ETV Bharat / state

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ....  ಹೇಗಿತ್ತು ವಾಕ್ ಸಮರ?

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಇಂದಿನ ಸುಪ್ರೀಂಕೋರ್ಟ್ ತೀರ್ಪು ವರದಾನವಾಗಿದ್ರೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಾಟಕ್ಕೆ  ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದ್ರೀಗ ತೀರ್ಪಿನಿಂದಾಗಿ ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ.

author img

By

Published : Nov 13, 2019, 9:08 PM IST

Updated : Nov 14, 2019, 8:03 AM IST

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ

ಹೊಸಕೋಟೆ: ಇಂದು ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಹೊಸಕೋಟೆ ವಿಧಾನಸಭಾ ಉಪಚುನಾವಣಾ ಕಣ ರಣರಂಗದಂತಾಗಿದ್ದು, ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ನಡುವೆ ಬಿಗ್ ಫೈಟ್ ಶುರುವಾಗಿದೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್​​ಗೆ ಇಂದಿನ ಸುಪ್ರೀಂಕೋರ್ಟ್ ತೀರ್ಪು ವರದಾನವಾಗಿದ್ರೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಾಟಕ್ಕೆ ಬಿರುಸಿನ ಪ್ರಚಾರ ನಡೆಸುತ್ತಿದ್ದು, ನಾಳೆ ನಾಮಪತ್ರ ಸಲ್ಲಿಸುವ ದಿನಾಂಕ ಘೋಷಣೆ ಮಾಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಅವಕಾಶ ಇದ್ರೆ ಶರತ್ ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದು ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ.

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ

ಹೊಸಕೋಟೆ ಅನರ್ಹ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ, ತೀರ್ಪು ಸ್ವಾಗತಿಸುತ್ತೇವೆ. ಬಿಜೆಪಿ ಪಕ್ಷ ನನ್ನ ಬೆನ್ನಿಗೆ ನಿಲ್ಲುತ್ತದೆ ಎಂದ ಅವರು, ರಾಜಕಾರಣದಲ್ಲಿ ನಾವು ಸಾರ್ವಜನಿಕರ ಸೇವೆಗಾಗಿ ಬಂದಿದ್ದೇವೆ ಎನ್ನುತ್ತಿರುವ ಅಪ್ಪ - ಮಗನನ್ನು ಮಾಧ್ಯಮದ ಮುಂದೆ ಚರ್ಚೆಗೆ ಕರೆಯಿರಿ ನಾನೂ ಬರುತ್ತೇನೆ ಎಂದು ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡಗೆ ಸವಾಲ್ ಹಾಕಿದ್ದಾರೆ.

ನಂತರ ಮಾತನಾಡಿದ ಅವರು, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಪಕ್ಷಕ್ಕೆ ಸೇರ್ಪಡೆ ಬಗ್ಗೆ ನಾಯಕರ ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡು, ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿ ಮಾಡುತ್ತೇವೆ. ಹಾಗೆ ಹೊಸಕೋಟೆಯ ಗೊಂದಲಗಳನ್ನು ಬಿಜೆಪಿ ನಾಯಕರೇ ಸರಿಪಡಿಸುತ್ತಾರೆ ಎಂದರು.

ಇನ್ನು ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಮಾತನಾಡಿದ್ದು, ತಾಲೂಕಿನ ಜನ ಮತ್ತು ಕಾರ್ಯಕರ್ತರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ.ಇನ್ನು ಎಂಟಿಬಿ ನಾಗರಾಜ್ ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಅಪ್ಪ ಮಕ್ಕಳು ಚರ್ಚೆಗೆ ಬರೋ ಅವಶ್ಯಕತೆ ಇಲ್ಲ. ಅವರ ವಿರುದ್ಧ ಸ್ಪರ್ಧೆಗೆ ನಿಂತಿರುವುದು ನಾನು , ಬಚ್ಚೇಗೌಡರು ರಾಜ್ಯದ ದೊಡ್ಡ ಮಟ್ಟದ ನಾಯಕರು ಅಂತವರನ್ನು ಇಂತಹ ಲೋ ಲೆವೆಲ್ ಡಾಗ್ ಫೈಟ್ ಗೆ ತೆಗೆದುಕೊಂಡು ಹೋಗಬಾರದು.ನಾನು ಅವರೊಂದಿಗೆ ಚರ್ಚೆಗೆ ಸಿದ್ದ ಎಂದು ಪ್ರತಿದಾಳಿ ನಡೆಸಿದ್ದಾರೆ.

