ETV Bharat / state

ಸಿದ್ದರಾಮಯ್ಯ ಕಣ್ಣು ಬಿಡುವ ಮುಂಚೆಯೇ ಮಲ್ಲಿಕಾರ್ಜುನ ಖರ್ಗೆ ರಾಜಕಾರಣದಲ್ಲಿದ್ದವರು: ಈಶ್ವರಪ್ಪ

author img

By ETV Bharat Karnataka Team

Published : Dec 22, 2023, 8:23 PM IST

ಇಂಡಿಯಾ ಒಕ್ಕೂಟಗಳು ಮುಂದಿನ ಪ್ರಧಾನಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಎಂದು ಹೇಳಿರುವ ಕುರಿತು ರಾಜ್ಯ ಕಾಂಗ್ರೆಸ್​ ನಾಯಕರು ಪ್ರತಿಕ್ರಿಯಿಸದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಬಾಗಲಕೋಟೆ: ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಕಣ್ಣು ಬಿಡುವ ಮುಂಚೆಯೇ ರಾಜಕಾರಣದಲ್ಲಿದ್ದವರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಾಗಲಕೋಟೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ, ಮಲ್ಲಿಕಾರ್ಜುನ ಖರ್ಗೆ ಪಿಎಂ ಅಭ್ಯರ್ಥಿ ಎಂಬ ಇಂಡಿಯಾ ಒಕ್ಕೂಟಗಳ ಹೇಳಿಕೆಯ ಬಗ್ಗೆ ಅವರು ಮಾತನಾಡಿದರು.

ದಲಿತ ನಾಯಕನ ಬಗ್ಗೆ ಮಾತನಾಡುವವರು ಖರ್ಗೆ ಅವರನ್ನು ಯಾಕೆ ಸಿಎಂ ಮಾಡಲಿಲ್ಲ?. ಜಗಜೀವನ್ ರಾಮ್ ಸಂದರ್ಭದಲ್ಲಿ ಯಾಕೆ ಅವಕಾಶ ಕೊಡಲಿಲ್ಲ?. ಕಾಂಗ್ರೆಸ್​ನವರಿಗೆ ಹಿಂದುಳಿದ ದಲಿತರು ದಾಳ. ಈಗ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆಂದು ಸೋಲುವ ಸಂದರ್ಭದಲ್ಲಿ ಖರ್ಗೆಯವರು ಪಿಎಂ ಅಭ್ಯರ್ಥಿ ಎಂದು ಹೇಳ ಹೊರಟಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಮಾತ್ರ ಖರ್ಗೆ ಅವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್​ನ ಒಬ್ಬ ನಾಯಕನೂ ಅವರ ಮಾತಿಗೆ ಬೆಂಬಲ ಕೊಡಲಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ಜೆಡಿಎಸ್ ನಾಯಕರಾದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನಂತರ ಮೋದಿಯವರನ್ನು ಪ್ರಧಾನಿ ಮಾಡಲು, ರಾಜ್ಯದ ತುಂಬೆಲ್ಲ ಓಡಾಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ನನ್ನ ಮಗ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲ ಹಿರಿಯರನ್ನು ವಿಶ್ವಾಸ ತೆಗೆದುಕೊಂಡು ಯಾವ ಗೊಂದಲವಿಲ್ಲದೇ 28ಕ್ಕೆ 28 ಸ್ಥಾನ ಗೆಲ್ಲುವ ಆಶೀರ್ವಾದ ಸಿಕ್ಕಿದೆ ಎಂದಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆ ನನಗೆ ಸಂತೋಷ ತಂದಿದ್ದು, ರಾಷ್ಟ್ರೀಯ ನಾಯಕರ ಭೇಟಿ ನಮಗೆ ಖುಷಿಯಾಗಿದೆ ಎಂದರು.

ಇದೇ ವೇಳೆ ಶಾಸಕರಾದ ಬಸನಗೌಡ ಪಾಟೀಲ್​ ಯತ್ನಾಳ್, ಅರವಿಂದ್​ ಬೆಲ್ಲದ್​ ಹಾಗು ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯತ್ನಾಳ್, ಸೋಮಣ್ಣ, ಅರವಿಂದ್ ಬೆಲ್ಲದ್ ಸೇರಿ ನಾಲ್ಕೈದು ಜನರಿಗೆ ಅಸಮಾಧಾನ ಇತ್ತು. ಆದರೆ ವಿಜಯೇಂದ್ರ ನಿನ್ನೆ ಎಲ್ಲ ನಾಯಕರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿರುವುದು ನಿಜಕ್ಕೂ ಒಳ್ಳೆಯದು. ಯತ್ನಾಳ್ ಆಗಲಿ ಸೋಮಣ್ಣರಾಗಲೀ, ಅವರು ವ್ಯಕ್ತಿಗಳ ಬಗ್ಗೆ ಸಣ್ಣಪುಟ್ಟ ಅಸಮಾಧಾನ ತೊಡಿಕೊಂಡಿದ್ದಾರೆ. ಅವರಿಗೆ ಪಕ್ಷದ ವಿರುದ್ಧ ಅಸಮಾಧಾನ‌ ಇಲ್ಲ ಎಂದಿರುವ ಈಶ್ವರಪ್ಪ, ಆ ಮೂವರು ನಾಯಕರೂ ನಮ್ಮವರೇ, ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ನುಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬಾಗಲಕೋಟೆ: ರಾಷ್ಟ್ರೀಯ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಕಣ್ಣು ಬಿಡುವ ಮುಂಚೆಯೇ ರಾಜಕಾರಣದಲ್ಲಿದ್ದವರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಾಗಲಕೋಟೆ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ, ಮಲ್ಲಿಕಾರ್ಜುನ ಖರ್ಗೆ ಪಿಎಂ ಅಭ್ಯರ್ಥಿ ಎಂಬ ಇಂಡಿಯಾ ಒಕ್ಕೂಟಗಳ ಹೇಳಿಕೆಯ ಬಗ್ಗೆ ಅವರು ಮಾತನಾಡಿದರು.

