೇ ವೇಳೆ ರೋಗಿಗಳಿಗೆ ತಿಳಿಸಿದರು.
![mla sharat bacchegowda visits covid ward](https://etvbharatimages.akamaized.net/etvbharat/prod-images/_02052021200156_0205f_1619965916_17.jpg)
ಕಳೆದ ವಾರ 1 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಉದ್ಘಾಟನೆ ಮಾಡಲಾಗಿತ್ತು. ಪ್ರತಿದಿನ ಒಂದೊಂದು ಹೋಬಳಿಗಳಲ್ಲಿ ಕೋವಿಡ್ ನಿಯಂತ್ರಣ ಮಾಡಲು ಸಾಲು ಸಾಲು ಸಭೆಗಳನ್ನ ಮಾಡಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಣ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
![mla sharat bacchegowda visits covid ward](https://etvbharatimages.akamaized.net/etvbharat/prod-images/_02052021200156_0205f_1619965916_1080.jpg)
![mla sharat bacchegowda visits covid ward](https://etvbharatimages.akamaized.net/etvbharat/prod-images/_02052021200156_0205f_1619965916_1000.jpg)
ತಾಲೂಕಿನಲ್ಲಿರುವ ಎಲ್ಲಾ ಆಸ್ಪತ್ರೆ ಮುಖ್ಯಸ್ಥರ ಸಭೆ ನಡೆಸಿ ಮೊದಲು ನಮ್ಮ ತಾಲೂಕಿನ ಜನರ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಂಡರು. ನಮ್ಮ ಕ್ಷೇತ್ರದ ಜನರು ಬೆಡ್ ಇಲ್ಲದೆ ಪರದಾಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.