ಹೊಸಕೋಟೆ: ಇಂದು ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಹೊಸಕೋಟೆ ವಿಧಾನಸಭಾ ಉಪಚುನಾವಣಾ ಕಣ ರಣರಂಗದಂತಾಗಿದ್ದು, ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ನಡುವೆ ಬಿಗ್ ಫೈಟ್ ಶುರುವಾಗಿದೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್​​ಗೆ ಇಂದಿನ ಸುಪ್ರೀಂಕೋರ್ಟ್ ತೀರ್ಪು ವರದಾನವಾಗಿದ್ರೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಾಟಕ್ಕೆ ಬಿರುಸಿನ ಪ್ರಚಾರ ನಡೆಸುತ್ತಿದ್ದು, ನಾಳೆ ನಾಮಪತ್ರ ಸಲ್ಲಿಸುವ ದಿನಾಂಕ ಘೋಷಣೆ ಮಾಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಅವಕಾಶ ಇದ್ರೆ ಶರತ್ ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದು ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ.

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ

ಹೊಸಕೋಟೆ ಅನರ್ಹ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ, ತೀರ್ಪು ಸ್ವಾಗತಿಸುತ್ತೇವೆ. ಬಿಜೆಪಿ ಪಕ್ಷ ನನ್ನ ಬೆನ್ನಿಗೆ ನಿಲ್ಲುತ್ತದೆ ಎಂದ ಅವರು, ರಾಜಕಾರಣದಲ್ಲಿ ನಾವು ಸಾರ್ವಜನಿಕರ ಸೇವೆಗಾಗಿ ಬಂದಿದ್ದೇವೆ ಎನ್ನುತ್ತಿರುವ ಅಪ್ಪ - ಮಗನನ್ನು ಮಾಧ್ಯಮದ ಮುಂದೆ ಚರ್ಚೆಗೆ ಕರೆಯಿರಿ ನಾನೂ ಬರುತ್ತೇನೆ ಎಂದು ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡಗೆ ಸವಾಲ್ ಹಾಕಿದ್ದಾರೆ.

ನಂತರ ಮಾತನಾಡಿದ ಅವರು, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಪಕ್ಷಕ್ಕೆ ಸೇರ್ಪಡೆ ಬಗ್ಗೆ ನಾಯಕರ ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡು, ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿ ಮಾಡುತ್ತೇವೆ. ಹಾಗೆ ಹೊಸಕೋಟೆಯ ಗೊಂದಲಗಳನ್ನು ಬಿಜೆಪಿ ನಾಯಕರೇ ಸರಿಪಡಿಸುತ್ತಾರೆ ಎಂದರು.

ಇನ್ನು ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಮಾತನಾಡಿದ್ದು, ತಾಲೂಕಿನ ಜನ ಮತ್ತು ಕಾರ್ಯಕರ್ತರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ.ಇನ್ನು ಎಂಟಿಬಿ ನಾಗರಾಜ್ ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಅಪ್ಪ ಮಕ್ಕಳು ಚರ್ಚೆಗೆ ಬರೋ ಅವಶ್ಯಕತೆ ಇಲ್ಲ. ಅವರ ವಿರುದ್ಧ ಸ್ಪರ್ಧೆಗೆ ನಿಂತಿರುವುದು ನಾನು , ಬಚ್ಚೇಗೌಡರು ರಾಜ್ಯದ ದೊಡ್ಡ ಮಟ್ಟದ ನಾಯಕರು ಅಂತವರನ್ನು ಇಂತಹ ಲೋ ಲೆವೆಲ್ ಡಾಗ್ ಫೈಟ್ ಗೆ ತೆಗೆದುಕೊಂಡು ಹೋಗಬಾರದು.ನಾನು ಅವರೊಂದಿಗೆ ಚರ್ಚೆಗೆ ಸಿದ್ದ ಎಂದು ಪ್ರತಿದಾಳಿ ನಡೆಸಿದ್ದಾರೆ.

Intro:ಹೊಸಕೋಟೆ:

ಇಂದು ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ರಣರಂಗವಾದ ಹೊಸಕೋಟೆ ವಿಧಾನಸಭಾ ಉಪಚುನಾವಣಾ ಕಣ.