ದಲಿತ ನಾಯಕನ ಬಗ್ಗೆ ಮಾತನಾಡುವವರು ಖರ್ಗೆ ಅವರನ್ನು ಯಾಕೆ ಸಿಎಂ ಮಾಡಲಿಲ್ಲ?. ಜಗಜೀವನ್ ರಾಮ್ ಸಂದರ್ಭದಲ್ಲಿ ಯಾಕೆ ಅವಕಾಶ ಕೊಡಲಿಲ್ಲ?. ಕಾಂಗ್ರೆಸ್​ನವರಿಗೆ ಹಿಂದುಳಿದ ದಲಿತರು ದಾಳ. ಈಗ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆಂದು ಸೋಲುವ ಸಂದರ್ಭದಲ್ಲಿ ಖರ್ಗೆಯವರು ಪಿಎಂ ಅಭ್ಯರ್ಥಿ ಎಂದು ಹೇಳ ಹೊರಟಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಮಾತ್ರ ಖರ್ಗೆ ಅವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್​ನ ಒಬ್ಬ ನಾಯಕನೂ ಅವರ ಮಾತಿಗೆ ಬೆಂಬಲ ಕೊಡಲಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ಜೆಡಿಎಸ್ ನಾಯಕರಾದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನಂತರ ಮೋದಿಯವರನ್ನು ಪ್ರಧಾನಿ ಮಾಡಲು, ರಾಜ್ಯದ ತುಂಬೆಲ್ಲ ಓಡಾಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ನನ್ನ ಮಗ ಹಾಗೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲ ಹಿರಿಯರನ್ನು ವಿಶ್ವಾಸ ತೆಗೆದುಕೊಂಡು ಯಾವ ಗೊಂದಲವಿಲ್ಲದೇ 28ಕ್ಕೆ 28 ಸ್ಥಾನ ಗೆಲ್ಲುವ ಆಶೀರ್ವಾದ ಸಿಕ್ಕಿದೆ ಎಂದಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆ ನನಗೆ ಸಂತೋಷ ತಂದಿದ್ದು, ರಾಷ್ಟ್ರೀಯ ನಾಯಕರ ಭೇಟಿ ನಮಗೆ ಖುಷಿಯಾಗಿದೆ ಎಂದರು.

ಇದೇ ವೇಳೆ ಶಾಸಕರಾದ ಬಸನಗೌಡ ಪಾಟೀಲ್​ ಯತ್ನಾಳ್, ಅರವಿಂದ್​ ಬೆಲ್ಲದ್​ ಹಾಗು ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಯತ್ನಾಳ್, ಸೋಮಣ್ಣ, ಅರವಿಂದ್ ಬೆಲ್ಲದ್ ಸೇರಿ ನಾಲ್ಕೈದು ಜನರಿಗೆ ಅಸಮಾಧಾನ ಇತ್ತು. ಆದರೆ ವಿಜಯೇಂದ್ರ ನಿನ್ನೆ ಎಲ್ಲ ನಾಯಕರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿರುವುದು ನಿಜಕ್ಕೂ ಒಳ್ಳೆಯದು. ಯತ್ನಾಳ್ ಆಗಲಿ ಸೋಮಣ್ಣರಾಗಲೀ, ಅವರು ವ್ಯಕ್ತಿಗಳ ಬಗ್ಗೆ ಸಣ್ಣಪುಟ್ಟ ಅಸಮಾಧಾನ ತೊಡಿಕೊಂಡಿದ್ದಾರೆ. ಅವರಿಗೆ ಪಕ್ಷದ ವಿರುದ್ಧ ಅಸಮಾಧಾನ‌ ಇಲ್ಲ ಎಂದಿರುವ ಈಶ್ವರಪ್ಪ, ಆ ಮೂವರು ನಾಯಕರೂ ನಮ್ಮವರೇ, ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ನುಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.