ಬಾಗಲಕೋಟೆ :ಬಾದಾಮಿ ತಾಲೂಕಿನ ವಿವಿಧ ಪ್ರವಾಹ ಪೀಡಿತ ಗ್ರಾಮಗಳ ಪ್ರದೇಶಗಳಿಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಂದರೇಶ ಬಾಬು ಭೇಟಿ ನೀಡಿ ಹಾನಿಗೊಳಗಾದ ವಿದ್ಯುತ್ ಕಂಬ, ಟಿಸಿಗಳನ್ನು ಪರಿಶೀಲಿಸಿದರು.
ಶನಿವಾರ ಬಾದಾಮಿ ತಾಲೂಕಿನ ಚೊಳಚಗುಡ್ಡ, ಶಿವಯೋಗ ಮಂದಿರ, ನವಿಲುಹೊಳೆ, ಗೋನಾಲ ಹಾಗೂ ಮಂಗಳೂರು ನೆರೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಆಪ್ತ ಸಹಾಯಕ ಎಂ ಬಿ ಸುಣಗಾರ, ಬಾಗಲಕೋಟೆ ಕಾ ಮತ್ತು ಪಾ ವಿಭಾಗದ ಕಾರ್ಯನಿವಾಹಕ ಅಭಿಯಂತರ ಚಂದ್ರಶೇಖರ, ಗುಳೇದಗುಡ್ಡದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಕಲ್ಲಾಪೂರ, ಕೋನೇರಿ, ಮಹಾಂತೇಶ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.