ಇಷ್ಟು ದಿನ ಅನರ್ಹ ಶಾಸಕರ ಭವಿಷ್ಯ ಏನಾಗುತ್ತೆ ಅನ್ನುವಂತಹ ಕೂತುಹಲಕ್ಕೆ ಇಂದು ಸುಪ್ರೀಂ ಕೋರ್ಟ್ ತೆರೆ ಎಲೆದಿದ್ದು ಅನರ್ಹ ಶಾಸಕರಿಗೆ ಬೀಗ್ ರೀಲಿಫ್ ನೀಡಿದೆ... ಅದರಲ್ಲೂ ಪ್ರಮುಖವಾಗಿ ಸಾಕಷ್ಟು ಕುತೂಹಲ ಮುಡಿಸಿದ್ದ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ವರದಾನವಾಗಿದ್ರೆ
....ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಟಕ್ಕೆ ಸಜ್ಜಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದು ನಾಳೆ ನಾಮಪತ್ರ ಸಲ್ಲಿಸುವ ದಿನಾಂಕ ಘೋಷಣೆ ಮಾಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಅವಕಾಶ ಇದ್ರೆ ಶರತ್ ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದು ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ....



ಒಂದೆಡೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪೂಲ್ ರಿಲ್ಯಾಕ್ಸ್ ಆಗಿರುವ ಎಂಟಿಬಿ ನಾಗರಾಜ್...ಇನ್ನೊಂದೆಡೆ ಸ್ವಾರ್ಥ ರಾಜಕಾರಣದ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಹೋರಾಟಕ್ಕೆ ಸಜ್ಜಾಗಿರುವ ಶರತ್ ಬಚ್ಚೇಗೌಡ.... ಹೌದು ಇಂದು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದ ಹೊಸಕೋಟೆ ಅನರ್ಹ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಮಾತನಾಡಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನೀರಿಕ್ಷೆ ಇರಲಿಲ್ಲ ಸುಪ್ರೀಂ ಕೋರ್ಟ್ನ ತೀರ್ಪುನ್ನು ಸ್ವಾಗತಿಸುತ್ತೇವೆ,ಬಿಜೆಪಿ ಪಕ್ಷ ನನ್ನ ಬೆನ್ನಿಗೆ ನಿಲ್ಲುತ್ತದೆ ಬಿಜೆಪಿ ನಾಯಕರ ಬಳಿ ಅಪ್ಪ ಮಗನೇ ನನಗೆ ಸೀಟ್ ಬಿಟ್ಟುಕೊಟ್ಟಿರುವ ಬಗ್ಗೆ ಮಾತನಾಡಿರುವುದು ನಾನು ಅವರ ಮುಖ ದರ್ಶನವೇ ಮಾಡಿಲ್ಲ.ಯಾರು ಅಧಿಕಾರಕ್ಕಾಗಿ ಸ್ವಾರ್ಥಿಯೆಂದು ಮಾಧ್ಯಮಗಳ ಅಪ್ಪ ಮಗ ಇಬ್ಬರು ಚರ್ಚೆಗೆ ಬರಲಿ ನಾನು ಬರುತ್ತೇನೆ ಎಂದು ಬಚ್ಚೇಗೌಡ ಹಾಗು ಪುತ್ರ ಶರತ್ ಬಚ್ಚೇಗೌಡಗೆ ಸವಾಲ್ ಹಾಕಿದ್ದು ನಂತರ ತೀರ್ಪುನ ಬಳಿಕ ಮಾತನಾಡಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಪಕ್ಷಕ್ಕೆ ಸೇರ್ಪಡೆ ಬಗ್ಗೆ ನಾಯಕರ ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡು ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಸುತ್ತೇವೆ ಹಾಗೆ ಹೊಸಕೋಟೆಯ ಗೊಂದಲಗಳನ್ನು ಬಿಜೆಪಿ ನಾಯಕರೇ ಸರಿಪಡಿಸುತ್ತಾರೆಂದರು.


