ETV Bharat / state

ನೆಪ ಹೇಳ್ಬೇಡಿ, ತಿಂಗಳೊಳಗೆ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಿ: ಶಾಸಕ ಚರಂತಿಮಠ

author img

By

Published : Oct 6, 2020, 12:39 PM IST

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಚರಂತಿಮಠ ಸೂಚಿಸಿದರು.

mla charanthi mutt visit
ನೀರಾವರಿ ಯೋಜನೆಗಳ ಪರಿಶೀಲನೆ

ಬಾಗಲಕೋಟೆ: ಹೆರಕಲ್ ಬಳಿಯ ಬಿಟಿಡಿಎ ವತಿಯಿಂದ ನಿರ್ಮಾಣವಾಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ, ನಗರಕ್ಕೆ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೂಚಿಸಿದರು.

ಜಾಕ್​​ವೆಲ್​​ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಶಾಸಕರು, ಜಾಕ್​ವೆಲ್​​ ನಿರ್ಮಾಣವಾಗಿ ಕೆಲ ವರ್ಷಗಳು ಕಳೆದಿವೆ. ಆದ್ರೆ ಇನ್ನೂ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುವುದನ್ನು ಬಿಡಬೇಕು. ತಕ್ಷಣ ನೀರಾವರಿ ಯೋಜನೆ ಪೂರ್ಣಗೊಳಿಸಬೇಕೆಂದು ತಿಳಿಸಿದ್ರು.

ಈ ವೇಳೆ ಬಿಟಿಡಿಎ ಎಂಜಿನಿಯರ್ ಅಶೋಕ್ ವಾಸನದ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ.ಹೆಚ್.ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

ಬಾಗಲಕೋಟೆ: ಹೆರಕಲ್ ಬಳಿಯ ಬಿಟಿಡಿಎ ವತಿಯಿಂದ ನಿರ್ಮಾಣವಾಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ, ನಗರಕ್ಕೆ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೂಚಿಸಿದರು.

ಜಾಕ್​​ವೆಲ್​​ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದ ಶಾಸಕರು, ಜಾಕ್​ವೆಲ್​​ ನಿರ್ಮಾಣವಾಗಿ ಕೆಲ ವರ್ಷಗಳು ಕಳೆದಿವೆ. ಆದ್ರೆ ಇನ್ನೂ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುವುದನ್ನು ಬಿಡಬೇಕು. ತಕ್ಷಣ ನೀರಾವರಿ ಯೋಜನೆ ಪೂರ್ಣಗೊಳಿಸಬೇಕೆಂದು ತಿಳಿಸಿದ್ರು.

ಈ ವೇಳೆ ಬಿಟಿಡಿಎ ಎಂಜಿನಿಯರ್ ಅಶೋಕ್ ವಾಸನದ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ.ಹೆಚ್.ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.