Body:ಇನ್ನು ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಸುಪ್ರೀಂ ಕೋರ್ಟ್ ತೀರ್ಪಿನ ವರೆಗೂ ಬಿಜೆಪಿ ಟೆಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದು ಅವರಿಗೆ ನಿರಾಶೆಯಾಗಿದೆ.
ಇಂದು ಹೊಸಕೋಟೆಯ ಉಪ್ಪಾರಹಳ್ಳಿಯಲ್ಲಿ ಪ್ರಚಾರದ ಬಳಿಕ ಮಾತನಾಡಿ ಶರತ್ ಬಚ್ಚೇಗೌಡ ಇದುವರೆಗೂ ಬಿಜೆಪಿಯಿಂದ ರಾಜ್ಯ ಮಟ್ಟದ ನಾಯಕರು ಯಾರು ನಮ್ಮನ್ನು ಭೇಟಿಯಾಗಿಲ್ಲ ತಾಲ್ಲೂಕಿನ ಜನ ಮತ್ತು ಕಾರ್ಯಕರ್ತರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ.ಕುದುರೆ ವ್ಯಾಪಾರ ಪ್ರಜಾ ಪ್ದಭುತ್ವಕ್ಕೆ ಮಾರಕ,ಅದರ ವಿರುದ್ಧ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ನಮಗೆ ಪಕ್ಷದಿಂದ ಎಂಟಿಬಿ ನಾಗರಾಜ್ ಅಧಿಕೃತ ಅಭ್ಯರ್ಥಿ ಎಂದು ಮಾಹಿತಿ ಬಂದಿಲ್ಲ ಬಂದ ನಂತರ ನಮ್ಮ ತೀರ್ಮಾನ ಮತ್ತು ನಡೆಯನ್ನ ಆಯ್ಕೆ ಮಾಡಿಕೊಳ್ಖಿತ್ತೇವೆ.ಇನ್ನು ಎಂಟಿಬಿ ನಾಗರಾಜ್ ಚರ್ಚೆಗೆ ಆಹ್ವಾನ ಮಾಡಿದ್ದಾರೆ ಅಪ್ಪ ಮಕ್ಕಳು ಚರ್ಚೆಗೆ ಬರೋ ಅವಶ್ಯಕತೆ ಇಲ್ಲ ಸ್ಪರ್ಧೆ ಅವರ ಪರ ನಾನು ನಿಂತಿರುವುದು ಬಚ್ಚೇಗೌಡರು ರಾಜ್ಯದ ದೊಡ್ಡ ಮಟ್ಟದ ನಾಯಕರು ಅವರೆಲ್ಲ ಇಂತಹ ಲೋ ಲೆವೆಲ್ ಡಾಗ್ ಫೈಟ್ ಗೆ ತೆಗೆದುಕೊಂಡು ಹೋಗಬಾರದು.ನಾನು ಅವರೊಂದಿಗೆ ಚರ್ಚೆಗೆ ಸಿದ್ದ ಎಂದು ತಿಳಿಸಿದರು.


Conclusion: ಇಷ್ಟು ದಿನ ಸುಪ್ರೀಂ ಕೋರ್ಟ್ ತೀರ್ಪು ಬಾರದೆ ಗೊಂದಲದ ಗೂಡಾಗಿದ್ದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಪ್ರಮುಖವಾದ ಹೊಸಕೋಟೆ ಕ್ಷೇತ್ರಕ್ಕೆ ಅಭ್ಯರ್ಥಿಗಳು ಪಕ್ಕ ಆಗಿದ್ದು ಒಂದೆಡೆ ಬಂಡಾಯವಾಗಿ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೊಕೆ ರೆಡಿ ಆಗಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದು. ಇತ್ತ ಬಿಜೆಪಿಯಿಂದ ಎಂಟಿಬಿ ನಾಗರಾಜ್ ಗೆ ಟೆಕೆಟ್ ಪಕ್ಕ ಆಗಿದ್ದು ಹೊಸಕೋಟೆ ಉಪ ಚುನಾವಣಾಯಲ್ಲಿ ಈ ಭಾರಿ ಬಿಗ್ ಪೈಟ್ ನಡೆಯಲಿದ್ದು ಎಲ್ಲರ ಚಿತ್ತ ಹೊಸಕೋಟೆ ಯತ್ತ ತಿರುಗಿದೆ.



ಬೈಟ್: ಎಂಟಿಬಿ ನಾಗರಾಜ್

ಬೈಟ್: ಶರತ್ ಬಚ್ಚೇಗೌಡ.
Last Updated : Nov 14, 2019, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.